ಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನಿರಾಕರಣೆ: KSRTC ಬಸ್‌ಗೆ 30,000 ರೂ. ದಂಡ: ವರದಿ

ಕೇರಳದ ತ್ರಿಶೂರ್‌ನ ಅಂಬಲ್ಲೂರಿನಿಂದ ಮಲಪ್ಪುರಂನ ಕೊಲಪ್ಪುರಂಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಹತ್ತಿದ್ದ ತೋಟಶೇರಿಯಾರ ಮೂಲದ ವ್ಯಕ್ತಿ ಸಲ್ಲಿಸಿದ ದೂರಿನ ಮೇರೆಗೆ ಜಿಲ್ಲಾ ಗ್ರಾಹಕ ಆಯೋಗ ಈ ಕ್ರಮ ಕೈಗೊಳ್ಳಲಾಗಿದೆ.
KSRTC Bus Fined Rs 30,000 For Denying Seat To Ailing Passenger
ಕೇರಳ ಕೆಎಸ್ ಆರ್ ಟಿಸಿ ಬಸ್ ಗೆ ದಂಡ
Updated on

ತ್ರಿಶೂರ್: ಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನಿರಾಕರಿಸಿದ ಕಾರಣಕ್ಕೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಗೆ ಬರೊಬ್ಬರಿ 30 ಸಾವಿರ ದಂಡ ಹೇರಲಾಗಿದೆ.

ಹೌದು.. ಕೇರಳದ ತ್ರಿಶೂರ್‌ನ ಅಂಬಲ್ಲೂರಿನಿಂದ ಮಲಪ್ಪುರಂನ ಕೊಲಪ್ಪುರಂಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಹತ್ತಿದ್ದ ತೋಟಶೇರಿಯಾರ ಮೂಲದ ವ್ಯಕ್ತಿ ಸಲ್ಲಿಸಿದ ದೂರಿನ ಮೇರೆಗೆ ಜಿಲ್ಲಾ ಗ್ರಾಹಕ ಆಯೋಗ ಈ ಕ್ರಮ ಕೈಗೊಳ್ಳಲಾಗಿದೆ.

ಅಧಿಕಾರಿಗಳ ಹೇಳಿಕೆಯ ಪ್ರಕಾರ, ಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನಿರಾಕರಿಸಿ ಅವರನ್ನು ಅವರ ನಿಗದಿತ ನಿಲ್ದಾಣದಲ್ಲಿ ಇಳಿಸದಿದ್ದಕ್ಕಾಗಿ ಈ ಜಿಲ್ಲೆಯ ಜಿಲ್ಲಾ ಗ್ರಾಹಕ ಆಯೋಗವು ರಾಜ್ಯ ಮಟ್ಟದ ಕೆಎಸ್‌ಆರ್‌ಟಿಸಿಗೆ 30,000 ರೂ. ದಂಡ ವಿಧಿಸಿದೆ.

ಇತ್ತೀಚೆಗೆ ತ್ರಿಶೂರ್‌ನ ಅಂಬಲ್ಲೂರಿನಿಂದ ಮಲಪ್ಪುರಂನ ಕೊಲಪ್ಪುರಂಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಹತ್ತಿದ್ದ ತೋಟಶೇರಿಯಾರ ಮೂಲದ ಮೊಹಮ್ಮದ್ ಜೈನುದ್ದೀನ್ ಕೊರ್ಮತ್ ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಬಸ್ ಹತ್ತಿದ ನಂತರ, ದೂರುದಾರರು ಶನಿವಾರ ನೀಡಿದ ಹೇಳಿಕೆಯ ಪ್ರಕಾರ, ಅವರು ಬಸ್ ಹತ್ತಿದಾಗ ಬಸ್ ನಲ್ಲಿ ಯಾವುದೇ ಖಾಲಿ ಸೀಟುಗಳಿಲ್ಲ ಎಂದು ಅರಿತುಕೊಂಡರು. ಕಂಡಕ್ಟರ್‌ಗೆ ಅವರ ವೈದ್ಯಕೀಯ ಸ್ಥಿತಿ ಮತ್ತು ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದ ಬಗ್ಗೆ ತಿಳಿಸಿದಾಗ, ತ್ರಿಶೂರ್‌ನಿಂದ ಸೀಟು ಲಭ್ಯವಾಗಲಿದೆ ಎಂದು ಅವರಿಗೆ ಭರವಸೆ ನೀಡಲಾಯಿತು. ನಂತರ ಅವರು ಕೊಳಪ್ಪುರಂಗೆ ಟಿಕೆಟ್ ತೆಗೆದುಕೊಂಡರು.

KSRTC Bus Fined Rs 30,000 For Denying Seat To Ailing Passenger
ಪೊಲೀಸಪ್ಪನ ಅಕ್ರಮ ಸಂಬಂಧಕ್ಕೆ ಇಬ್ಬರು ಬಲಿ: ಕಾನ್ಸ್‌ಟೇಬಲ್‌ನ ಪತ್ನಿ, ಮಗುವನ್ನು ಇರಿದು ಕೊಂದ ಯುವತಿ!

ತ್ರಿಶೂರ್‌ನಲ್ಲಿ, ಕೆಲವು ಸೀಟುಗಳು ಖಾಲಿಯಾದಾಗ, ದೂರುದಾರರು ಒಂದು ಸೀಟ್ ನಲ್ಲಿ ಕುಳಿತುಕೊಂಡಿದ್ದಾರೆ. ಈ ವೇಳೆ ಮತ್ತೊಬ್ಬ ಪ್ರಯಾಣಿಕ ಬಂದು ಆ ಸೀಟ್ ಅನ್ನು ತಾವು ಕಾಯ್ದಿರಿಸಿದ್ದು ಕೂಡಲೇ ಬಿಟ್ಟುಕೊಡುವಂತೆ ಕೇಳಿದ್ದಾರೆ.

ಈ ವೇಳೆ ಬಸ್ ಕಂಡಕ್ಟರ್ ಬಂದು ಪ್ರಯಾಣಿಕರ ಅನಾರೋಗ್ಯವನ್ನೂ ಲೆಕ್ಕಿಸದೇ ಅವರನ್ನು ಎಬ್ಬಿಸಿ ಕಳುಹಿಸಿದ್ದಾರೆ. ಇತರ ಸೀಟುಗಳು ಈಗಾಗಲೇ ಭರ್ತಿಯಾಗಿರುವುದರಿಂದ, ಅವರು ನಿಂತಲ್ಲೇ ಪ್ರಯಾಣ ಮುಂದುವರಿಸಬೇಕಾಯಿತು.

ಅಂತೆಯೇ ಬಸ್ ಸಿಬ್ಬಂದಿ ದೂರುದಾರರನ್ನು ಅವರ ಉದ್ದೇಶಿತ ನಿಲ್ದಾಣವಾದ ಕಕ್ಕಡ್‌ನಲ್ಲಿ ಇಳಿಸಲಾಗಿಲ್ಲ ಎಂದು ಆಯೋಗವು ಗಮನಿಸಿದೆ.

ಬದಲಾಗಿ, ಬಸ್ ಸರ್ವಿಸ್ ರಸ್ತೆಯನ್ನು ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿದ್ದರಿಂದ, ಅವರು ಕೂರಿಯಾಡ್‌ನಲ್ಲಿ ಇಳಿಯಬೇಕಾಯಿತು, ಇದು ಮತ್ತಷ್ಟು ತೊಂದರೆಗೆ ಕಾರಣವಾಯಿತು.ದೂರುದಾರರ ವಾದವನ್ನು ಎತ್ತಿಹಿಡಿದ ಆಯೋಗವು, ಕಾಯ್ದಿರಿಸಿದ ಆಸನದ ಬಗ್ಗೆ ಅವರಿಗೆ ತಿಳಿಸಲು ವಿಫಲವಾದದ್ದು ಮತ್ತು ಗೊತ್ತುಪಡಿಸಿದ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡದಿರುವುದು ಸೇವೆಯಲ್ಲಿನ ಕೊರತೆಯಾಗಿದೆ ಎಂದು ಗಮನಿಸಿತು.

ಮಲಪ್ಪುರಂ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಕೆ. ಮೋಹನ್ ದಾಸ್ ಮತ್ತು ಸದಸ್ಯರಾದ ಪ್ರೀತಿ ಶಿವರಾಮನ್ ಮತ್ತು ಸಿ. ವಿ. ಮುಹಮ್ಮದ್ ಇಸ್ಮಾಯಿಲ್ ಅವರನ್ನೊಳಗೊಂಡ ಆಯೋಗವು, ಕೆಎಸ್ಆರ್‌ಟಿಸಿಗೆ 45 ದಿನಗಳ ಒಳಗೆ 25,000 ರೂ. ಪರಿಹಾರ ಮತ್ತು 5,000 ರೂ. ಮೊಕದ್ದಮೆ ವೆಚ್ಚವನ್ನು ಪಾವತಿಸುವಂತೆ ನಿರ್ದೇಶಿಸಿದೆ. ಇದು ತಪ್ಪಿದಲ್ಲಿ ಶೇಕಡಾ 9 ರಷ್ಟು ಬಡ್ಡಿ ಅನ್ವಯವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com