SC/ST ಕಾಯ್ದೆಯನ್ನು ರದ್ದುಗೊಳಿಸಬೇಕು, ಜಾತಿ ಆಧಾರಿತ ಮೀಸಲಾತಿ ಇರಬಾರದು: ಜಗದ್ಗುರು ರಾಮಭದ್ರಾಚಾರ್ಯ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಬಗ್ಗೆ ಕೇಳಿದಾಗ, 'ಹೌದು, ಮತ್ತೆ ಆಢಳಿತ ಪಕ್ಷವು ಗೆಲ್ಲುತ್ತದೆ' ಎಂದು ಹೇಳಿದರು.
Jagadguru Rambhadracharya
ಜಗದ್ಗುರು ರಾಮಭದ್ರಾಚಾರ್ಯ
Updated on

ನವದೆಹಲಿ: ವೇದಗಳಲ್ಲಿ 'ಅವರ್ಣಗಳು' ಅಥವಾ 'ಸವರ್ಣಗಳು' ಎಂದು ಹೇಳಿಲ್ಲ. ಕಾಯ್ದೆಯ ಆಧಾರವಾಗಿರುವ ಜಾತಿ ಆಧಾರಿತ ವ್ಯತ್ಯಾಸಗಳು ವೈದಿಕ ಪಠ್ಯಗಳಿಂದ ಬೆಂಬಲಿತವಾಗಿಲ್ಲ. ಹೀಗಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಕಾನೂನು ರಕ್ಷಣೆ ನೀಡುವ SC/ST ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಜಗದ್ಗುರು ರಾಮಭದ್ರಾಚಾರ್ಯರು ಮಂಗಳವಾರ ಹೇಳಿದ್ದಾರೆ.

IANS ಜೊತೆ ಮಾತನಾಡಿದ ಅವರು, 'SC/ST ಕಾಯ್ದೆಯನ್ನು ರದ್ದುಗೊಳಿಸಬೇಕು. ವೇದಗಳಲ್ಲಿ ಅವರ್ಣರು ಅಥವಾ ಸವರ್ಣರನ್ನು ಉಲ್ಲೇಖಿಸುವುದಿಲ್ಲ; ಈ ರಾಜಕೀಯ ನಾಯಕರು ಈ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ. ಜಾತಿ ಆಧಾರಿತ ಮೀಸಲಾತಿ ಇರಬಾರದು ಎಂದು ನಾನು ಹೇಳುತ್ತೇನೆ' ಎಂದರು.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಬಗ್ಗೆ ಕೇಳಿದಾಗ, 'ಹೌದು, ಮತ್ತೆ ಆಢಳಿತ ಪಕ್ಷವು ಗೆಲ್ಲುತ್ತದೆ' ಎಂದು ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸುತ್ತಾ, 'ಬಿಹಾರದ ಜನರು ಜಾತಿ ರಾಜಕೀಯವನ್ನು ಮೀರಿ ಬೆಳೆದಿದ್ದಾರೆ. ಈಗ ಅವರು ಏನು ಮಾಡಬೇಕು ಮತ್ತು ಯಾರು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ' ಎಂದು ಹೇಳಿದರು.

Jagadguru Rambhadracharya
'ದಕ್ಷಿಣೆ ರೂಪದಲ್ಲಿ POK ಬೇಕು': ಭಾರತೀಯ ಸೇನಾ ಮುಖ್ಯಸ್ಥರಿಗೆ ಜಗದ್ಗುರು ರಾಮಭದ್ರಾಚಾರ್ಯ ಮನವಿ!

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಂತಹ ಹಿರಿಯ ವಿರೋಧ ಪಕ್ಷದ ನಾಯಕರ ಬಗ್ಗೆ ಪ್ರತಿಕ್ರಿಯಿಸಿದ ರಾಮಭದ್ರಾಚಾರ್ಯ, 'ಶ್ರೀರಾಮನ ದರ್ಶನಕ್ಕೆ ಹೋಗದಿರುವುದು ದುರದೃಷ್ಟಕರ ಮತ್ತು ಇದು ಪ್ರಧಾನಿ ಮೋದಿ ಅವರಿಗೆ ಅದೃಷ್ಟ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com