LoC ಬಳಿ ಸತತ 12ನೇ ದಿನ ರಾತ್ರಿ ಪಾಕಿಸ್ತಾನಿ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಯಿಂದ ಪ್ರತಿದಾಳಿ

ಜಮ್ಮು ಮತ್ತು ಕಾಶ್ಮೀರದ ಏಳು ಗಡಿ ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಲ್ಲಿಯವರೆಗೆ, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಯಾವುದೇ ಗುಂಡಿನ ಚಕಮಕಿ ವರದಿಗಳಾಗಿಲ್ಲ.
Pakistani troops
ಪಾಕಿಸ್ತಾನ ಸೇನಾಪಡೆ
Updated on

ಶ್ರೀನಗರ: ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ತಾನಿ ಪಡೆಗಳು ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿವೆ, ಹಲವಾರು ವಲಯಗಳಲ್ಲಿ ಅಪ್ರಚೋದಿತ ದಾಳಿಗಳನ್ನು ಮುಂದುವರೆಸಿವೆ. ಪಾಕಿಸ್ತಾನ ಈ ರೀತಿ ಕಳೆದ 12 ದಿನಗಳಿಂದ ರಾತ್ರಿ ಹೊತ್ತು ಅಪ್ರಚೋದಿತ ದಾಳಿ ನಡೆಸುತ್ತಿವೆ. ಇದು ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ಮತ್ತಷ್ಟು ಕಿಚ್ಚು ಹಚ್ಚಿದೆ.

ನಿನ್ನೆ ತಡರಾತ್ರಿ ಪ್ರಾರಂಭವಾದ ಪಾಕಿಸ್ತಾನಿ ಪಡೆಗಳ ಶೆಲ್ ದಾಳಿಯು ಭಾರತೀಯ ಸೇನೆಯಿಂದ ತ್ವರಿತ ಮತ್ತು ನಿರ್ಣಯದ ಪ್ರತಿಕ್ರಿಯೆಯನ್ನು ಬಯಸಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿ ಪಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನೇರ ಪರಿಣಾಮವೇ ಈ ಗುಂಡಿನ ಚಕಮಕಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಏಳು ಗಡಿ ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಲ್ಲಿಯವರೆಗೆ, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಯಾವುದೇ ಗುಂಡಿನ ಚಕಮಕಿ ವರದಿಗಳಾಗಿಲ್ಲ.

ಗಡಿಯಾಚೆಗಿನ ಇತ್ತೀಚಿನ ಸುತ್ತಿನ ಗುಂಡಿನ ದಾಳಿಯು ಫೆಬ್ರವರಿ 2021 ರಲ್ಲಿ ತಲುಪಿದ ಕದನ ವಿರಾಮ ಒಪ್ಪಂದವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ, ಇದು 740 ಕಿಮೀ ಉದ್ದದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಆಗಾಗ್ಗೆ ಉಲ್ಲಂಘನೆಗಳಿಂದಾಗಿ ಇಂತಹ ಪರಿಣಾಮಗಳು ಉಂಟಾಗುತ್ತಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಕೆಲವು ಗಂಟೆಗಳ ನಂತರ, ಏಪ್ರಿಲ್ 24 ರ ರಾತ್ರಿಯಿಂದ, ಪಾಕಿಸ್ತಾನಿ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಪ್ರಾರಂಭಿಸಿ ಜಮ್ಮು ಪ್ರದೇಶಕ್ಕೆ ವೇಗವಾಗಿ ವಿಸ್ತರಿಸುವ ಎಲ್‌ಒಸಿಯ ಉದ್ದಕ್ಕೂ ಭಾರತೀಯ ಪಡೆಗಳ ಮೇಲೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ.

Pakistani troops
INTERVIEW | ಜಲ ಒಪ್ಪಂದ ಸ್ಥಗಿತ ಉತ್ತಮ ನಡೆ; ಉಗ್ರರ ಕೃತ್ಯವನ್ನು ಕಾಶ್ಮೀರಿಗಳು ಖಂಡಿಸಿದ್ದಾರೆ, ಈ ಅವಕಾಶ ಸರ್ಕಾರ ಬಳಸಿಕೊಳ್ಳಬೇಕು: ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ

ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸುವುದು, ವಾಘಾ ಗಡಿ ದಾಟುವಿಕೆಯನ್ನು ಮುಚ್ಚುವುದು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಂಡಿದೆ.ಪಾಕಿಸ್ತಾನ ಸಹ ಕಠಿಣ ಎಚ್ಚರಿಕೆಗಳನ್ನು ನೀಡಿದ್ದು, ಸಿಂಧೂ ನದಿಯಿಂದ ನೀರನ್ನು ತಿರುಗಿಸುವ ಭಾರತದ ಕ್ರಮ ಯುದ್ಧದ ಕೃತ್ಯ ಎಂದು ಪರಿಗಣಿಸಿದೆ.

ಭಾರತ-ಪಾಕಿಸ್ತಾನ ಗಡಿಯು 3,300 ಕಿಲೋಮೀಟರ್‌ಗಳಿಗಿಂತ ಹೆಚ್ಚು ವಿಸ್ತಾರವಾಗಿದೆ, ಇದನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಗುಜರಾತ್‌ನಿಂದ ಜಮ್ಮುವಿನ ಅಖ್ನೂರ್‌ವರೆಗೆ ಸುಮಾರು 2,400 ಕಿಮೀ ವ್ಯಾಪಿಸಿರುವ ಅಂತಾರಾಷ್ಟ್ರೀಯ ಗಡಿ (ಐಬಿ); ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ 740 ಕಿಮೀ ಉದ್ದದ ನಿಯಂತ್ರಣ ರೇಖೆ (ಎಲ್‌ಒಸಿ); ಮತ್ತು ಸಿಯಾಚಿನ್ ಹಿಮನದಿ ಪ್ರದೇಶವನ್ನು ಬೇರ್ಪಡಿಸುವ 110 ಕಿಮೀ ಉದ್ದದ ವಾಸ್ತವಿಕ ನೆಲದ ಸ್ಥಾನ ರೇಖೆ (ಎಜಿಪಿಎಲ್) ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com