ದ್ರಾವಿಡ ಸಿದ್ಧಾಂತ ದ್ವೇಷಿಸುವ RSS ತಮಿಳುನಾಡು ಆಳಲು ಯೋಜಿಸುತ್ತಿದೆ: ಬಿಜೆಪಿಗೆ AIADMK ಶರಣಾಗಿದೆ; ರಾಹುಲ್ ಗಾಂಧಿ

ಕನ್ಯಾಕುಮಾರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ದ್ರಾವಿಡ ಸಿದ್ಧಾಂತವನ್ನು ದ್ವೇಷಿಸುವ ಆರ್‌ಎಸ್‌ಎಸ್ ಕೂಡ ತಮಿಳುನಾಡನ್ನು ಆಳಲು ಯೋಜಿಸುತ್ತಿದೆ" ಎಂದು ಹೇಳಿದರು.
Rahul gandhi
ರಾಹುಲ್ ಗಾಂಧಿ
Updated on

ಕನ್ಯಾಕುಮಾರಿ: ಎಐಎಡಿಎಂಕೆ ನಾಯಕರು "ಭ್ರಷ್ಟಾಚಾರ" ದಿಂದಾಗಿ ಬಿಜೆಪಿಗೆ "ಶರಣಾಗಿದ್ದಾರೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಾದೇಶಿಕ ಪಕ್ಷವು ಈಗ ತಮಿಳುನಾಡಿನಲ್ಲಿ ಬಿಜೆಪಿ ಪ್ರವೇಶಕ್ಕೆ ಒಂದು ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಕನ್ಯಾಕುಮಾರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ದ್ರಾವಿಡ ಸಿದ್ಧಾಂತವನ್ನು ದ್ವೇಷಿಸುವ ಆರ್‌ಎಸ್‌ಎಸ್ ಕೂಡ ತಮಿಳುನಾಡನ್ನು ಆಳಲು ಯೋಜಿಸುತ್ತಿದೆ" ಎಂದು ಹೇಳಿದರು.

ಪ್ರತಿಯೊಂದು ರಾಜ್ಯವು ತನ್ನ ಧ್ವನಿ ಮತ್ತು ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಪ್ರತಿಯೊಂದು ರಾಜ್ಯದ ಜನರು ತಮ್ಮ ರಾಜ್ಯವನ್ನು ನಡೆಸಬೇಕು. ಆದರೆ ಬಿಜೆಪಿ ಈ ರೀತಿ ಯೋಚಿಸುವುದಿಲ್ಲ. ಅದು ಒಂದು ಸಂಪ್ರದಾಯ, ಒಂದು ಭಾಷೆ ಮತ್ತು ಒಂದು ಇತಿಹಾಸ ಎಂದು ನಂಬುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ವಿಕೇಂದ್ರೀಕೃತ ಆಡಳಿತದ ತತ್ವಗಳಿಗೆ ಅನುಗುಣವಾಗಿ ತಮಿಳುನಾಡನ್ನು ತನ್ನದೇ ಆದ ಜನರಿಂದ ಆಳಬೇಕು ಎಂದು ಅವರು ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಮೇಲೆ ಪ್ರಭಾವ ಬೀರುತ್ತಿದ್ದಾರೆ.

Rahul gandhi
ಅವರು ಜಿಗಿ ಎಂದರೆ ಜಿಗಿಯುತ್ತಾರೆ, ಹೇಳಿದ್ದು ಮಾಡ್ತಾರೆ; ಮೋದಿ ಸಂಪೂರ್ಣ ಟ್ರಂಪ್ ನಿಯಂತ್ರಣದಲ್ಲಿದ್ದಾರೆ: ರಾಹುಲ್ ಗಾಂಧಿ

ಅವರು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಮೂಲಕ ತಮಿಳುನಾಡನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ ಎಂದರು. ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ತಮಿಳು ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಕಾಪಾಡಲು ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com