ಮಹಾರಾಷ್ಟ್ರ: ಟ್ರಕ್ ಹರಿದು 6 ಮಂದಿ ಸ್ಥಳದಲ್ಲೇ ಸಾವು

ರಾತ್ರಿ 8.30 ರ ಸುಮಾರಿಗೆ, ಗೆವ್ರೈನ ದೀಪಕ್ ಅಟ್ಕರೆ ಚಲಾಯಿಸುತ್ತಿದ್ದ ಕಾರು ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-52 ರ ವಿಭಜಕವನ್ನು ದಾಟಿ ಡಿಕ್ಕಿ ಹೊಡೆಯಿತು.
Representational image
ಸಾಂದರ್ಭಿಕ ಚಿತ್ರ
Updated on

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಿನ್ನೆ ಸೋಮವಾರ ಅಪಘಾತಕ್ಕೀಡಾದ ವಾಹನವನ್ನು ರಸ್ತೆಯಿಂದ ಸರಿಸುತ್ತಿದ್ದ ಆರು ಜನರ ಮೇಲೆ ಟ್ರಕ್ ಹರಿದು ಮೃತಪಟ್ಟಿರುವ ಘಟನೆ ನಡೆದಿದೆ.

ರಾತ್ರಿ 8.30 ರ ಸುಮಾರಿಗೆ, ಗೆವ್ರೈನ ದೀಪಕ್ ಅಟ್ಕರೆ ಚಲಾಯಿಸುತ್ತಿದ್ದ ಕಾರು ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-52 ರ ವಿಭಜಕವನ್ನು ದಾಟಿ ಡಿಕ್ಕಿ ಹೊಡೆಯಿತು.

Representational image
ಮಹಾರಾಷ್ಟ್ರ: ಥಾಣೆಯಲ್ಲಿ ಕಟ್ಟಡ ಕುಸಿದು ನಾಲ್ವರು ಸಾವು, ಐವರಿಗೆ ಗಾಯ

ಕಾರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಲು ಪ್ರಯತ್ನಿಸುತ್ತಿರುವಾಗ, ರಾತ್ರಿ 11.30 ರ ಸುಮಾರಿಗೆ ಹಿಂದಿನಿಂದ ಬಂದ ಟ್ರಕ್ ಅವರ ಮೇಲೆ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಮೃತಪಟ್ಟು ಒಬ್ಬರು ಗಾಯಗೊಂಡರು ಎಂದು ಅವರು ಹೇಳಿದರು.

ಮೃತರನ್ನು ಬಾಲು ಅಟ್ಕರೆ, ಭಾಗವತ್ ಪರಲ್ಕರ್, ಸಚಿನ್ ನನ್ನವ್ರೆ, ಮನೋಜ್ ಕರಂಡೆ, ಕೃಷ್ಣ ಜಾಧವ್ ಮತ್ತು ದೀಪಕ್ ಸುರಯ್ಯ ಎಂದು ಗುರುತಿಸಲಾಗಿದೆ - ಎಲ್ಲರೂ ಬೀಡ್‌ನ ಜಿಯೋರೈ ನಿವಾಸಿಗಳು. ಟ್ರಕ್ ಚಾಲಕನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com