'ತಮಿಳು ನಾಡು ದೆಹಲಿಯನ್ನು ಸೋಲಿಸಿದೆ,ಏ. 23ರಂದು ದೆಹಲಿಯ ಅಹಂಕಾರ, ಅದನ್ನು ಬೆಂಬಲಿಸುವ ಗುಲಾಮರನ್ನೂ ಒಟ್ಟಾಗಿ ಸೋಲಿಸುತ್ತೇವೆ': M K Stalin

ತಮಿಳುನಾಡು ದೆಹಲಿಯನ್ನು ಸೋಲಿಸಿದೆ! ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಚುನಾವಣೆಯಲ್ಲಿಯೂ ಬಿಜೆಪಿಯನ್ನು ಹಾಗೂ ಎಐಎಡಿಎಂಕೆಯನ್ನೂ ಸೋಲಿಸಲು ಹೋರಾಟ ಮುಂದುವರಿಸೋಣ ಎಂದು ಕರೆ ನೀಡಿದರು.
M K Stalin
ಎಂ ಕೆ ಸ್ಟಾಲಿನ್
Updated on

ಚೆನ್ನೈ: ಸಂಸತ್ತಿನ ಕೆಳ ಸದನ ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಸೋಲಿನ ಬಳಿಕ ತಕ್ಷಣವೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇದನ್ನು ತಮಿಳುನಾಡಿನ ಗೆಲುವು ಎಂದು ಬಣ್ಣಿಸಿದ್ದಾರೆ.

ತಮಿಳುನಾಡು ದೆಹಲಿಯನ್ನು ಸೋಲಿಸಿದೆ!” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಚುನಾವಣೆಯಲ್ಲಿಯೂ ಬಿಜೆಪಿಯನ್ನು ಹಾಗೂ ಎಐಎಡಿಎಂಕೆಯನ್ನೂ ಸೋಲಿಸಲು ಹೋರಾಟ ಮುಂದುವರಿಸೋಣ ಎಂದು ಕರೆ ನೀಡಿದರು. ಏಪ್ರಿಲ್ 23ರಂದು ದೆಹಲಿಯ ಅಹಂಕಾರವನ್ನೂ, ಅದನ್ನು ಬೆಂಬಲಿಸುವವರನ್ನೂ ನಾವು ಒಟ್ಟಾಗಿ ಸೋಲಿಸೋಣ ಎಂದು ಅವರು ಹೇಳಿದರು.

ತಮಿಳುನಾಡಿನ ಡಿಎಂಕೆ ಸಂಸದರು ಮತ್ತು ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ ಹಾಗೂ ತೆಲಂಗಾಣದಂತಹ ರಾಜ್ಯಗಳಲ್ಲಿ ಬಿಜೆಪಿಗೆ ವಿರೋಧಿಗಳಾದ ನಾಯಕರು ಮಸೂದೆಯ ವಿರುದ್ಧ ಒಟ್ಟಾಗಿ ಮತ ಚಲಾಯಿಸಿದರು.

M K Stalin
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು; ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ NDA ವಿಫಲ

ಮತ್ತೊಂದು ಪೋಸ್ಟ್‌ನಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕೆಂದು ತಾನು ಬಯಸಿದ್ದೇನೆ, ಆದರೆ ಆತಂಕ ಕ್ಷೇತ್ರ ಮರುವಿಂಗಡಣೆಯ ಕುರಿತದ್ದಷ್ಟೇ ಎಂದು ಸ್ಟಾಲಿನ್ ಹೇಳಿದರು. ಡಿಲಿಮಿಟೇಶನ್ ನ್ಯಾಯಸಮ್ಮತವಾಗಿರಲು, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ, ಸೂಕ್ಷ್ಮವಾಗಿ ಚಿಂತನೆ ಅಗತ್ಯ. ನಾವು ಸಲಹೆ, ಸ್ಪಷ್ಟತೆ ಮತ್ತು ಒಪ್ಪಿಗೆಯನ್ನು ಕೇಳಿದ್ದೇವೆ. ಕನಿಷ್ಠ ಮಟ್ಟದಲ್ಲಿ ಮಸೂದೆಯನ್ನು ಬೇರ್ಪಡಿಸಿ ಜಾರಿಗೆ ತರಬಹುದಿತ್ತು ಎಂದು ಅವರು ಹೇಳಿದರು.

ಆದರೆ ಎನ್‌ಡಿಎ ಸರ್ಕಾರ ಅದನ್ನು ಬೇರ್ಪಡಿಸಿ ಜಾರಿಗೆ ತರಲಿಲ್ಲ. ಇದು ನ್ಯಾಯವಲ್ಲ. ಇದು ಕೇವಲ ಪ್ರದರ್ಶನ ಎಂದು ಹೇಳಿ, ತಮಿಳುನಾಡಿನ ಮಹಿಳೆಯರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು. ಭಾರತದ ಮಹಿಳೆಯರು ಮತ ಬ್ಯಾಂಕ್ ಅಲ್ಲ. ಅವರು ಗಮನಿಸುತ್ತಿದ್ದಾರೆ ಎಂದರು.

ಸತ್ಯ ಸರಳವಾಗಿತ್ತು — ಬಿಜೆಪಿ ಇದನ್ನು ಮಾಡಬಹುದಿತ್ತು, ಆದರೆ ಮಾಡಲಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com