ಶರ್ಬತ್ ಜಿಹಾದ್‌: ಮುಂದೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಲ್ಲ, Ramdev ಭರವಸೆ; ಪ್ರಕರಣ ಮುಕ್ತಾಯ!

ಪತಂಜಲಿಯ "ಗುಲಾಬ್ ಶರ್ಬತ್" ಅನ್ನು ಪ್ರಚಾರ ಮಾಡುವಾಗ, ಹಮ್ದರ್ದ್ ಅವರ ರೂಹ್ ಅಫ್ಜಾದಿಂದ ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ರಾಮದೇವ್ ಆರೋಪಿಸಿದ್ದರು.
ಶರ್ಬತ್ ಜಿಹಾದ್‌: ಮುಂದೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಲ್ಲ, Ramdev ಭರವಸೆ; ಪ್ರಕರಣ ಮುಕ್ತಾಯ!
Updated on

ನವದೆಹಲಿ: ಹಮ್‌ದರ್ದ್‌ ಸಂಸ್ಥೆಯ ರೂಹ್ ಅಫ್ಜಾ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಯೋಗ ಗುರು ರಾಮ್‌ದೇವ್ ಭರವಸೆ ನೀಡಿದ ನಂತರ ದೆಹಲಿ ಹೈಕೋರ್ಟ್ ಶುಕ್ರವಾರ ಪ್ರಕರಣವನ್ನು ಮುಕ್ತಾಯಗೊಳಿಸಿತು. ರಾಮದೇವ್ ಮತ್ತು ಪತಂಜಲಿ ಫುಡ್ಸ್ ಲಿಮಿಟೆಡ್ ತಮ್ಮ ಅಫಿಡವಿಟ್‌ಗಳಲ್ಲಿ ನೀಡಿದ ಹೇಳಿಕೆಗಳು ಅವರ ಮೇಲೆ ಬದ್ಧವಾಗಿವೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಹೇಳಿದರು. ಹಮ್ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ಪರವಾಗಿ ತೀರ್ಪು ನೀಡಿತ್ತು. ನ್ಯಾಯಾಲಯವು ಈ ಹಿಂದೆ ವಿವಾದಾತ್ಮಕ ಆನ್‌ಲೈನ್ ವಿಷಯವನ್ನು ತೆಗೆದುಹಾಕುವಂತೆ ಆದೇಶಿಸಿತ್ತು. ರಾಮ್‌ದೇವ್ ಮತ್ತು ಪತಂಜಲಿಗೆ ತಮ್ಮ ಹೊಣೆಗಾರಿಕೆಗಳನ್ನು ಸಲ್ಲಿಸುವಂತೆ ಕೇಳಿತ್ತು.

ಪತಂಜಲಿಯ "ಗುಲಾಬ್ ಶರ್ಬತ್" ಅನ್ನು ಪ್ರಚಾರ ಮಾಡುವಾಗ, ಹಮ್ದರ್ದ್ ಅವರ ರೂಹ್ ಅಫ್ಜಾದಿಂದ ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ರಾಮದೇವ್ ಆರೋಪಿಸಿದ್ದಾರೆ ಎಂದು ಹಮ್ದರ್ದ್ ಹೇಳಿತ್ತು. ಏಪ್ರಿಲ್ 22ರಂದು, ನ್ಯಾಯಾಲಯವು ರಾಮ್‌ದೇವ್ ಮತ್ತು ಪತಂಜಲಿಯಿಂದ ಅಫಿಡವಿಟ್ ಅನ್ನು ಕೋರಿತ್ತು. ಭವಿಷ್ಯದಲ್ಲಿ ಪ್ರತಿಸ್ಪರ್ಧಿಗಳ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಮೊಕದ್ದಮೆಯ ವಿಷಯಕ್ಕೆ ಹೋಲುವ ಯಾವುದೇ ಹೇಳಿಕೆಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅಥವಾ ಅವಹೇಳನಕಾರಿ ವೀಡಿಯೊಗಳು/ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಭರವಸೆ ನೀಡಿತು.

ಹಮ್ದರ್ದ್ ಅವರ ರೂಹ್ ಅಫ್ಜಾ ಕುರಿತು ರಾಮದೇವ್ ಅವರ "ಶರ್ಬತ್ ಜಿಹಾದ್" ಹೇಳಿಕೆ ಕ್ಷಮಿಸಲಾಗದು. ಅದು ತನ್ನ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ನ್ಯಾಯಾಲಯ ಹೇಳಿದೆ. ಇದರ ನಂತರ ಯೋಗ ಗುರು ಸಂಬಂಧಿತ ವೀಡಿಯೊ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ತಕ್ಷಣವೇ ತೆಗೆದುಹಾಕುವುದಾಗಿ ಭರವಸೆ ನೀಡಿದರು. ಹಿಂದಿನ ಆದೇಶದಂತೆ ಆಕ್ಷೇಪಾರ್ಹ ಯೂಟ್ಯೂಬ್ ವೀಡಿಯೊವನ್ನು ತೆಗೆದುಹಾಕುವ ಬದಲು, ಪ್ರತಿವಾದಿಯು ಅದನ್ನು ಖಾಸಗಿಯನ್ನಾಗಿ ಮಾಡಿದ್ದಾರೆ ಎಂದು ಹಮ್ದರ್ದ್ ಪರ ವಕೀಲರು ಹೇಳಿದರು.

ಶರ್ಬತ್ ಜಿಹಾದ್‌: ಮುಂದೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಲ್ಲ, Ramdev ಭರವಸೆ; ಪ್ರಕರಣ ಮುಕ್ತಾಯ!
'ಅವರು ಯಾರ ನಿಯಂತ್ರಣಕ್ಕೂ ಮೀರಿ, ತನ್ನದೇ ಲೋಕದಲ್ಲಿ ಬದುಕುತ್ತಾರೆ': 'ಶರ್ಬತ್ ಜಿಹಾದ್' ಹೇಳಿಕೆಗೆ ಬಾಬಾ ರಾಮ್ ದೇವ್ ಕಾಲೆಳೆದ ದೆಹಲಿ ಹೈಕೋರ್ಟ್

ಮತ್ತೊಂದೆಡೆ, ರಾಮದೇವ್ ಪರ ವಕೀಲರು "ನ್ಯಾಯಾಲಯದ ಬಗ್ಗೆ ಅವರಿಗೆ ಅಪಾರ ಗೌರವವಿದೆ" ಮತ್ತು ಅದರ ಸೂಚನೆಗಳನ್ನು ಪಾಲಿಸಲಾಗುವುದು ಎಂದು ಹೇಳಿದರು. ಮೇ 1ರಂದು ರಾಮ್‌ದೇವ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ನ್ಯಾಯಾಲಯ ಎಚ್ಚರಿಸಿದಾಗ, ನಂತರ ಪ್ರಕಟವಾದ ಕೆಲವು ಆಕ್ಷೇಪಾರ್ಹ ವಿಷಯಗಳನ್ನು 24 ಗಂಟೆಗಳ ಒಳಗೆ ತೆಗೆದುಹಾಕಲಾಗುವುದು ಎಂದು ಅವರ ವಕೀಲರು ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com