ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಪಾಕ್ ನ ಹಿಂದೂ ದಂಪತಿ ಥಾರ್ ಮರುಭೂಮಿಯಲ್ಲಿ ನೀರು ಸಿಗದೆ ಸಾವು!

ಇತ್ತೀಚೆಗೆ ಭಾರತ-ಪಾಕಿಸ್ತಾನ ಗಡಿ ದಾಟಿದ ಪಾಕಿಸ್ತಾನಿ ದಂಪತಿಗಳಾದ ರವಿ ಕುಮಾರ್ (17) ಮತ್ತು ಶಾಂತಿ ಬಾಯಿ (15) ಬಾಯಾರಿಕೆ ಮತ್ತು ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ತಿಳಿಸಿದ್ದಾರೆ.
Shanti Bai-Ravi Kumar
ಶಾಂತಿ ಬಾಯಿ-ರವಿ ಕುಮಾರ್
Updated on

ಜೈಸಲ್ಮೇರ್: ಇತ್ತೀಚೆಗೆ ಭಾರತ-ಪಾಕಿಸ್ತಾನ ಗಡಿ ದಾಟಿದ ಪಾಕಿಸ್ತಾನಿ ದಂಪತಿಗಳಾದ ರವಿ ಕುಮಾರ್ (17) ಮತ್ತು ಶಾಂತಿ ಬಾಯಿ (15) ಬಾಯಾರಿಕೆ ಮತ್ತು ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ತಿಳಿಸಿದ್ದಾರೆ. ಅವರ ಶವಗಳು ಥಾರ್ ಮರುಭೂಮಿಯಲ್ಲಿ ಪತ್ತೆಯಾಗಿವೆ. ದೃಶ್ಯದ ಫೋಟೋದಲ್ಲಿ ರವಿ ಅವರ ಮುಖದ ಮೇಲೆ ಖಾಲಿ ಜೆರಿಕ್ಯಾನ್ ಇರಿಸಲಾಗಿದ್ದು, ಇದು ಅವರ ಸಾವಿಗೆ ಮುನ್ನ ಅವರ ಸಂಕಟವನ್ನು ಸೂಚಿಸುತ್ತದೆ.

ರವಿ ಮತ್ತು ಶಾಂತಿ ನಾಲ್ಕು ತಿಂಗಳ ಹಿಂದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಮಿರ್ಪುರ್ ಮಥೆಲೊದಲ್ಲಿ ವಿವಾಹವಾಗಿದ್ದರು. ಅವರು ಸುರಕ್ಷಿತ ಮತ್ತು ಉತ್ತಮ ಜೀವನವನ್ನು ನಿರೀಕ್ಷಿಸಿ ಭಾರತಕ್ಕೆ ಬರಲು ನಿರ್ಧರಿಸಿದ್ದು ಇದಕ್ಕಾಗಿ ಅವರು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟ ಕಾರಣ, ಅವರ ವೀಸಾ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಆದಾಗ್ಯೂ, ಭಾರತಕ್ಕೆ ಹೋಗಲಬೇಕು ಎಂದು ನಿರ್ಧರಿಸಿದ್ದ ಅವರು ಅಕ್ರಮವಾಗಿ ಗಡಿ ದಾಟಿ ಬಂದಿದ್ದರು.

ಪೋಷಕರ ವಿರೋಧದ ಹೊರತಾಗಿಯೂ ರವಿ ಮತ್ತು ಶಾಂತಿ ಒಂದು ವಾರದ ಹಿಂದೆ ಗಡಿ ದಾಟಿದರು. ಆದರೆ ಅವರು ಭಿಭಿಯಾ ಮರುಭೂಮಿಯಲ್ಲಿ ದಾರಿ ತಪ್ಪಿ ನೀರಿನ ಕೊರತೆಯಿಂದ ಸಾವನ್ನಪ್ಪಿದರು. ಪಾಕಿಸ್ತಾನದಿಂದ ತರಲಾದ ನೀರಿನ ಖಾಲಿ ಜೆರಿಕ್ಯಾನ್ ಅವರ ಬಳಿ ಪತ್ತೆಯಾಗಿದೆ. ಭಾನುವಾರ, ವೈದ್ಯಕೀಯ ಮಂಡಳಿಯು ಅವರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿತು.

ಹಿಂದೂ ಪಾಕಿಸ್ತಾನಿ ನಿರಾಶ್ರಿತ ಒಕ್ಕೂಟ ಮತ್ತು ಗಡಿ ಜನರ ಸಂಘಟನೆಯ ಜಿಲ್ಲಾ ಸಂಯೋಜಕ ದಿಲೀಪ್ ಸಿಂಗ್ ಸೋಧಾ, ಭಾರತ ಸರ್ಕಾರ ಶವಗಳನ್ನು ಹಿಂದಿರುಗಿಸಿದರೆ, ಜೈಸಲ್ಮೇರ್‌ನಲ್ಲಿರುವ ಅವರ ಸಂಬಂಧಿಕರು ಅವುಗಳನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಹೇಳಿದರು. ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, ಸಂಬಂಧಿಕರು ಹಿಂದೂ ಪದ್ಧತಿಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲು ಸಿದ್ಧರಿದ್ದಾರೆ.

Shanti Bai-Ravi Kumar
ಕ್ಷುಲ್ಲಕ ವಿಚಾರಕ್ಕೆ Hindu ಧರ್ಮದ ಅವಹೇಳನ: ಮುಸ್ಲಿಂ ವ್ಯಕ್ತಿಯ ಹೆಡೆಮುರಿ ಕಟ್ಟಿದ Hyderabad police, 'ಹ್ಯಾಟ್ಸ್ ಆಫ್' ಎಂದ Raja Singh

ಶವಗಳೊಂದಿಗೆ ಪಾಕಿಸ್ತಾನಿ ರಾಷ್ಟ್ರೀಯ ಗುರುತಿನ ಚೀಟಿಗಳು ಪತ್ತೆಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಇದು ಭದ್ರತಾ ಕಳವಳವನ್ನು ಹುಟ್ಟುಹಾಕಿದೆ. ಈ ಘಟನೆಯು ಗಡಿಯಾಚೆಯಿಂದ ಒಳನುಸುಳುವಿಕೆ ಅಥವಾ ಇತರ ಅಪರಾಧ ಚಟುವಟಿಕೆಗಳನ್ನು ಸೂಚಿಸುತ್ತದೆ. ಪೊಲೀಸರು ಮತ್ತು ವಿವಿಧ ಭದ್ರತಾ ಸಂಸ್ಥೆಗಳು ಇದನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com