ಪಾಕ್ ಸೇನೆ
ಪಾಕ್ ಸೇನೆ

ಭಾರತದೊಳಗೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನದ ISI ಡ್ರೋನ್ ತಂತ್ರಜ್ಞಾನ ಬಳಸುತ್ತಿದೆ: ಇಂಟೆಲ್ ವರದಿ

ಡ್ರೋನ್ ತಂತ್ರಜ್ಞಾನವನ್ನು ಬಳಸಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಜಮ್ಮು ಮತ್ತು ಕಾಶ್ಮೀರದೊಳಕ್ಕೆ ಭಯೋತ್ಪಾದಕರನ್ನು ಒಳನುಸುಳಿಸುವ ಪ್ರಯತ್ನಗಳನ್ನು ಪಾಕಿಸ್ತಾನದ ಬಾಹ್ಯ ಗುಪ್ತಚರ ಸಂಸ್ಥೆ (ISI) ತೀವ್ರಗೊಳಿಸಿದೆ.
Published on

ನವದೆಹಲಿ: ಡ್ರೋನ್ ತಂತ್ರಜ್ಞಾನವನ್ನು ಬಳಸಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಜಮ್ಮು ಮತ್ತು ಕಾಶ್ಮೀರದೊಳಕ್ಕೆ ಭಯೋತ್ಪಾದಕರನ್ನು ಒಳನುಸುಳಿಸುವ ಪ್ರಯತ್ನಗಳನ್ನು ಪಾಕಿಸ್ತಾನದ ಬಾಹ್ಯ ಗುಪ್ತಚರ ಸಂಸ್ಥೆ (ISI) ತೀವ್ರಗೊಳಿಸಿದೆ. ಭಯೋತ್ಪಾದಕರು ಒಳನುಸುಳುವಿಕೆ ಪ್ರಯತ್ನಗಳಿಗೂ ಮುನ್ನ ನಿಖರವಾದ ಕಣ್ಗಾವಲು ಮತ್ತು ನೈಜ-ಸಮಯದ ಪರಿಸ್ಥಿತಿ ಮೌಲ್ಯಮಾಪನಕ್ಕಾಗಿ ಈ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಗುಪ್ತಚರ ಬ್ಯೂರೋ (ಐಬಿ) ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.

ಮೂಲಗಳ ಪ್ರಕಾರ, ಎಲ್‌ಒಸಿಯ ಉದ್ದಕ್ಕೂ ಭಯೋತ್ಪಾದಕ ಚಲನವಲನಗಳ ಕುರಿತು ಐಬಿ ತನ್ನ ಸಂಶೋಧನೆಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ಸಲ್ಲಿಸಿದೆ. ಭಾರತೀಯ ಭದ್ರತಾ ಪಡೆಗಳ ಚಲನವಲನ ಮತ್ತು ನಿಯೋಜನೆಯನ್ನು ಪತ್ತೆಹಚ್ಚುವುದು, ಗಡಿ ಗಸ್ತು ಮಾರ್ಗಗಳಲ್ಲಿನ ದುರ್ಬಲತೆಗಳನ್ನು ಗುರುತಿಸುವುದು. ಭೂಪ್ರದೇಶದ ಪರಿಸ್ಥಿತಿಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸುವ ಐಎಸ್‌ಐನ ಕಾರ್ಯತಂತ್ರವನ್ನು ವರದಿಯು ಎತ್ತಿ ತೋರಿಸುತ್ತದೆ. ಭಾರತೀಯ ಸೇನೆಯಿಂದ ಭಯೋತ್ಪಾದಕರು ಸುರಕ್ಷಿತವಾಗಿ ಭಾರತದೊಳಕ್ಕೆ ನುಸುಳಿಸಲು ಸಹಾಯ ಮಾಡುವ ಗುರಿಯನ್ನು ಈ ಪ್ರಯತ್ನಗಳು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಮೇ 14ರಂದು, ಪಾಕಿಸ್ತಾನದ ಐಎಸ್ಐ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ವಿವಿಧ ಲಷ್ಕರ್-ಎ-ತೈಬಾ (LeT) ತರಬೇತಿ ಶಿಬಿರದ ಕಮಾಂಡರ್‌ಗಳು ಮತ್ತು ಮಾರ್ಗದರ್ಶಕರೊಂದಿಗೆ ಸಭೆ ನಡೆಸಿದೆ ಎಂದು ವಿಶ್ವಾಸಾರ್ಹ ಮಾಹಿತಿಯು ಬಹಿರಂಗಪಡಿಸಿದೆ" ಎಂದು ಐಬಿ ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಎಲ್ಇಟಿ ಗುಂಪಿಗೆ ನೇಮಕಾತಿ ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಒಳನುಸುಳುವಿಕೆ ಪ್ರಯತ್ನಗಳಿಗೂ ಮೊದಲು ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಒಸಿ ಉದ್ದಕ್ಕೂ ಡ್ರೋನ್ ಕಣ್ಗಾವಲನ್ನು ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.

ಪಿಒಕೆ ಒಳಗೆ ತರಬೇತಿ ಶಿಬಿರಗಳು ಮತ್ತು ಉಡಾವಣಾ ಪ್ಯಾಡ್‌ಗಳನ್ನು ಸ್ಥಳಾಂತರಿಸುವುದು ಹಾಗೂ ಭಾರತದೊಂದಿಗೆ ಸಂಭಾವ್ಯ ಸಶಸ್ತ್ರ ಸಂಘರ್ಷಕ್ಕೆ ಸಿದ್ಧತೆಗಾಗಿ ಭೂಗತ ಬಂಕರ್‌ಗಳನ್ನು ನಿರ್ಮಿಸುವ ಬಗ್ಗೆ ಅದೇ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿಗಳನ್ನು ವರದಿಯು ಹೈಲೈಟ್ ಮಾಡಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಎಲ್ಒಸಿ ಉದ್ದಕ್ಕೂ ಪಿಒಕೆಯಲ್ಲಿ ಹಲವಾರು ಭಯೋತ್ಪಾದಕ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿತ್ತು. ಐಎಸ್ಐ ಈಗ ಈ ಸೌಲಭ್ಯಗಳನ್ನು ಈ ಪ್ರದೇಶದ ಹೊಸ ಸ್ಥಳಗಳಲ್ಲಿ ಪುನರುತ್ಥಾನಗೊಳಿಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್ ಸೇನೆ
ಭಾರತದ ವಾಯುನೆಲೆ ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ, ಜಗತ್ತಿನ ಮುಂದೆ ಪಾಕಿಸ್ತಾನ ಬಟಾ ಬಯಲು!

ಐಎಸ್ಐ ಭಯೋತ್ಪಾದಕ ಸಂಘಟನೆಗಳಿಗೆ ಗಡಿ ಪ್ರದೇಶಗಳಲ್ಲಿನ ನಾಗರಿಕ ನಿವಾಸಿಗಳಿಗೆ ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡುವಂತೆ ಸೂಚಿಸಿದೆ. ಒಳನುಸುಳುವಿಕೆ ಮಾರ್ಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಕ್ರಿಯ ಮಾರ್ಗದರ್ಶಿಗಳನ್ನು ಪಿಒಕೆ ಅಥವಾ ಪಾಕಿಸ್ತಾನದ ಸ್ಥಳೀಯ ನಿವಾಸಿಗಳೊಂದಿಗೆ ಬದಲಾಯಿಸುವ ಯೋಜನೆಗಳನ್ನು ಸಹ ಇದು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಮುಂದಿನ ದಿನಗಳಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಐಎಸ್‌ಐ-ಭಯೋತ್ಪಾದನಾ ಸಂಘಟನೆಯ ಸಭೆಯಲ್ಲಿ ಚರ್ಚಿಸಲಾದ ವಿವರವಾದ ಯೋಜನೆಯನ್ನು ವರದಿಯು ಉಲ್ಲೇಖಿಸುತ್ತದೆ. ಇದರಲ್ಲಿ ಕಾಶ್ಮೀರದೊಳಗೆ ಓವರ್‌ಗ್ರೌಂಡ್ ವರ್ಕರ್ (OGW) ನೆಟ್‌ವರ್ಕ್‌ಗಳ ಪುನರುಜ್ಜೀವನ ಮತ್ತು ಸಕ್ರಿಯಗೊಳಿಸುವಿಕೆ ಸೇರಿದೆ.

X
Open in App

Advertisement

X
Kannada Prabha
www.kannadaprabha.com