ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿದ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್

ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆಯಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆ ಬೆಳಗ್ಗೆ 8.30 ರಿಂದ ಇಂದು ಬೆಳಿಗ್ಗೆ 5.30 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿದ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್
Updated on

ಶ್ರೀನಗರ: ನಿರಂತರ ಮಳೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ, ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆ ಸಂಪರ್ಕವಾದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆಯಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆ ಬೆಳಗ್ಗೆ 8.30 ರಿಂದ ಇಂದು ಬೆಳಿಗ್ಗೆ 5.30 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮುವಿನಲ್ಲಿ 81 ಮಿ.ಮೀ., ರಿಯಾಸಿ 203 ಮಿ.ಮೀ., ಕತ್ರಾ 193 ಮಿ.ಮೀ., ಸಾಂಬಾ 48 ಮಿ.ಮೀ., ರಾಂಬನ್ 82 ಮಿ.ಮೀ., ಬಡೇರ್ವಾ 96.2 ಮಿ.ಮೀ., ಬಟೋಟ್ 157.3 ಮಿ.ಮೀ., ದೋಡಾ 114 ಮಿ.ಮೀ., ಕಿಶ್ತ್ವಾರ್ 50 ಮಿ.ಮೀ., ಬನಿಹಾಲ್ 95 ಮಿ.ಮೀ., ರಾಜೌರಿ 57.4 ಮಿ.ಮೀ., ಪಹಲ್ಗಾಮ್ 55 ಮಿ.ಮೀ., ಕೊಕರ್ನಾಗ್ 68.2 ಮಿ.ಮೀ., ಶ್ರೀನಗರ ವೀಕ್ಷಣಾಲಯ 32 ಮಿ.ಮೀ. ಮತ್ತು ಖಾಜಿಗುಂಡ್ 68 ಮಿ.ಮೀ. ಮಳೆಯಾಗಿದೆ ಎಂದು ಅವರು ಹೇಳಿದರು.

ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿದ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್
ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ನಿರಂತರ ಮಳೆಯಿಂದಾಗಿ, ಜಮ್ಮು ಪ್ರದೇಶದ ಚೆನಾಬ್ ಮತ್ತು ಕಾಶ್ಮೀರದ ಝೀಲಂನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಜಮ್ಮು ಪ್ರದೇಶದ ಚೆನಾಬ್ ಮತ್ತು ಉಧಂಪುರದಲ್ಲಿ ನೀರು ಅಪಾಯದ ಮಟ್ಟ ಮತ್ತು ಪ್ರವಾಹ ಎಚ್ಚರಿಕೆಯ ಗುರುತು ದಾಟಿದ್ದರೆ, ಕಣಿವೆಯ ಝೀಲಂನಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ನಿರಂತರ ಮಳೆಯಿಂದಾಗಿ ದಕ್ಷಿಣ ಕಾಶ್ಮೀರದ ವೈಶೋ ನಲ್ಲದಲ್ಲಿ ನೀರಿನ ಮಟ್ಟ ಕಳೆದ ಎರಡು ಗಂಟೆಗಳಲ್ಲಿ ಏರಿಕೆಯಾಗಿದೆ.

ಸ್ವತಂತ್ರ ಹವಾಮಾನ ಮುನ್ಸೂಚಕ ಆದಿಲ್ ಮಕ್ಬೂಲ್ ಅವರ ಪ್ರಕಾರ, ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ವೈಶೋ ನಲ್ಲಾ, ಶೇಷ್‌ನಾಗ್ ನಲ್ಲಾ ಮತ್ತು ಲಿಡ್ಡರ್ ನಲ್ಲಾಗಳು ಈಗಾಗಲೇ ಅಪಾಯದ ಮಟ್ಟವನ್ನು ದಾಟಿವೆ. ನಿರಂತರ ಮಳೆಯಿಂದಾಗಿ ಶ್ರೀನಗರದ ರಾಮ್ ಮುನ್ಶಿ ಬಾಗ್‌ನಲ್ಲಿರುವ ಝೀಲಂ ನೀರಿನ ಮಟ್ಟವು ಇಂದು ಪ್ರವಾಹ ಘೋಷಣೆಯ ಮಟ್ಟವನ್ನು ದಾಟುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಜಮ್ಮುವಿನಲ್ಲಿ ಮಳೆಯ ನಡುವೆಯೂ ನದಿಗೆ ಅಡ್ಡಲಾಗಿ ಇರುವ ಸೇತುವೆಯ ಮೇಲೆ ವಾಹನಗಳು ಚಲಿಸುತ್ತಿವೆ
ಜಮ್ಮುವಿನಲ್ಲಿ ಮಳೆಯ ನಡುವೆಯೂ ನದಿಗೆ ಅಡ್ಡಲಾಗಿ ಇರುವ ಸೇತುವೆಯ ಮೇಲೆ ವಾಹನಗಳು ಚಲಿಸುತ್ತಿವೆ

ಜಮ್ಮು ಮತ್ತು ದಕ್ಷಿಣ ಕಾಶ್ಮೀರದ ಕೆಲವು ಭಾಗಗಳಲ್ಲಿ ಮತ್ತೊಂದು ಸುತ್ತಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಧ್ಯ ಮತ್ತು ಉತ್ತರ ಕಾಶ್ಮೀರದ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಆದಿಲ್ ಹೇಳಿದರು.

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಮುಚ್ಚುವಿಕೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ಕಣಿವೆಯಲ್ಲಿ ಹಣ್ಣು- ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿವೆ. ಹೆದ್ದಾರಿಯು ಈ ಪ್ರದೇಶಕ್ಕೆ ನಿರ್ಣಾಯಕ ಸರಬರಾಜು ಮಾರ್ಗವಾಗಿ ಉಳಿದಿದೆ.

ಜಮ್ಮು ಮತ್ತು ಕಾಶ್ಮೀರ, ವಿಶೇಷವಾಗಿ ಜಮ್ಮು ಪ್ರದೇಶ, ಆಗಸ್ಟ್ ಮಧ್ಯಭಾಗದಿಂದ ಮಳೆಯಿಂದ ಹಾನಿಗೊಳಗಾಗಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾದ ಮೋಡ ಸ್ಫೋಟಗಳು, ಭೂಕುಸಿತಗಳು ಮತ್ತು ದಿಢೀರ್ ಪ್ರವಾಹದಲ್ಲಿ 150 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ವಸತಿ ಮನೆಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com