Assam Chief Minister Himanta Biswa Sarma
ಹಿಮಂತ ಬಿಸ್ವಾ ಶರ್ಮಾ

ಜುಬೀನ್ ಗಾರ್ಗ್ ಸಾವು ಸರಳ ಕೊಲೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಪ್ರಾಥಮಿಕ ತನಿಖೆಯ ನಂತರ, ಸರಳ ಕೊಲೆ ಎಂದು ಅಸ್ಸಾಂ ಪೊಲೀಸರಿಗೆ ಖಚಿತವಾಗಿತ್ತು ಎಂದು ಶರ್ಮಾ ಹೇಳಿದರು. ಅದಕ್ಕಾಗಿಯೇ ಅವರ ಮರಣದ ಮೂರು ದಿನಗಳಲ್ಲಿ ಬಿಎನ್‌ಎಸ್‌ನ ಸೆಕ್ಷನ್ 103 ನ್ನು ಪ್ರಕರಣಕ್ಕೆ ಸೇರಿಸಲಾಗಿತ್ತು ಎಂದರು.
Published on

ಗುವಾಹಟಿ: ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಗಾಯಕ ಜುಬೀನ್ ಗರ್ಗ್ ಅವರ ಸಾವು ಸರಳ ಕೊಲೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ, ಸರಳ ಕೊಲೆ ಎಂದು ಅಸ್ಸಾಂ ಪೊಲೀಸರಿಗೆ ಖಚಿತವಾಗಿತ್ತು ಎಂದು ಶರ್ಮಾ ಹೇಳಿದರು. ಅದಕ್ಕಾಗಿಯೇ ಅವರ ಮರಣದ ಮೂರು ದಿನಗಳಲ್ಲಿ ಬಿಎನ್‌ಎಸ್‌ನ ಸೆಕ್ಷನ್ 103 ನ್ನು ಪ್ರಕರಣಕ್ಕೆ ಸೇರಿಸಲಾಗಿತ್ತು ಎಂದರು.

ವಿರೋಧ ಪಕ್ಷಗಳು ಮಂಡಿಸಿದ ಮುಂದೂಡಿಕೆ ನಿರ್ಣಯದ ಅಡಿಯಲ್ಲಿ ಅನುಮತಿಸಲಾದ ಚರ್ಚೆಯ ಸಂದರ್ಭದಲ್ಲಿ ಶರ್ಮಾ ಈ ಹೇಳಿಕೆ ನೀಡಿದ್ದಾರೆ. ಪ್ರಕರಣವು ಕೊಲೆಗೆ ಸಂಬಂಧಿಸಿದೆ ಎಂದು ಪೊಲೀಸರು ಮೊದಲೇ ತೀರ್ಮಾನಿಸಿದ್ದರು. ಇದು ಸೆಕ್ಷನ್ ನ್ನು ತ್ವರಿತವಾಗಿ ಸೇರಿಸಲು ಕಾರಣವಾಯಿತು ಎಂದರು.

Assam Chief Minister Himanta Biswa Sarma
ಜುಬೀನ್ ಗಾರ್ಗ್ ಸಾವು ಅಪಘಾತವಲ್ಲ ಕೊಲೆ: ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಆರೋಪಕ್ಕೆ ಸಾಕ್ಷಿ ಕೊಡಿ ಎಂದ ಗೊಗೊಯ್!

ಸಿಐಡಿ ಅಡಿಯಲ್ಲಿರುವ ಎಸ್‌ಐಟಿ ಇದುವರೆಗೆ ಏಳು ಜನರನ್ನು ಬಂಧಿಸಿದೆ, 252 ಸಾಕ್ಷಿಗಳನ್ನು ಪರಿಶೀಲಿಸಿದೆ ಮತ್ತು 29 ವಸ್ತುಗಳನ್ನು ವಶಪಡಿಸಿಕೊಂಡಿದೆ. ಒಬ್ಬ ಆರೋಪಿ ಗಾರ್ಗ್ ಅವರನ್ನು ಕೊಂದರೆ, ಇತರರು ಸಹಾಯ ಮಾಡಿದ್ದಾರೆ ಎಂದು ಶರ್ಮಾ ಹೇಳಿಕೊಂಡಿದ್ದಾರೆ. ನಾಲ್ಕರಿಂದ ಐದು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಡಿಸೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು, ನಂತರ ನಿರ್ಲಕ್ಷ್ಯ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ಇತರ ಅಂಶಗಳನ್ನು ಒಳಗೊಳ್ಳಲು ತನಿಖೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

52 ವರ್ಷದ ಗಾಯಕ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ನಿಧನರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com