ಬಿಹಾರ ಚುನಾವಣೆ: ಪ್ರಚಾರ ಪ್ರಾರಂಭಿಸಿದ ನಿತೀಶ್ ಕುಮಾರ್; ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ

ದಾಖಲೆಯ 5ನೇ ಅವಧಿಗೆ ಅಧಿಕಾರ ಹಿಡಿಯಲು ಎದುರು ನೋಡುತ್ತಿರುವ ಜೆಡಿಯು ಅಧ್ಯಕ್ಷರು, ಮುಜಾಫರ್‌ಪುರ ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಚೊಚ್ಚಲ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
CM Nitish Kumar to launch Bihar campaign today, NDA exudes confidence of returning to power.
ಬಿಹಾರದಲ್ಲಿ ಇಂದು ಚುನಾವಣಾ ಪ್ರಚಾರ ಆರಂಭಿಸಿದ ನಿತೀಶ್ ಕುಮಾರ್.
Updated on

ಮುಜಾಫರ್‌ಪುರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ತಮ್ಮ ಬದ್ಧ ವೈರಿ ಲಾಲು ಪ್ರಸಾದ್ ಯಾದವ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದು, ಅವರು ಅಧಿಕಾರದಲ್ಲಿದ್ದಾಗ 'ಮಹಿಳೆಯರಿಗಾಗಿ ಏನನ್ನೂ ಮಾಡಲಿಲ್ಲ' ಮತ್ತು ಮೇವು ಹಗರಣದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾದಾಗ ತಮ್ಮ ಪತ್ನಿ ರಾಬ್ರಿ ದೇವಿ ಅವರನ್ನು ಖುರ್ಚಿಯಲ್ಲಿ ಕೂರಿಸಿದರು ಎಂದು ಆರೋಪಿಸಿದ್ದಾರೆ.

ದಾಖಲೆಯ 5ನೇ ಅವಧಿಗೆ ಅಧಿಕಾರ ಹಿಡಿಯಲು ಎದುರು ನೋಡುತ್ತಿರುವ ಜೆಡಿಯು ಅಧ್ಯಕ್ಷರು, ಮುಜಾಫರ್‌ಪುರ ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಚೊಚ್ಚಲ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಎರಡು ಅಲ್ಪಾವಧಿಯ ಮೈತ್ರಿಗಳ ನಂತರ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿಯ ಬಗ್ಗೆ ಭ್ರಮನಿರಸನಗೊಂಡಿರುವುದಾಗಿ ಮತ್ತು ಎನ್‌ಡಿಎಯೊಂದಿಗೆ ಉಳಿಯುವುದಾಗಿ ಪ್ರತಿಜ್ಞೆ ಮಾಡಿರುವುದಾಗಿ ಹೇಳಿದರು.

'ಮಹಿಳಾ ಸಬಲೀಕರಣದಲ್ಲಿ ತಮ್ಮ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಸ್ವಸಹಾಯ ಗುಂಪುಗಳ ರಚನೆ ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯ ಭಾಗವಾಗಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗಳಿಗೆ ತಲಾ 10,000 ರೂ.ಗಳನ್ನು ವರ್ಗಾಯಿಸಲಾಗಿದೆ' ಎಂದು ಹೇಳಿದರು.

'ಅಧಿಕಾರದಲ್ಲಿರುವವರು ಮಹಿಳೆಯರಿಗಾಗಿ ಏನಾದರೂ ಮಾಡಿದ್ದಾರೆಯೇ?. ಏಳು ವರ್ಷಗಳ ನಂತರ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಾಗಲೂ ಅವರು ತಮ್ಮ ಪತ್ನಿಯನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದರು' ಎಂದು ತಮ್ಮ ವಿರೋಧಿಗಳ ಹೆಸರಿಸದೆ ಹೇಳಿದರು.

1990 ರಲ್ಲಿ ಬಿಹಾರ ಮುಖ್ಯಮಂತ್ರಿಯಾದ ಲಾಲು ಪ್ರಸಾದ್ ಯಾದವ್, 1997 ರವರೆಗೆ ಆ ಹುದ್ದೆಯಲ್ಲಿ ಇದ್ದರು. ಅಲ್ಲಿಯವರೆಗೆ ಗೃಹಿಣಿಯಾಗಿದ್ದ, ರಾಜಕೀಯದ ಬಗ್ಗೆ ಏನೂ ತಿಳಿದಿರದ ಅವರ ಪತ್ನಿಯನ್ನು ಉನ್ನತ ಹುದ್ದೆಗೆ ನೇಮಿಸಲಾಯಿತು. ಈ ನಡೆಯು ಆ ದಿನಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.

2005ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಆರ್‌ಜೆಡಿಯನ್ನು ಸೋಲಿಸಿದ ನಿತೀಶ್ ಕುಮಾರ್, ಮೊದಲು 2015 ರಲ್ಲಿ ಮತ್ತು ನಂತರ 2022 ರಲ್ಲಿ ತಮ್ಮ ಬದ್ಧ ವೈರಿಯ ಪಕ್ಷದೊಂದಿಗಿನ ಮೈತ್ರಿಯನ್ನು ನೆನಪಿಸಿಕೊಂಡರು.

'ಕೆಲವು ಸಂದರ್ಭಗಳಿಂದಾಗಿ, ನಾನು ಆ ಜನರೊಂದಿಗೆ ಸಂಬಂಧ ಹೊಂದಬೇಕಾಯಿತು. ಆದರೆ, ಅವರು ಯಾವುದಕ್ಕೂ ಒಳ್ಳೆಯವರಲ್ಲ ಎಂದು ಅರಿತುಕೊಳ್ಳಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಈಗ ನಾನು ಶಾಶ್ವತವಾಗಿ (ಎನ್‌ಡಿಎಗೆ) ಮರಳಿದ್ದೇನೆ' ಎಂದು ಹೇಳಿದರು.

CM Nitish Kumar to launch Bihar campaign today, NDA exudes confidence of returning to power.
ಬಿಹಾರ ಚುನಾವಣೆ: ಬಿಜೆಪಿ ಎದುರು ಚೌಕಾಶಿ; ಶಕ್ತಿ ಕಳೆದುಕೊಂಡ ನಿತೀಶ್‌ (ನೇರ ನೋಟ)

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ನಾನು ಅಧಿಕಾರ ವಹಿಸಿಕೊಳ್ಳುವವರೆಗೂ ಅಪರಾಧಿಗಳಿಗೆ ಅಧಿಕಾರದಲ್ಲಿರುವವರು ಪ್ರೋತ್ಸಾಹ ನೀಡುತ್ತಿದ್ದರು ಎಂಬ ಆರೋಪದಿಂದಾಗಿ ಬಿಹಾರದಲ್ಲಿ 'ಭಯೋತ್ಪಾದನೆಯ ವಾತಾವರಣ' ಇತ್ತು. ಆದರೆ ಈಗ ವಿಷಯಗಳು ಎಷ್ಟು ಬದಲಾಗಿವೆ ಎಂಬುದನ್ನು ಎಲ್ಲರೂ ನೋಡಬೇಕಾಗಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿವಾದಗಳು ಸಹ ಕಡಿಮೆಯಾಗಿವೆ. ಏಕೆಂದರೆ, ನಾವು ಎರಡೂ ಧರ್ಮಗಳ ಧಾರ್ಮಿಕ ಸ್ಥಳಗಳಿಗೆ ಬೇಲಿ ಹಾಕುವಂತಹ ಸೂಕ್ಷ್ಮ ವಿಚಾರಗಳನ್ನು ಅರಿತುಕೊಂಡಿದ್ದೇವೆ ಎಂದು ಅವರು ಒತ್ತಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com