35ರ ಮಹಿಳೆಯೊಂದಿಗೆ 75 ವರ್ಷದ ವೃದ್ಧನ ಮದುವೆ; ಮೊದಲ ರಾತ್ರಿಯ ಮಾರನೆ ದಿನವೇ ಸಾವು!

75 ವರ್ಷದ ಸಂಗ್ರುರಾಮ್ ಎಂಬ ವ್ಯಕ್ತಿ ವರ್ಷದ ಹಿಂದಷ್ಟೇ ತನ್ನ ಪತ್ನಿ ಕಳೆದುಕೊಂಡಿದ್ದ, ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆತನ ಪತ್ನಿ ವರ್ಷದ ಹಿಂದಷ್ಟೇ ಸಾವನ್ನಪ್ಪಿದ್ದರು.
75-Year-Old Man Marries 35-Year-Old
ಸಂಗ್ರುರಾಮ್ ಮತ್ತು ಮನ್ಬವತಿ
Updated on

ಜೌನ್ ಪುರ: ವರ್ಷದ ಹಿಂದೆ ಪತ್ನಿ ಕಳೆದುಕೊಂಡಿದ್ದ 75 ವರ್ಷದ ವೃದ್ಧನೋರ್ವ 35 ವರ್ಷದ ಮಹಿಳೆಯನ್ನು ಮದುವೆಯಾಗಿದ್ದು ಆಘಾತಕಾರಿ ಎಂದರೆ ಮದುವೆಯಾದ ಮಾರನೇ ದಿನವೇ ಆತ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 75 ವರ್ಷದ ಸಂಗ್ರುರಾಮ್ ಎಂಬ ವ್ಯಕ್ತಿ ವರ್ಷದ ಹಿಂದಷ್ಟೇ ತನ್ನ ಪತ್ನಿ ಕಳೆದುಕೊಂಡಿದ್ದ, ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆತನ ಪತ್ನಿ ವರ್ಷದ ಹಿಂದಷ್ಟೇ ಸಾವನ್ನಪ್ಪಿದ್ದರು. ಅಂದಿನಿಂದ ಗ್ರಾಮದಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ವೃದ್ಧ ಸಂಗ್ರು ರಾಮ್ ತನ್ನ ಕೃಷಿ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದ. ಆದರೆ ಒಂದೇ ವರ್ಷಕ್ಕೆ ಸಂಗ್ರು ರಾಮ್ ಗೆ ಒಂಟಿ ಜೀವನ ಸಾಕೆನಿಸಿತ್ತು.

ಹೀಗಾಗಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದ. ಈ ಸಂಬಂಧ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದಾಗ ಅವರು ಈ ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆ ಬೇಡ ಎಂದರು. ಆದರೆ ಅವರ ಮಾತಿಗೆ ಸೊಪ್ಪು ಹಾಕದ ಸಂಗ್ರುರಾಮ್ ಮದುವೆಗೆ ಮುಂದಾಗಿದ್ದ. ಇದಕ್ಕಾಗಿ ಆತ ಪರಿಚಯಸ್ಥರ ಮೂಲಕ ಪರಿಚಯವಾದ ಜಲಾಲ್‌ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿಯನ್ನು ಮದುವೆಯಾಗಲು ನಿರ್ಧರಿಸಿದ. ಅದರಂತೆ ಈ ಜೋಡಿ ಸೆಪ್ಟೆಂಬರ್ 29ರಂದು ಸೋಮವಾರ ಮದುವೆಯಾದರು.

ದಂಪತಿಗಳು ನ್ಯಾಯಾಲಯದಲ್ಲಿ ಮದುವೆಯನ್ನು ನೋಂದಾಯಿಸಿಕೊಂಡು ನಂತರ ಸ್ಥಳೀಯ ದೇವಾಲಯದಲ್ಲಿ ಮದುವೆ ಸಾಂಪ್ರದಾಯಿಕ ಆಚರಣೆಗಳೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿಂದೆ ಮನ್ಬವತಿಗೂ ಮದುವೆಯಾಗಿ ಆಕೆಗೂ ಮಕ್ಕಳಿದ್ದಾರೆ. ಮದುವೆಗೂ ಮುನ್ನ ಸಂಗ್ರು ರಾಮ್ ಆಕೆಯ ಮಕ್ಕಳನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದನಂತೆ. ಅಂತೆಯೇ ಆಕೆ ಕೂಡ ಸಂಗ್ರುರಾಮ್ ಮನೆಯ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಳು. ಈ ಷರತ್ತುಗಳ ಬಳಿಕವೇ ಇಬ್ಬರೂ ಹಸೆಮಣೆ ಏರಿದ್ದಾರೆ.

ಮೊದಲ ರಾತ್ರಿ ಬೆನ್ನಲ್ಲೇ ವೃದ್ಧ ಸಾವು

ಆಘಾತಕಾರಿ ವಿಷಯವೆಂದರೆ ಇಬ್ಬರೂ ಮದುವೆಯಾಗಿ ಮೊದಲ ರಾತ್ರಿಯ ಬೆನ್ನಲ್ಲೇ ವೃದ್ಧಸಂಗ್ರುರಾಮ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾತನಾಡಿದ ಪತ್ನಿ ಮನ್ಬವತಿ 'ಇಬ್ಬರೂ ಮದುವೆಯ ರಾತ್ರಿಯ ಹೆಚ್ಚಿನ ಸಮಯವನ್ನು ಮಾತನಾಡುತ್ತಾ ಕಳೆದೆವು' ಎಂದು ಹೇಳಿದ್ದಾರೆ.

ಆದಾಗ್ಯೂ, ಬೆಳಿಗ್ಗೆ, ಸಂಗ್ರರಾಮ್ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಹಠಾತ್ ಸಾವು ಗ್ರಾಮದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವು ನಿವಾಸಿಗಳು ಇದನ್ನು ನೈಸರ್ಗಿಕ ಘಟನೆ ಎಂದು ವಿವರಿಸಿದರೆ, ಇತರರು ಪರಿಸ್ಥಿತಿ ಅನುಮಾನಾಸ್ಪದವಾಗಿದೆ ಎಂದು ಶಂಕಿಸುತ್ತಿದ್ದಾರೆ.

ದೆಹಲಿಯಲ್ಲಿ ವಾಸಿಸುವ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಯ ವಿಧಿಗಳನ್ನು ನಿಲ್ಲಿಸಿದ್ದಾರೆ. ಅಂತ್ಯಕ್ರಿಯೆ ನಡೆಯುವ ಮೊದಲು ಅವರು ಹಾಜರಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪೊಲೀಸ್ ತನಿಖೆ ಅಥವಾ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆಯೇ ಎಂಬ ಬಗ್ಗೆ ಸ್ಥಳೀಯವಾಗಿ ಪ್ರಶ್ನೆಗಳು ಎದ್ದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com