ಬಾಂಬೆ ಹೈಕೋರ್ಟ್‌ ಹೊಸ ಕಟ್ಟಡವು ನ್ಯಾಯ ದೇಗುಲವಾಗಿರಬೇಕೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ: ಸಿಜೆಐ ಗವಾಯಿ

ಹೊಸ ಕಟ್ಟಡವು ಸಾಮ್ರಾಜ್ಯಶಾಹಿ ರಚನೆಯನ್ನು ಚಿತ್ರಿಸಬಾರದು ಮತ್ತು ಸಂವಿಧಾನದಲ್ಲಿ ಅಳವಡಿಸಲಾಗಿರುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿರಬೇಕು..
B.R. Gavai
ಸಿಜೆಐ ಬಿಆರ್ ಗವಾಯಿ
Updated on

ಮುಂಬೈ: ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಾಂಬೆ ಹೈಕೋರ್ಟ್ ಸಂಕೀರ್ಣವು ನ್ಯಾಯ ದೇವಾಲಯವಾಗಿರಬೇಕೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಹೇಳಿದ್ದಾರೆ.

ಹೊಸ ಬಾಂಬೆ ಹೈಕೋರ್ಟ್ ಸಂಕೀರ್ಣವು ದುಂದುಗಾರಿಕೆಯನ್ನು ತಪ್ಪಿಸಬೇಕು ಎಂದು ಹೇಳಿರುವ ಗವಾಯಿ ಅವರು ನ್ಯಾಯಾಲಯ "ನ್ಯಾಯದ ದೇವಾಲಯವಾಗಬೇಕೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಹೇಳಿದ್ದಾರೆ.

ಬುಧವಾರ ಬಾಂದ್ರಾ (ಪೂರ್ವ)ದಲ್ಲಿ ಸಂಕೀರ್ಣದ ಶಿಲಾನ್ಯಾಸ ನೆರವೇರಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಗವಾಯಿ ಅವರು, 'ಹೊಸ ಕಟ್ಟಡವು ಸಾಮ್ರಾಜ್ಯಶಾಹಿ ರಚನೆಯನ್ನು ಚಿತ್ರಿಸಬಾರದು ಮತ್ತು ಸಂವಿಧಾನದಲ್ಲಿ ಅಳವಡಿಸಲಾಗಿರುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಹೊಸ ಸಂಕೀರ್ಣವು "ದುಂದುಗಾರಿಕೆ"ಯನ್ನು ತ್ಯಜಿಸಬೇಕು. ನ್ಯಾಯಾಧೀಶರು ಇನ್ನು ಮುಂದೆ ಊಳಿಗಮಾನ್ಯ ಪ್ರಭುಗಳಲ್ಲ. ಏಕೆಂದರೆ ಅವರನ್ನು ಸಾಮಾನ್ಯ ನಾಗರಿಕರಿಗೆ ಸೇವೆ ಸಲ್ಲಿಸಲು ನೇಮಿಸಲಾಗುತ್ತದೆ ಎಂದು ಸಿಜೆಐ ಸೂಚಿಸಿದರು.

B.R. Gavai
ಮುಂದಿನ ಸಿಜೆಐ ಯಾರು?: ಉತ್ತರಾಧಿಕಾರಿ ಹೆಸರು ಕೇಂದ್ರಕ್ಕೆ ಶಿಫಾರಸು ಮಾಡಿದ ನ್ಯಾಯಮೂರ್ತಿ ಬಿ.ಆರ್ ಗವಾಯಿ

"ಕಟ್ಟಡವು ದುಬಾರಿಯಾಗಿದೆ ಎಂದು ಕೆಲವು ಪತ್ರಿಕೆಗಳಲ್ಲಿ ಓದಿದ್ದೇನೆ. ಇಬ್ಬರು ನ್ಯಾಯಾಧೀಶರು ಹಂಚಿಕೊಳ್ಳಲು ಒಂದು ಲಿಫ್ಟ್ ಅನ್ನು ಒದಗಿಸಲಾಗಿದೆ. ನ್ಯಾಯಾಧೀಶರು ಇನ್ನು ಮುಂದೆ ಊಳಿಗಮಾನ್ಯ ಪ್ರಭುಗಳಲ್ಲ. ನ್ಯಾಯಾಧೀಶರು ಹೈಕೋರ್ಟ್, ವಿಚಾರಣಾ ನ್ಯಾಯಾಲಯ, ಸುಪ್ರೀಂ ಕೋರ್ಟ್ ಆಗಿರಬಹುದು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಎಲ್ಲಾ ಸಂಸ್ಥೆಗಳು ದೇಶದ ಕೊನೆಯ ಪ್ರಜೆಗೆ ಸೇವೆ ಸಲ್ಲಿಸಲು ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸಮಾಜಕ್ಕೆ ನ್ಯಾಯ ಒದಗಿಸಲು" ಎಂದು ಸಿಜೆಐ ಹೇಳಿದರು.

ಕಟ್ಟಡದ ಭವ್ಯತೆ ಮತ್ತು ಸಾಂಪ್ರದಾಯಿಕ ರಚನೆಯನ್ನು ಕಾಪಾಡಿಕೊಳ್ಳಲು ಕರೆ ನೀಡಿದ ಅವರು, ನ್ಯಾಯಾಲಯ ಕಟ್ಟಡಗಳನ್ನು ಯೋಜಿಸುವಾಗ, ನಾವು ನ್ಯಾಯಾಧೀಶರ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುತ್ತೇವೆ, ಆದರೆ ನಾವು ನಾಗರಿಕರ, ದಾವೆದಾರರ ಅಗತ್ಯಗಳಿಗಾಗಿ ಅಸ್ತಿತ್ವದಲ್ಲಿದ್ದೇವೆ ಎಂಬುದನ್ನು ಮರೆಯಬಾರದು. ಈ ಕಟ್ಟಡವು ನ್ಯಾಯದ ದೇವಾಲಯವಾಗಿರಬೇಕೇ ಹೊರತು ಸೆವೆನ್-ಸ್ಟಾರ್ ಹೋಟೆಲ್ ಆಗಬಾರದು ಎಂದು ಸಿಜೆಐ ಗವಾಯಿ ಹೇಳಿದರು.

ಮೇ 14, 2025 ರಂದು ಅಧಿಕಾರ ವಹಿಸಿಕೊಂಡ ಸಿಜೆಐ ಭೂಷಣ್ ಗವಾಯಿ, ನವೆಂಬರ್ 24 ರಂದು ಉನ್ನತ ನ್ಯಾಯಾಂಗ ಹುದ್ದೆಯನ್ನು ತ್ಯಜಿಸುವ ಮೊದಲು ಇದು ಮಹಾರಾಷ್ಟ್ರಕ್ಕೆ ಅವರ ಕೊನೆಯ ಭೇಟಿ ಎಂದು ಹೇಳಿದರು. ಅವರು ತಮ್ಮ ತವರು ರಾಜ್ಯದಲ್ಲಿ ನ್ಯಾಯಾಂಗ ಮೂಲಸೌಕರ್ಯದ ಬಗ್ಗೆ ತೃಪ್ತರಾಗಿದ್ದಾರೆ ಎಂದು ಗಮನಿಸಿದರು.

B.R. Gavai
ಶೂ ಎಸೆತ ಪ್ರಕರಣ: ಅದೊಂದು 'ಮರೆತ ಅಧ್ಯಾಯ'; CJI ಬಿ.ಆರ್ ಗವಾಯಿ ಅಚ್ಚರಿಯ ಹೇಳಿಕೆಗೆ ಕಾರಣವೇನು?

ಸಿಜೆಐ ಹೇಳಿದ್ದೇನು?

"ಈ ಕಾರ್ಯಕ್ರಮದ ಭಾಗವಾಗಲು ನನಗೆ ಇಷ್ಟವಿರಲಿಲ್ಲ. ಆದರೆ ಈಗ ನಾನು ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ ನ್ಯಾಯಾಧೀಶನಾಗಿ, ಇಡೀ ದೇಶದ ಅತ್ಯುತ್ತಮ ನ್ಯಾಯಾಲಯ ಕಟ್ಟಡಕ್ಕೆ ಅಡಿಪಾಯ ಹಾಕುವ ಮೂಲಕ ನನ್ನ ಅಧಿಕಾರಾವಧಿಯನ್ನು ಕೊನೆಗೊಳಿಸುತ್ತಿದ್ದೇನೆ ಎಂಬ ಕೃತಜ್ಞತೆಯನ್ನು ಅನುಭವಿಸುತ್ತಿದ್ದೇನೆ. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗವು ಸಮಾಜಕ್ಕೆ ನ್ಯಾಯ ಒದಗಿಸಲು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು. ಇಂದು ಒಂದು ಸ್ಮರಣೀಯ ಕ್ಷಣ, ಬಾಂಬೆ ಹೈಕೋರ್ಟ್‌ನ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com