ಮೊಂಡು ವಾದ ಬೇಡ: ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಸರ್ಕಾರ ತನ್ನ 'ಲೋಪ' ಮತ್ತು 'ವೈಫಲ್ಯ'ವನ್ನು ಒಪ್ಪಿಕೊಳ್ಳಲಿ- ಮಲ್ಲಿಕಾರ್ಜುನ ಖರ್ಗೆ

ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಎಲ್ಲಿದ್ದಾರೆ ಎಂದು ಕೇಂದ್ರವನ್ನು ಪ್ರಶ್ನಿಸಿದರು.
Mallikarjun Kharge
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಎಲ್ಲಿದ್ದಾರೆ ಎಂದು ಕೇಂದ್ರವನ್ನು ಪ್ರಶ್ನಿಸಿದರು. ಪಹಲ್ಗಾಮ್‌ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುರಿತಂತೆ ಮಾತು ಶುರು ಮಾಡಿದ ಅವರು, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಕೈಗೆ ಹಾಕಿಕೊಂಡಿದ್ದ ಮೆಹಂದಿ ಮಾಸುವ ಮುನ್ನವೇ ಕಣ್ಣೇದುರೆ ನವವಧು ಗಂಡನನ್ನು ಕಳೆದುಕೊಂಡಿದ್ದಳು. ತಂದೆಯನ್ನು ಕಳೆದುಕೊಂಡ ಮಕ್ಕಳು ಅಸಹಾಯಕರಾಗಿ ಅಳುತ್ತಿರುವುದು. ಪಹಲ್ಗಾಮ್ ಕಣಿವೆಯಲ್ಲಿ ನಮ್ಮ ಸ್ವಂತ ಜನರು ಸಾಯುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

ಪಹಲ್ಗಾಮ್‌ನಲ್ಲಿ ನಡೆದ ಬರ್ಬರ ದಾಳಿಯನ್ನು ಮತ್ತು ಭಯೋತ್ಪಾದಕರಿಗೆ ಪಾಕಿಸ್ತಾನ ನೀಡುತ್ತಿರುವ ನಿರಂತರ ಬೆಂಬಲವನ್ನು ಇಡೀ ದೇಶ ಮತ್ತು ಈ ಸದನದ ಜೊತೆಗೆ ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು. ನಾವು ಈ ಹಿಂದೆಯೂ ಪಾಕಿಸ್ತಾನವನ್ನು ಖಂಡಿಸಿದ್ದೇವೆ. ಇಂದು ಕೂಡ ಹಾಗೆಯೇ ಮಾಡುತ್ತೇವೆ. ಇದು ನಾಳೆಯೂ ಮುಂದುವರಿದರೆ. ನಾವು ಅದನ್ನು ಖಂಡಿಸುತ್ತಲೇ ಇರುತ್ತೇವೆ ಎಂದು ಅವರು ಹೇಳಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ನಾನು ಸಂಸತ್ತಿನ ವಿಶೇಷ ಅಧಿವೇಶನ ನಡೆಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದೆವು. ಆದರೆ ಆ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಖರ್ಗೆ ಹೇಳಿದರು. ನಮ್ಮ ಪತ್ರಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ಅವರು ವ್ಯಂಗ್ಯವಾಡಿದರು. ಅವರು ಅದನ್ನು ಓದುವುದೇ ಇಲ್ಲ. ಇಷ್ಟೊಂದು ದುರಹಂಕಾರವಿದ್ದರೆ, ಒಂದು ದಿನ ಜನರು ಖಂಡಿತವಾಗಿಯೂ ನಿಮ್ಮ ದುರಹಂಕಾರವನ್ನು ಮುರಿಯಲು ಬರುತ್ತಾರೆ. ಇದು ಸರಿಯಲ್ಲ. ನಿಮಗೆ ಒಂದು ಅಥವಾ ಎರಡು ವಾಕ್ಯಗಳನ್ನು ಬರೆಯಲು ಸಹ ಸಮಯವಿಲ್ಲ. ಜನರನ್ನು ಅಪ್ಪಿಕೊಳ್ಳಲು ನಿಮಗೆ ಸಮಯವಿದೆಯಾ ಎಂದು ಪ್ರಶ್ನಿಸಿದರು.

Mallikarjun Kharge
ನೆಹರೂ, ಇಂದಿರಾ ಗಾಂಧಿ, ನನ್ನ ತಾಯಿಯ ಕಣ್ಣೀರಿನ ಬಗ್ಗೆ ಮಾತನಾಡುತ್ತಾರೆ, ಆದರೆ...: ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ

ವಿರೋಧ ಪಕ್ಷದ ನಾಯಕರು ನಾವು ಸರ್ವಪಕ್ಷ ಸಭೆಗೆ ಹೋಗಿದ್ದೆವು. ಆದರೆ ನೀವು ಚುನಾವಣಾ ಪ್ರಚಾರಕ್ಕಾಗಿ ಬಿಹಾರಕ್ಕೆ ಹೋಗಿದ್ದೀರಿ. ಇದು ನಿಮ್ಮ ದೇಶಭಕ್ತಿಯೇ?... ಅವರು ಇಂದು ಸದನಕ್ಕೆ ಬಂದು ನಮ್ಮ ಮಾತನ್ನು ಕೇಳಬೇಕಿತ್ತು. ನಿಮಗೆ ಕೇಳುವ ಸಾಮರ್ಥ್ಯವಿಲ್ಲದಿದ್ದರೆ, ನೀವು ಆ ಸ್ಥಾನದಲ್ಲಿರಲು ಅರ್ಹರಲ್ಲ. 2016ರಲ್ಲಿ ಉರಿ ಮತ್ತು ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗಳು, 2019ರಲ್ಲಿ ಪುಲ್ವಾಮಾ ಮತ್ತು ಈಗ 2025 ರಲ್ಲಿ ಪಹಲ್ಗಾಮ್ ದಾಳಿಗಳು ಎಂದು ಅವರು ಹೇಳಿದರು. ಈ ಎಲ್ಲಾ ಘಟನೆಗಳು ಗುಪ್ತಚರ ವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ನಿರಂತರ ಲೋಪಗಳಿವೆ ಎಂದು ಸ್ಪಷ್ಟವಾಗಿ ತೋರಿಸುತ್ತವೆ. ಇದಕ್ಕೆ ಕಾರಣರಾದ ಗೃಹ ಸಚಿವರನ್ನು ನಾನು ಕೇಳಲು ಬಯಸುತ್ತೇನೆ?... ಈ ತಪ್ಪನ್ನು ಸರಿಪಡಿಸಲು ನೀವು ಏನು ಮಾಡಿದ್ದೀರಿ? ಇದಕ್ಕೆ ಕಾರಣರಾದ ಗೃಹ ಸಚಿವರನ್ನು ನಾನು ಕೇಳಲು ಬಯಸುತ್ತೇನೆ? ನೀವು ಜವಾಬ್ದಾರರಾಗಿದ್ದರೆ ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ. ಇಲ್ಲದಿದ್ದರೆ, ಪ್ರಧಾನಿ ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.

Mallikarjun Kharge
Pak ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ: ಲೋಕಸಭೆಯಲ್ಲಿ Congress ಸಂಸದ ಗೊಗೊಯ್ ಹೇಳಿಕೆಗೆ ಸಿಎಂ ಹಿಮಂತ ಶರ್ಮಾ ಆಕ್ರೋಶ!

ಪಹಲ್ಗಾಮ್ ದಾಳಿಗೆ ಮೂರು ದಿನಗಳ ಮೊದಲು ಪ್ರಧಾನಿ ಮೋದಿ ಅವರು, ತಮ್ಮ ಜಮ್ಮು ಕಾಶ್ಮೀರದ ಭೇಟಿಯನ್ನು ರದ್ದುಗೊಳಿಸಿದ್ದರು ಎಂದು ಖರ್ಗೆ ಹೇಳಿದರು. ಇದಕ್ಕೆ ನಾನು ಮೊದಲೇ ಉತ್ತರವನ್ನು ಕೇಳಿದ್ದೆ, ಆದರೆ ಯಾವುದೇ ಉತ್ತರ ಸಿಗಲಿಲ್ಲ. ಸರ್ಕಾರಕ್ಕೆ ದಾಳಿಯ ಬಗ್ಗೆ ಈ ಮೊದಲೇ ಅನುಮಾನ ಇತ್ತೇ ಎಂದು ನಾನು ಇಂದಿಗೂ ಕೇಳುತ್ತಿದ್ದೇನೆ? ಹೌದು ಎಂದಾದರೆ, ಪ್ರವಾಸಿಗರಿಗೆ ಅಲ್ಲಿಗೆ ಹೋಗಲು ನೀವು ಏಕೆ ಅವಕಾಶ ನೀಡಿದ್ದೀರಿ? ಭಯೋತ್ಪಾದಕ ದಾಳಿಯನ್ನು ತಡೆಗಟ್ಟುವಲ್ಲಿನ 'ಲೋಪ' ಮತ್ತು 'ವೈಫಲ್ಯ'ವನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಹೊಣೆಗಾರಿಕೆಯನ್ನು ಸರಿಪಡಿಸಬೇಕು ಮತ್ತು ಪಹಲ್ಗಾಮ್ ದಾಳಿಗೆ ಕಾರಣರಾದವರು ಯಾರೇ ಆಗಿರಲಿ, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com