''TMC ಮುಸ್ಲಿಂ ಶಾಸಕರ ಹೊರದಬ್ಬುತ್ತೇವೆ...": Suvendu ಹೇಳಿಕೆಗೆ ಮಮತಾ ಬ್ಯಾನರ್ಜಿ ಆಕ್ರೋಶ; 'ನಕಲಿ ಹಿಂದೂ ಧರ್ಮ' ಅಳವಡಿಕೆ ಬೇಡ..

ರಾಜ್ಯದಲ್ಲಿ ಬಿಜೆಪಿ ‘ನಕಲಿ ಹಿಂದೂ ಧರ್ಮ’ವನ್ನು ಆಮದು ಮಾಡಿಕೊಳ್ಳುತ್ತಿದೆ. ಹಿಂದೂ ಧರ್ಮವನ್ನು ರಕ್ಷಿಸುವ ಹಕ್ಕು ನನಗಿದೆ, ಆದರೆ ನೀವು ಅನುಸರಿಸುತ್ತಿರುವ ಆವೃತ್ತಿಯ ಹಿಂದೂ ಧರ್ಮವಲ್ಲ...
Mamata Banerjee
ಮಮತಾ ಬ್ಯಾನರ್ಜಿ
Updated on

ಕೋಲ್ಕತಾ: ಪಶ್ಚಿ ಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿಯ ಮುಸ್ಲಿಂ ಶಾಸಕರನ್ನು ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಹೊರಹಾಕಲಾಗುವುದು ಎಂಬ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಮಮತಾ ಬ್ಯಾನರ್ಜಿ 'ನಕಲಿ ಹಿಂದೂ ಧರ್ಮ' ಅಳವಡಿಕೆ ಬೇಡ ಎಂದು ಕಿಡಿಕಾರಿದ್ದಾರೆ.

ಬಂಗಾಳ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸಿಎಂ ಮಮತಾ ಬ್ಯಾನರ್ಜಿ, 'ರಾಜ್ಯದಲ್ಲಿ ಬಿಜೆಪಿ ‘ನಕಲಿ ಹಿಂದೂ ಧರ್ಮ’ವನ್ನು ಆಮದು ಮಾಡಿಕೊಳ್ಳುತ್ತಿದೆ. ಹಿಂದೂ ಧರ್ಮವನ್ನು ರಕ್ಷಿಸುವ ಹಕ್ಕು ನನಗಿದೆ, ಆದರೆ ನೀವು ಅನುಸರಿಸುತ್ತಿರುವ ಆವೃತ್ತಿಯ ಹಿಂದೂ ಧರ್ಮವಲ್ಲ. ಹಿಂದೂ ಕಾರ್ಡ್ ಪ್ಲೇ ಮಾಡಬೇಡಿ ಎಂದು ಹೇಳಿದ್ದಾರೆ.

ಅಂತೆಯೇ, 'ಕೇಸರಿ ಪಕ್ಷವು ರಾಜ್ಯಕ್ಕೆ “ನಕಲಿ ಹಿಂದೂ ಧರ್ಮ”ವನ್ನು ಆಮದು ಮಾಡಿಕೊಳ್ಳುತ್ತಿದೆ. ಬಿಜೆಪಿ ನಾಗರಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ನಿಮ್ಮ ಆಮದು ಮಾಡಿಕೊಂಡ ಹಿಂದೂ ಧರ್ಮವನ್ನು ವೇದಗಳು ಅಥವಾ ನಮ್ಮ ಋಷಿಗಳು ಕೂಡ ಬೆಂಬಲಿಸುವುದಿಲ್ಲ. ನಾಗರಿಕರಾಗಿ ಮುಸ್ಲಿಮರ ಹಕ್ಕುಗಳನ್ನು ನೀವು ಹೇಗೆ ನಿರಾಕರಿಸಬಹುದು? ಇದು ವಂಚನೆಯಲ್ಲದೆ ಬೇರೇನೂ ಅಲ್ಲ. ನೀವು ನಕಲಿ ಹಿಂದೂ ಧರ್ಮವನ್ನು ಆಮದು ಮಾಡಿಕೊಳ್ಳುತ್ತಿದ್ದೀರಿ ಎಂದು ಕಿಡಿಕಾರಿದರು.

Mamata Banerjee
ಬಿಟ್ಟುಬಿಡೋ ಮಾತೇ ಇಲ್ಲ: ಸಂಭಾಲ್ ಇತಿಹಾಸ ಇಸ್ಲಾಂಗಿಂತ ಹಿಂದಿನದು, ಅಲ್ಲಿ ವಿಷ್ಣು ದೇವಾಲಯ ಕೆಡವಲಾಗಿತ್ತು- ಯೋಗಿ ಆದಿತ್ಯನಾಥ್

ಹಿಂದೂ ಜನಸಂಖ್ಯೆಯಿಂದ ಟಿಎಂಸಿ ಅಧಿಕಾರದಿಂದ ಹೊರಹಾಕಲ್ಪಡುತ್ತದೆ ಎಂಬ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದರು. 'ನಿಮ್ಮ ನಾಯಕರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೆ, ಸದನದ ಹೊರಗೆ ನಮ್ಮ ನಾಯಕರ ಹೇಳಿಕೆಗಳ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸಬಹುದು? ನಮ್ಮ ನಂಬಿಕೆಗಳನ್ನು ಸಮರ್ಥಿಸಿಕೊಳ್ಳುವ ಹಕ್ಕು ನಮಗಿದೆ.

ಅಂತೆಯೇ ಫಿರ್ಹಾದ್ ಹಕೀಮ್, ಹುಮಾಯೂನ್ ಕಬೀರ್ ಮತ್ತು ಮದನ್ ಮಿತ್ರ ಸೇರಿದಂತೆ ಟಿಎಂಸಿ ತನ್ನ ಕೆಲವು ಸದಸ್ಯರಿಗೆ ಅನುಚಿತವೆಂದು ಪರಿಗಣಿಸಬಹುದಾದ ಹೇಳಿಕೆಗಳನ್ನು ನೀಡದಂತೆ ಸಲಹೆ ನೀಡಿದೆ. ಆದರೆ ಇದು ನಮ್ಮ ಪಕ್ಷದ ಆಂತರಿಕ ವಿಷಯ ಎಂದೂ ಮಮತಾ ಬ್ಯಾನರ್ಜಿ ಹೇಳಿದರು.

ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ಬಿಜೆಪಿಯ ಬಗ್ಗೆಯೂ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದು, 'ನಾವು ಜಾತ್ಯತೀತ, ಬಹುತ್ವವಾದಿ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಆಚರಿಸುವ ಹಕ್ಕಿದೆ. ಅಲ್ಪಸಂಖ್ಯಾತರನ್ನು ರಕ್ಷಿಸುವುದು ಬಹುಸಂಖ್ಯಾತರ ಕರ್ತವ್ಯ.

ನಾವು ನಮ್ಮ ದೇಶದ ಸಾರ್ವಭೌಮತ್ವ ಮತ್ತು ಜಾತ್ಯತೀತತೆಯನ್ನು ರಕ್ಷಿಸಬೇಕು. ಟಿಎಂಸಿ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ನಾನು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇನೆ ಮತ್ತು ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಹರಡಲು ಯಾವುದೇ ರಾಜಕೀಯ ಪಕ್ಷ ಮಾಡುವ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ ಎಂದು ಹೇಳುವ ಮೂಲಕ ಜಾತ್ಯತೀತತೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

Mamata Banerjee
Haryana Local Polls: ಕಾಂಗ್ರೆಸ್ ತೀವ್ರ ಮುಖಭಂಗ; BJP ಕ್ಲೀನ್ ಸ್ವೀಪ್, 10 ರಲ್ಲಿ 9 ಸ್ಥಾನ ಗೆಲುವು!

"ಬಿಜೆಪಿ ಸದನದಲ್ಲಿ ಗದ್ದಲವನ್ನು ಸೃಷ್ಟಿಸಲು ಯೋಜಿಸಿತ್ತು. ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು ಮತ್ತು ಪ್ರತಿಭಟನೆಯ ಕ್ರಮವಾಗಿ ಕಾಗದಪತ್ರಗಳನ್ನು ಹರಿದು ಹಾಕಿದರು. ಶಾಸಕಾಂಗ ಪ್ರಕ್ರಿಯೆಗೆ ಗೌರವ ನೀಡಬೇಕು. ಸದಸ್ಯರು ಪರಸ್ಪರ ಆಲಿಸಬೇಕು ಮತ್ತು ಸದನದ ಘನತೆಯನ್ನು ಎತ್ತಿಹಿಡಿಯಬೇಕು.

ಈ ಸದನ ಎಲ್ಲರಿಗೂ ಸೇರಿದ್ದು. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಪರಸ್ಪರ ಗೌರವವು ಕಲಾಪಗಳನ್ನು ಮಾರ್ಗದರ್ಶಿಸಬೇಕು. ಜನಸಂಖ್ಯೆಯ ಶೇಕಡಾ 23 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದವರು ಮತ್ತು ಶೇಕಡಾ 33 ರಷ್ಟು ಮುಸ್ಲಿಮರಾಗಿದ್ದಾರೆ. ನಾವು ಎಲ್ಲಾ ಸಮುದಾಯಗಳನ್ನು ರಕ್ಷಿಸಬೇಕು. ಮಾನವೀಯ ಮೌಲ್ಯಗಳು ಧಾರ್ಮಿಕ ಗಡಿಗಳನ್ನು ಮೀರಿವೆ ಎಂದು ಹೇಳಿದರು.

ಬಿಜೆಪಿ ಅಧಿಕಾರ ವಹಿಸಿಕೊಂಡರೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ "ಹೊರಹಾಕಲಾಗುತ್ತದೆ" ಎಂಬ ಸುವೇಂದು ಅಧಿಕಾರಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com