ಚುನಾವಣೆಗಳಲ್ಲಿ BJP ಸತತ ಗೆಲುವು..: ಕಾಂಗ್ರೆಸ್ ನಾಯಕತ್ವದ ಬಗ್ಗೆ Chandrababu Naidu ಮಹತ್ವದ ಹೇಳಿಕೆ

ಹಿರಿಯ ರಾಜಕಾರಣಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದಿನ ಬಿಜೆಪಿ ಮತ್ತು ವಿರೋಧ ಪಕ್ಷದ ನಡುವಿನ ಪ್ರಮುಖ ವ್ಯತ್ಯಾಸಗಳ ಕುರಿತು ಮಾತನಾಡಿದ್ದಾರೆ.
AP CM Chandrababu Naidu
ಚಂದ್ರಬಾಬು ನಾಯ್ಡು
Updated on

ಹೈದರಾಬಾದ್: ದೇಶದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕುರಿತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಹಿರಿಯ ರಾಜಕಾರಣಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದಿನ ಬಿಜೆಪಿ ಮತ್ತು ವಿರೋಧ ಪಕ್ಷದ ನಡುವಿನ ಪ್ರಮುಖ ವ್ಯತ್ಯಾಸಗಳ ಕುರಿತು ಮಾತನಾಡಿದ್ದಾರೆ.

ನರೇಂದ್ರ ಮೋದಿ 3.0 ಸರ್ಕಾರವನ್ನು ಬೆಂಬಲಿಸಿದ ನಂತರ ರಾಷ್ಟ್ರೀಯ ದೂರದರ್ಶನದಲ್ಲಿ ಇದೇ ಮೊದಲ ಬಾರಿಗೆ ನಾಯ್ಡು ಮಾತನಾಡಿದ್ದಾರೆ.

"ಬಿಜೆಪಿ ಸ್ಪೂರ್ತಿದಾಯಕ ನಾಯಕತ್ವವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಪರಿಣಾಮಕಾರಿತ್ವದ ಆಧಾರದ ಮೇಲೆ ನಾಯಕತ್ವವನ್ನು ಆಯ್ಕೆ ಮಾಡುತ್ತಿದ್ದಾರೆ. ಅವರು ಕಾರ್ಯಕ್ಷಮತೆಯ ಆಧಾರದ ಮೇಲೆ ಯುವ ನಾಯಕರನ್ನು ಸಹ ಆಯ್ಕೆ ಮಾಡುತ್ತಿದ್ದಾರೆ. ಅದು ಎಲ್ಲಾ ವ್ಯತ್ಯಾಸವನ್ನುಂಟುಮಾಡುತ್ತದೆ" ಎಂದು ನಾಯ್ಡು ಹೇಳಿದ್ದಾರೆ.

AP CM Chandrababu Naidu
Nitish Kumar ಗೆ ಏನಾಗಿದೆ? ಪ್ರಧಾನಿ ಇದ್ದ ವೇದಿಕೆಯಲ್ಲಿ ಮತ್ತೆ ಯಡವಟ್ಟು!

ಬಿಜೆಪಿ ನಾಯಕತ್ವವು ಚೈತನ್ಯವನ್ನು ಹೊಂದಿದೆ. ಇದಕ್ಕೆ ಆ ಪಕ್ಷ ಸಾಧಿಸುತ್ತಿರುವ ಸತತ ಚುನಾವಣಾ ಗೆಲುವುಗಳೇ ಸಾಕ್ಷಿ. ವಿರೋಧ ಪಕ್ಷದ ನಾಯಕತ್ವದ ಬಗ್ಗೆ ತನಿಖೆ ನಡೆಸಿದಾಗ ಅಲ್ಲಿ ಬಲಿಷ್ಠ ನಾಯಕತ್ವದ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದ ನಾಯ್ಡು ಬಿಜೆಪಿ ವಿರುದ್ಧ ಚುನಾವಣೆಗಳಲ್ಲಿ ಹೋರಾಡಿ ಗೆಲ್ಲುವಲ್ಲಿ ವಿರೋಧ ಪಕ್ಷದ ಕಳಪೆ ದಾಖಲೆಯ ಬಗ್ಗೆಯೂ ಮಾತನಾಡಿದರು.

"ಒಂದು ಹಂತದಲ್ಲಿ, ಕಮ್ಯುನಿಸ್ಟರು ಬಹಳ ಶಕ್ತಿಶಾಲಿಗಳಾಗಿದ್ದರು, ಆದರೆ ಇಂದು, ಆರ್ಥಿಕ ಸುಧಾರಣೆಗಳ ನಂತರ ಕಮ್ಯುನಿಸ್ಟರಿಗೆ ಅವಕಾಶವೇನು?" ಎಂದು ಹೇಳಿದ ಚಂದ್ರಬಾಬು ನಾಯ್ಡು ಕಾಲ ಬದಲಾಗುತ್ತಿದೆ ಮತ್ತು ಪಕ್ಷಗಳು ಮತ್ತು ರಾಜಕೀಯ ಕೂಡ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಸುಳಿವು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com