ಬಿಹಾರ: ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು ನಾಲ್ವರ ದುರ್ಮರಣ; ದೀಪಾವಳಿ ಜಾತ್ರೆ ಮುಗಿಸಿ ಮನೆಗೆ ಹೋಗುವಾಗ ದುರಂತ

ದೀಪಾವಳಿ ಪ್ರಯುಕ್ತ ತಮ್ಮ ಗ್ರಾಮದ ಬಳಿ ಆಯೋಜಿಸಿದ್ದ ಜಾತ್ರೆ ಮುಗಿಸಿಕೊಂಡು ರೈಲು ಹಳಿ ದಾಟಿ ವಾಪಸ್ ಮನೆ ಕಡೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಬರುವುದನ್ನು ಸರಿಯಾಗಿ ಗಮನಿಸದೇ ಹೋಗಿದ್ದರಿಂದ ಘಟನೆ ಸಂಭವಿಸಿದೆ.
Representational image
ಸಾಂಕೇತಿಕ ಚಿತ್ರ
Updated on

ಬೇಗುಸರಾಯ್: ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎಂದು ಸಾಹೇಬ್‌ಪುರ ಕಮಲ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮೃತರನ್ನು ರಾಹುವಾ ಎಂಬ ಹಳ್ಳಿಯ ರೀಟಾ ದೇವಿ (40) ಮತ್ತು ಅವರ ಮಗಳು ರೋಶನಿ ಕುಮಾರಿ (14) ಹಾಗೂ ಅದೇ ಊರಿನವರಾದ ಆರೋಹಿ (7) ಹಾಗೂ ಧರ್ಮದೇವ್ ಮೆಹತೋ (36) ಎಂದು ಗುರುತಿಸಲಾಗಿದೆ.

ಈ ನಾಲ್ವರೂ ದೀಪಾವಳಿ ಪ್ರಯುಕ್ತ ತಮ್ಮ ಗ್ರಾಮದ ಬಳಿ ಆಯೋಜಿಸಿದ್ದ ಜಾತ್ರೆ ಮುಗಿಸಿಕೊಂಡು ರೈಲು ಹಳಿ ದಾಟಿ ವಾಪಸ್ ಮನೆ ಕಡೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೈಲು ಬರುವುದನ್ನು ಸರಿಯಾಗಿ ಗಮನಿಸದೇ ಹೋಗಿದ್ದರಿಂದ ಘಟನೆ ಸಂಭವಿಸಿದೆ. ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Representational image
ಮೊಜಾಂಬಿಕ್‌ನಲ್ಲಿ ಬೋಟ್ ದುರಂತ: ಮೂವರು ಭಾರತೀಯರ ಸಾವು; ಕುಟುಂಬಗಳೊಂದಿಗೆ ಹೈಕಮಿಷನ್ ಸಂಪರ್ಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com