Uttar Pradesh: ಹೆಡ್‌ ಕಾನ್‌ಸ್ಟೆಬಲ್ ಕೊಂದ ಗೋ ಕಳ್ಳ ಸಾಗಣೆದಾರರು; ಎನ್ ಕೌಂಟರ್ ನಲ್ಲಿ ಓರ್ವ ಸಾವು, ಇಬ್ಬರ ಬಂಧನ

ವಾಹನ ತಪಾಸಣೆ ಮಾಡುವಾಗ ಮೂವರು ಗೋ ಕಳ್ಳಸಾಗಣೆದಾರರು ಮತ್ತು ಅವರ ಸಹಚರರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗೆ ಹೊಡೆದು ನಂತರ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಜಾನ್ ಪುರ: ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಗೋ ಕಳ್ಳಸಾಗಣೆದಾರರೊಬ್ಬರು ಹತ್ಯೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ಮಧ್ಯ ರಾತ್ರಿ ಖುಜ್ಜಿ ತಿರುವಿನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ವಾಹನ ತಪಾಸಣೆ ಮಾಡುವಾಗ ಮೂವರು ಗೋ ಕಳ್ಳಸಾಗಣೆದಾರರು ಮತ್ತು ಅವರ ಸಹಚರರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗೆ ಹೊಡೆದು ನಂತರ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ. ಈ ವೇಳೆ ಹೆಡ್ ಕಾನ್‌ಸ್ಟೆಬಲ್ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಮೇ 14 ಮತ್ತು ಮೇ 15 ರ ಮಧ್ಯರಾತ್ರಿಯಲ್ಲಿ ಗೋ ಕಳ್ಳಸಾಗಣೆದಾರರು ಜಲಾಲ್‌ಪುರ ಠಾಣೆಯ (ಜೌನ್‌ಪುರ ಜಿಲ್ಲೆಯಲ್ಲಿ) ಪರೌಗಂಜ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿ ಪ್ರತಿಮಾ ಸಿಂಗ್ ಮತ್ತು ಇತರ ಪೊಲೀಸ್ ಸಿಬ್ಬಂದಿಗೆ ಹೊಡೆದಿದ್ದಾರೆ. ಪ್ರತಿಮಾ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ವಾರಣಾಸಿಯ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತದ ನಂತರದ ಆದೇಶದಂತೆ ಚಾಂದ್ವಾಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯ ಪ್ರಕಾಶ್ ಸಿಂಗ್ ಅವರು ಮೇ 17 ರಂದು ಖುಜ್ಜಿ ತಿರುವಿನಲ್ಲಿ ಇತರ ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸುತ್ತಿದ್ದಾಗ ರಾತ್ರಿ 11.50 ಕ್ಕೆ ಅಜಂಗಢದಿಂದ ವಾರಣಾಸಿಯ ಕಡೆಗೆ ತೆರಳುತ್ತಿದ್ದ ಗೋವು ಕಳ್ಳಸಾಗಣೆದಾರರನ್ನು ರಾತ್ರಿ 11.50 ಕ್ಕೆ ತಡೆದಿದೆ. ಈ ವೇಳೆ ಆರೋಪಿಗಳು ಹೆಡ್ ಕಾನ್‌ಸ್ಟೆಬಲ್ ದುರ್ಗೇಶ್ ಕುಮಾರ್ ಸಿಂಗ್ (34) ಅವರಿಗೆ ಹೊಡೆದು ವಾರಣಾಸಿ ಕಡೆಗೆ ಪರಾರಿಯಾಗಲು ಪ್ರಾರಂಭಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಇಡೀ ಪೊಲೀಸ್ ಪಡೆಯನ್ನು ಸಜ್ಜುಗೊಳಿಸಲಾಗಿದ್ದು, ವಿಶೇಷ ಕಾರ್ಯಾಚರಣೆ ಗುಂಪು (SOG) ಜೊತೆಗೆ ಹತ್ತಿರದ ಪೊಲೀಸ್ ಠಾಣೆಯ ಸಿಬ್ಬಂದಿ ಗೋ ಕಳ್ಳಸಾಗಣೆದಾರರನ್ನು ಬೆನ್ನಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದುರ್ಗೇಶ್ ಕುಮಾರ್ ಅವರನ್ನು ವಾರಣಾಸಿ ಟ್ರಾಮಾ ಸೆಂಟರ್‌ಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Casual Images
ತ್ರಿಪುರ: ಬಿಎಸ್ಎಫ್ ಅಧಿಕಾರಿ ಮೇಲೆ ಗೋ ಕಳ್ಳ ಸಾಗಾಣಿಕೆದಾರರ ದಾಳಿ, ಸ್ಥಿತಿ ಗಂಭೀರ

ಚಾಂದ್ವಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳ ಸಾಗಣೆದಾರರು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದ್ದು, ಜೌನ್‌ಪುರ ನಿವಾಸಿ ಸಲ್ಮಾನ್ (24) ಅವರ ಎದೆಗೆ ಗುಂಡು ತಗುಲಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ. ಈ ವೇಳೆ ಇಬ್ಬರು ಗೋ ಕಳ್ಳಸಾಗಾಣಿಕೆದಾರರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇತರು ಮೂವರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com