ನಾನು ಮುಸ್ಲಿಮರನ್ನು ತುಂಬಾ ಪ್ರೀತಿಸುತ್ತೇನೆ: ಬಾಲಿವುಡ್ ನಟಿ, ಸ್ವಾಧಿ ಮಮತಾ ಕುಲಕರ್ಣಿ ವಿರುದ್ಧ ಆಕ್ರೋಶ

ಮಮತಾ ಕುಲಕರ್ಣಿ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿದ್ದರು. ಆದಾಗ್ಯೂ, ಅವರು ಸಿನಿಮಾ ಜಗತ್ತನ್ನು ತೊರೆದು ಸಾಧ್ವಿಯಾಗಿದ್ದಾರೆ. ಈಗ ಅವರು ಚಲನಚಿತ್ರಗಳಲ್ಲಿ ನಟಿಸುತ್ತಿದಿದ್ದರೂ ಅವರು ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ.
ಮಮತಾ ಕುಲಕರ್ಣಿ
ಮಮತಾ ಕುಲಕರ್ಣಿ
Updated on

ಮಮತಾ ಕುಲಕರ್ಣಿ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿದ್ದರು. ಆದಾಗ್ಯೂ, ಅವರು ಸಿನಿಮಾ ಜಗತ್ತನ್ನು ತೊರೆದು ಸಾಧ್ವಿಯಾಗಿದ್ದಾರೆ. ಈಗ ಅವರು ಚಲನಚಿತ್ರಗಳಲ್ಲಿ ನಟಿಸುತ್ತಿದಿದ್ದರೂ ಅವರು ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಪಾಕಿಸ್ತಾನದ ಬಗ್ಗೆ ನಟಿಯ ಹೇಳಿಕೆ ಇದೀಗ ವೈರಲ್ ಆಗಿದೆ.

ಇತ್ತೀಚೆಗೆ ಮಮತಾ ಕುಲಕರ್ಣಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ್ದ ಮಮತಾ ಕುಲಕರ್ಣಿ, ನಾನು ಮುಸ್ಲಿಮರನ್ನು ತುಂಬಾ ಪ್ರೀತಿಸುತ್ತೇನೆ. ಅವರು ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ನನ್ನ 25 ವರ್ಷಗಳ ಸಾಧನದಲ್ಲಿ, ನನಗೆ ದುಬೈನಲ್ಲಿ ಬಹಳಷ್ಟು ಪ್ರೀತಿ ಸಿಕ್ಕಿತು. ಅಲ್ಲಿ ನಾನು ಒಂದೇ ಸ್ಥಳದಲ್ಲಿ ಕುಳಿತು ಸಾಧನ ಮಾಡುತ್ತಿದ್ದೆ ಎಂದು ಹೇಳಿದರು. ನಾನು ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಆಗಿದ್ದಾಗ, ನನಗೆ ಪ್ರತಿದಿನ ಪಾಕಿಸ್ತಾನದಿಂದ 50 ಪತ್ರಗಳು ಬರುತ್ತಿದ್ದವು. ಹಾಗಾಗಿ ನಾನು ಮುಸ್ಲಿಮರನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನಾನು ಭಯೋತ್ಪಾದಕರನ್ನು ಪ್ರೀತಿಸುವುದಿಲ್ಲ. ಭಯೋತ್ಪಾದಕ ಎಂದರೆ ಕೇವಲ ಭಯೋತ್ಪಾದಕ. ಅವನು ಯಾರೊಬ್ಬರ ಗಂಡನೂ ಅಲ್ಲ, ಯಾರೊಬ್ಬರ ತಂದೆಯೂ ಅಲ್ಲ, ಅವನು ಯಾರ ಮಗನೂ ಆಗಲು ಸಾಧ್ಯವಿಲ್ಲ. ಅವನು ಕೇವಲ ಭಯೋತ್ಪಾದಕ ಮತ್ತು ಅವನು ಭಯೋತ್ಪಾದಕನಾಗಿಯೇ ಉಳಿದಿದ್ದಾನೆ ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಂತರ ಮಮತಾ ಕುಲಕರ್ಣಿಯವರ ಈ ಹೇಳಿಕೆ ಬಂದಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು 26 ಅಮಾಯಕ ಜನರನ್ನು ಕೊಂದರು. ಅದರ ನಂತರ, ಮೇ 7 ರಂದು, ಭಾರತೀಯ ಸಶಸ್ತ್ರ ಪಡೆಗಳು ಮಿಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದವು. ಅದರ ನಂತರವೂ, ಪಾಕಿಸ್ತಾನ ತನ್ನ ದುಷ್ಕೃತ್ಯಗಳನ್ನು ನಿಲ್ಲಿಸಲಿಲ್ಲ. ಎರಡೂ ದೇಶಗಳ ನಡುವೆ ಉದ್ವಿಗ್ನತೆಯ ವಾತಾವರಣವಿತ್ತು.

ಮಮತಾ ಕುಲಕರ್ಣಿ
ಪಾಕ್‌ಗೆ ಜಲಕಂಟಕ ಶುರು: ನೀರನ್ನು ಆಯುಧವಾಗಿ ಬಳಸಬೇಡಿ; ಮತ್ತೊಮ್ಮೆ ಭಾರತಕ್ಕೆ ಶಹಬಾಜ್ ಷರೀಫ್ ಬೆದರಿಕೆ

ಅದೇನೇ ಇರಲಿ, ಮಮತಾ 1991ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ನನ್ನಬರ್ಗಲ್' ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು 1992ರಲ್ಲಿ 'ಮೇರಾ ದಿಲ್ ತೇರೆ ಲಿಯೇ' ಚಿತ್ರದೊಂದಿಗೆ ಬಾಲಿವುಡ್‌ಗೆ ಪ್ರವೇಶಿಸಿದರು. ಆದಾಗ್ಯೂ, 1995 ರಲ್ಲಿ ಬಿಡುಗಡೆಯಾದ ಶಾರುಖ್ ಮತ್ತು ಸಲ್ಮಾನ್ ಖಾನ್ ಅವರ 'ಕರಣ್ ಅರ್ಜುನ್' ಚಿತ್ರದಿಂದ ಅವರಿಗೆ ನಿಜವಾದ ಮನ್ನಣೆ ಸಿಕ್ಕಿತು. ಅದರ ನಂತರ, ಅವರು ಅನೇಕ ಹಿಟ್ ಚಿತ್ರಗಳ ಭಾಗವಾಗಿದ್ದರು. ನಂತರ, ಡ್ರಗ್ಸ್ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತು. ಅದರ ನಂತರ, ಅವರು ಬಾಲಿವುಡ್‌ನಿಂದ ದೂರ ಸರಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com