
ಜಾರ್ಖಂಡ್: ಜಾರ್ಖಂಡ್ನ ಡುಮ್ಕಾ ಜಿಲ್ಲೆಯಲ್ಲಿ ಗುರುವಾರ 12 ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆರೈಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥಕೇಶೋ ಗ್ರಾಮದಲ್ಲಿ ಈ ಘಟನೆ ನಡೆದಿದೆ.
"ಆ ಬಾಲಕ ತನ್ನ ತಾಯಿಯೊಂದಿಗೆ ಸ್ಮಾರ್ಟ್ಫೋನ್ಗಾಗಿ ಆಗಾಗ್ಗೆ ಜಗಳವಾಡುತ್ತಿದ್ದ, ಯುವಕ ತನ್ನ ತಾಯಿ ಬದ್ರಿಕಾ ದೇವಿ ಬಳಿ ಸ್ಮಾರ್ಟ್ಫೋನ್ಗಾಗಿ ಬೇಡಿಕೆ ಇಡುತ್ತಿದ್ದ. ಆದರೆ, ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಆಕೆ ಅದನ್ನು ಖರೀದಿಸಲು ನಿರಾಕರಿಸಿದ್ದರು.
"ಗುರುವಾರ ಬೆಳಿಗ್ಗೆ, ಬಾಲಕ ಶಾಲೆಯಿಂದ ಹಿಂತಿರುಗಿದಾಗ ಈ ವಿಷಯವಾಗಿ ತನ್ನ ತಾಯಿಯೊಂದಿಗೆ ಮತ್ತೊಂದು ಸುತ್ತಿನ ಜಗಳವಾಡಿದ್ದ. ಮಧ್ಯಾಹ್ನ ಹತ್ತಿರದ ಹೊಲದಿಂದ ಹಿಂತಿರುಗಿದಾಗ, ಆತ ತನ್ನ ಹುಲ್ಲಿನ ಮನೆಯ ಛಾವಣಿಯಿಂದ ಬಟ್ಟೆಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ" ಎಂದು ಸೆರೈಯಾಹತ್ ಪೊಲೀಸ್ ಠಾಣಾಧಿಕಾರಿ ರಾಜೇಂದ್ರ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
ಹುಡುಗನ ತಂದೆ ಬೆಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. "ನಾವು ಮೃತದೇಹವನ್ನು ಡುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ" ಎಂದು ಯಾದವ್ ಹೇಳಿದರು.
Advertisement