ಲಕ್ಷ್ಮಣ ರೇಖೆ ದಾಟಿದ ಲಂಕೆ ದಹನವಾದಂತೆ ಪಾಕಿಸ್ತಾನದ ಉಗ್ರರ ಶಿಬಿರಗಳಿಗೂ ಬೆಂಕಿ ಬಿದ್ದಿತು: ಕಿರಣ್ ರಿಜಿಜು

ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು.
Union minister Kiran Rijiju
ಕೇಂದ್ರ ಸಚಿವ ಕಿರಣ್ ರಿಜಿಜು
Updated on

ನವದೆಹಲಿ: ಲಕ್ಷ್ಮಣ ರೇಖೆ ದಾಟಿದ ರಾವಣನ ಲಂಕೆಯ ದಹನವಾದಂತೆ ಭಾರತ ಎಳೆದ ಗೆರೆಯನ್ನು ಪಾಕಿಸ್ತಾನ ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೂ ಬೆಂಕಿ ಬಿದ್ದಿತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಸೋಮವಾರ ಹೇಳಿದ್ದಾರೆ.

ಲೋಕಸಭೆಯಲ್ಲಿಂದು ಭಾರತೀಯ ಸೇನೆ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ವಿಶೇಷ ಚರ್ಚೆ ನಡೆಯಲಿದ್ದು, ಸಭೆ ನಡೆಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಜ್ಜಾಗಿದ್ದಾರೆ.

ಈ ನಡುವೆ ‘ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಿದ್ದೇ ನಾನು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.

ಇದರ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಆ‍ಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ರಾಮಾಯಣದ ಲಂಕಾ ದಹನಕ್ಕೆ ಹೋಲಿಕೆ ಮಾಡಿದ್ದಾರೆ.

ಆ‍ಪರೇಷನ್‌ ಸಿಂಧೂರ ಕುರಿತ ಇಂದು ಚರ್ಚೆ ಆರಂಭವಾಗಲಿದೆ. ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು ಎಂದು ಬರೆದುಕೊಂಡಿದ್ದಾರೆ.

Union minister Kiran Rijiju
'ಆಪರೇಷನ್ ಸಿಂಧೂರ್': ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಚರ್ಚೆ ಆರಂಭ; ಆಡಳಿತ-ವಿಪಕ್ಷಗಳ ಮಧ್ಯೆ ನಡೆಯಬಹುದೇ ವಾಗ್ಯುದ್ಧ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com