ಕೆಲಸದಿಂದ ವಜಾ ಮಾಡಿದ್ದಕ್ಕೆ ಆಕ್ರೋಶ: IRS ಅಧಿಕಾರಿ ಮಗಳ ಅತ್ಯಾಚಾರ ಮಾಡಿ ಕೊಲೆಗೈದ ಮನೆಕೆಲಸದವ!

ಮೇಲ್ನೋಟಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿ, ಬಳಿಕ ಮೊಬೈಲ್ ಫೋನ್ ಚಾರ್ಜರ್‌ ವೈರ್ ನಿಂದ ಕತ್ತು ಬಿಗಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Delhi rape and murder case
ದೆಹಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ
Updated on

ನವದೆಹಲಿ: ಐಐಟಿ ಪದವೀಧರೆ ಮತ್ತು ಹಿರಿಯ ಅಧಿಕಾರಿಯೊಬ್ಬರ ಪುತ್ರಿಯಾಗಿರುವ 22 ವರ್ಷದ ಮಹಿಳೆಯೊಬ್ಬರು ಆಗ್ನೇಯ ದೆಹಲಿಯ ಕೈಲಾಶ್ ಪ್ರದೇಶದ ಪೂರ್ವದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹೌದು.. ದೆಹಲಿಯ ಅಮರ್ ಕಾಲೋನಿಯ ಕೈಲಾಶ್ ಹಿಲ್ಸ್‌ನಲ್ಲಿ ಹಿರಿಯ ಐಆರ್‌ಎಸ್ (IRS) ಅಧಿಕಾರಿಯೊಬ್ಬರ 22 ವರ್ಷದ ಮಗಳನ್ನು, ಅವರ ಮನೆಯಲ್ಲೇ ಕೆಲಸಕ್ಕಿದ್ದ ಮಾಜಿ ಸಹಾಯಕ 19 ವರ್ಷದ ರಾಹುಲ್ ಮೀನಾ ಎಂಬಾತ ಅತ್ಯಾಚಾರ ಎಸಗಿ ಕೊಂದಿದ್ದಾನೆ. ಈತನನ್ನು ಒಂದು ತಿಂಗಳ ಹಿಂದಷ್ಟೇ ಕೆಲಸದಿಂದ ತೆಗೆದುಹಾಕಲಾಗಿತ್ತು.

ಮೇಲ್ನೋಟಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿ, ಬಳಿಕ ಮೊಬೈಲ್ ಫೋನ್ ಚಾರ್ಜರ್‌ ವೈರ್ ನಿಂದ ಕತ್ತು ಬಿಗಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಈ ದುಷ್ಕೃತ್ಯವೆಸಗಲಾಗಿದೆ ಎಂದು ಹೇಳಲಾಗಿದೆ.

ಅಂತೆಯೇ ದುಷ್ಕರ್ಮಿ ಮನೆಗೆ ಬಲವಂತವಾಗಿ ಪ್ರವೇಶಿಸಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಪೋಷಕರು ಜಿಮ್‌ಗೆ ಹೋಗಿದ್ದ ಸಮಯ ನೋಡಿ, ಮನೆಯ ಹೊರಗಿದ್ದ ಬಿಡಿ ಕೀಲಿಯನ್ನು ಬಳಸಿ ಒಳನುಗ್ಗಿದ ಆರೋಪಿ, ಯುವತಿಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿ ನಂತರ ಮೊಬೈಲ್ ಚಾರ್ಜಿಂಗ್ ಕೇಬಲ್‌ನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ.

Delhi rape and murder case
ಬೆಂಗಳೂರು ಏರ್‌ಪೋರ್ಟ್ ನಲ್ಲಿ 3.89 ಕೋಟಿ ರೂ. ಮೌಲ್ಯದ ಗಾಂಜಾ ವಶ; ಪ್ರಯಾಣಿಕನ ಬಂಧನ!

ಮನೆಕೆಲಸದವನಿಂದಲೇ ಕೃತ್ಯ

ಇನ್ನು ಪೊಲೀಸರು ಈ ಪ್ರಕರಣ ಸಂಬಂಧ ಒಂದು ತಿಂಗಳ ಹಿಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಮನೆಕೆಲಸಗಾರ ರಾಹುಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈತನೇ ಐಆರ್ ಎಸ್ ಅಧಿಕಾರಿ ಪುತ್ರಿಯ ಕೊಂದು ಹಾಕಿರಬಹುದು ಎಂದು ಎಂದು ಹೇಳಲಾಗಿದೆ.

ಆನ್ಲೈನ್ ಗೇಮಿಂಗ್ ಚಟ ಅಂಟಿಸಿಕೊಂಡಿದ್ದ ಆರೋಪಿ

ಇನ್ನು "ತನಿಖೆಯಲ್ಲಿ ಕೊಲೆ ಆರೋಪಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು ಮತ್ತು ಸುತ್ತಮುತ್ತಲಿನ ಇತರ ಸೇವಕರಿಂದ ಅಥವಾ ಹತ್ತಿರದ ಮನೆಗಳಲ್ಲಿ ಕೆಲಸ ಮಾಡುವ ಮನೆಕೆಲಸಗಾರರಿಂದ ಹಣ ಸಾಲ ಪಡೆಯುತ್ತಿದ್ದ, ಅವುಗಳನ್ನು ಎಂದಿಗೂ ಮರುಪಾವತಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದ ಐಆರ್ಎಸ್ ಅಧಿಕಾರಿ ಅದಕ್ಕಾಗಿಯೇ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು" ಎಂದು ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಹೇಳಿದರು.

ದ್ವಾರಕಾ ಪ್ರದೇಶದ ಹೋಟೆಲ್‌ನಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಅವನ ವಿರುದ್ಧ ಅತ್ಯಾಚಾರ, ಕೊಲೆ ಮತ್ತು ದರೋಡೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದಿಂದ ಕಿತ್ತೊಗೆದಿದ್ದಕ್ಕೇ ಆಕ್ರೋಶ

ಕೆಲಸದಿಂದ ತೆಗೆದುಹಾಕಿದ್ದಕ್ಕೆ ದ್ವೇಷ ಅಥವಾ ಹಣದ ಲೂಟಿ (ಮನೆಯಿಂದ ಸುಮಾರು ೨.೫ ಲಕ್ಷ ರೂ. ನಾಪತ್ತೆ) ಘಟನೆಗೆ ಕಾರಣ ಎನ್ನಲಾಗಿದೆ. ದೆಹಲಿಯ ಈ ಕೃತ್ಯಕ್ಕೂ ಮುನ್ನವೇ ಆರೋಪಿಯು ರಾಜಸ್ಥಾನದ ಅಲ್ವಾರ್‌ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವು ಕೊಟ್ಟ ಸಿಸಿಟಿವಿ

ಬೆಳಿಗ್ಗೆ 6:28 ಕ್ಕೆ ಸಂತ್ರಸ್ಥೆಯ ಮನೆಯಿಂದ ಹೊರಟ ರಾಹುಲ್ ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ. ಪೊಲೀಸರ ಪ್ರಕಾರ, ಮಹಿಳೆಯನ್ನು ಆಕೆಯ ಕುಟುಂಬ ಸದಸ್ಯರು ಮನೆಯೊಳಗೆ ಅನುಮಾನಾಸ್ಪದ ಸನ್ನಿವೇಶದಲ್ಲಿ ಕಂಡುಕೊಂಡರು. ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸಂತ್ರಸ್ತ ಮಹಿಳೆ ಡಿಪಿಎಸ್ ಆರ್‌ಕೆ ಪುರಂನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ನಂತರ ಐಐಟಿ ದೆಹಲಿಯಿಂದ ಪದವಿ ಪಡೆದಿದ್ದಳು. ಅವಳು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.

ಅವಳು ನರ್ತಕಿಯೂ ಆಗಿದ್ದಳು ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಳು. ಆಕೆಯ ಅಣ್ಣ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ ಮತ್ತು ಆಕೆಯ ತಾಯಿ ವೈದ್ಯೆ. ಪೊಲೀಸರು ಅಲ್ವಾರ್‌ನಲ್ಲಿರುವ ರಾಹುಲ್ ನಿವಾಸವನ್ನು ತಲುಪಿದಾಗ, ಅವರು ಈ ಹಿಂದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಆರೋಪಿ ಹಿಂದಿನ ರಾತ್ರಿ ಅಲ್ವಾರ್‌ನಿಂದ ದೆಹಲಿಗೆ ಬಂದಿದ್ದು, ನಕಲಿ ಕೀಲಿಯನ್ನು ಬಳಸಿ ಮನೆಗೆ ಪ್ರವೇಶಿಸಿದ್ದಾನೆ ಎಂದು ಶಂಕಿಸಲಾಗಿದೆ. ಐಆರ್‌ಎಸ್ ಅಧಿಕಾರಿಯ ಕಚೇರಿಯಲ್ಲಿ ನಿಯೋಜಿಸಲಾದ ಸೂಪರಿಂಟೆಂಡೆಂಟ್‌ನ ಉಲ್ಲೇಖದ ಮೇರೆಗೆ ರಾಹುಲ್‌ನನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com