'ಅಲ್ಪಸಂಖ್ಯಾತರಿಗೆ ಸಮಸ್ಯೆಯಾದರೆ ಸಂವಿಧಾನ ಬದಲಿಸುತ್ತಾರೆಯೇ?.. ಪ್ರಾಣ ನೀಡುತ್ತೇನೆ ಆದರೆ...': BJP ವಿರುದ್ಧ ಮಮತಾ ಬ್ಯಾನರ್ಜಿ ಕಿಡಿ

ಕಳೆದ (2024) ಲೋಕಸಭಾ ಚುನಾವಣೆಯಲ್ಲಿ, ನಾವು ಒಟ್ಟಾಗಿ ಬಿಜೆಪಿಯ ನಡೆಯನ್ನು ವಿರೋಧಿಸಿದ್ದೇವೆ.
Mamata Banerjee calls for unity
ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಅಲ್ಪಸಂಖ್ಯಾತರ ಬಗ್ಗೆ ಸಮಸ್ಯೆಯಾದರೆ, ಬಿಜೆಪಿ ನಾಯಕರು ದೇಶದ ಸಂವಿಧಾನವನ್ನು ಬದಲಾಯಿಸುತ್ತಾರೆಯೇ? ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಶ್ನಿಸಿದ್ದಾರೆ.

ಕೋಲ್ಕತಾದ ರೆಡ್ ರೋಡ್‌ನಲ್ಲಿ ಈದ್ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, 'ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲಾಗುತ್ತಿದೆ. ಆದರೆ ದಯವಿಟ್ಟು ಯಾರೂ ಇವರ ಈ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ' ಎಂದು ಜನರಲ್ಲಿ ಮನವಿ ಮಾಡಿದರು. ಅಲ್ಲದೆ ಬಂಗಾಳ ಸರ್ಕಾರ ಅಲ್ಪಸಂಖ್ಯಾತರ ಪರವಾಗಿ ನಿಂತಿದೆ. ರಾಜ್ಯದಲ್ಲಿ ಯಾರೂ ಉದ್ವಿಗ್ನತೆಯನ್ನು ಉಂಟುಮಾಡಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಇದೇ ವೇಳೆ ಎಲ್ಲಾ ಧರ್ಮಗಳನ್ನು ಗೌರವಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, 'ಜನರನ್ನು ವಿಭಜಿಸುವ ಗುರಿಯನ್ನು ಹೊಂದಿರುವ ಬಿಜೆಪಿ 'ಜುಮ್ಲಾ ರಾಜಕೀಯ' ಮಾಡುತ್ತಿದೆ. ಅಲ್ಲದೇ ಬಿಜೆಪಿಯ ಈ ವಿಭಜಕ ರಾಜಕೀಯಕ್ಕೆ ತಮ್ಮ ವಿರೋಧವನ್ನು ಪುನರುಚ್ಚರಿಸಿದ್ದಾರೆ.

'ಹಿಂದೂಗಳು ಅಪಾಯದಲ್ಲಿದ್ದಾರೆ' ಎಂದು ಬಿಜೆಪಿ ಹೇಳುತ್ತದೆ, ಮತ್ತು ಅವರ ಸ್ನೇಹಿತರು 'ಮುಸ್ಲಿಮರು ಅಪಾಯದಲ್ಲಿದ್ದಾರೆ' ಎಂದು ಹೇಳುತ್ತಾರೆ. ಕೋಮು ರಾಜಕೀಯದ ಮಸೂರವನ್ನು ತೆಗೆದುಹಾಕಲು ನಾನು ಅವರನ್ನು ಕೇಳುತ್ತೇನೆ. ಸತ್ಯವೆಂದರೆ ಅವರ ರಾಜಕೀಯದಿಂದಾಗಿ ಇಡೀ ದೇಶ ಅಪಾಯದಲ್ಲಿದೆ. ಅವರು ಪಶ್ಚಿಮ ಬಂಗಾಳದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ನಾವು ಅದನ್ನು ವಿರೋಧಿಸುತ್ತೇವೆ" ಎಂದು ಅವರು ಹೇಳಿದರು.

Mamata Banerjee calls for unity
Ramzan 2025: ಭಾರತದಲ್ಲಿ ಚಂದ್ರ ದರ್ಶನ; ಮಾರ್ಚ್ 31ರಂದು ಈದ್ ಆಚರಿಸಲು ಘೋಷಣೆ

ಎಡಪಂಥೀಯರ ವಿರುದ್ಧವೂ ವಾಗ್ದಾಳಿ

'ತಮ್ಮ ಸರ್ಕಾರವು ನಿವಾಸಿಗಳೊಂದಿಗೆ ನಿಲ್ಲುತ್ತದೆ. ಯಾರೂ ರಾಜ್ಯದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಲು ಸಾಧ್ಯವಿಲ್ಲ ಎಂದರು. ಎಡಪಂಥೀಯರನ್ನು ಟೀಕಿಸಿದ ಮಮತಾ ಬ್ಯಾನರ್ಜಿ, "ಕೆಂಪು ಮತ್ತು ಕೇಸರಿ ವಿಲೀನವಾಗಿವೆ. ಆದರೆ ಖಚಿತವಾಗಿರಿ, ನಿಮಗೆ ಯಾವುದೇ ಹಾನಿಯಾಗಲು ನಾನು ಬಿಡುವುದಿಲ್ಲ. ಆದರೆ ಪ್ರಚೋದನೆಗಳಿಗೆ ಬಲಿಯಾಗಬೇಡಿ ಎಂದು ಮಮತಾ ಜನರಿಗೆ ಕಿವಿಮಾತು ಹೇಳಿದರು.

ಪ್ರಾಣ ನೀಡುತ್ತೇನೆ ಆದರೆ..

ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ ಆದರೆ ನನ್ನ ತತ್ವಗಳಿಂದ ವಿಮುಖಳಾಗುವುದಿಲ್ಲ. ಕಳೆದ (2024) ಲೋಕಸಭಾ ಚುನಾವಣೆಯಲ್ಲಿ, ನಾವು ಒಟ್ಟಾಗಿ ಬಿಜೆಪಿಯ ನಡೆಯನ್ನು ವಿರೋಧಿಸಿದ್ದೇವೆ. ದೆಹಲಿ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಬಿಜೆಪಿ ನಕಲಿ ಮತದಾರರನ್ನು ಬಳಸಿಕೊಂಡಿದೆ.

ಚಂದ್ರನಿಗೆ ಯಾವುದೇ ಧರ್ಮವಿಲ್ಲ.. ನಾವು ಏಕತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಒಟ್ಟಿಗೆ ಬದುಕಬೇಕು. ರಾಜ್ಯದಲ್ಲಿ ವಿಭಜನೆಯನ್ನು ಬಿತ್ತುವ ಮತ್ತು ಕೋಮು ರಾಜಕೀಯವನ್ನು ಉತ್ತೇಜಿಸುವ ಪ್ರಯತ್ನಗಳ ವಿರುದ್ಧ ತೃಣಮೂಲ ಕಾಂಗ್ರೆಸ್ ಹೋರಾಟವನ್ನು ಮುಂದುವರಿಸುತ್ತದೆ" ಎಂದು ಹೇಳುವ ಮೂಲಕ ಅವರು ಅಂತರ್ಧರ್ಮೀಯ ಏಕತೆಯ ಸಂದೇಶವನ್ನು ಸಹ ಹಂಚಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com