ಮೇಕೆದಾಟು ಅಣೆಕಟ್ಟು: ಕುಡಿಯುವ ನೀರಿಗಾಗಿ ಅಗತ್ಯವಿರುವ 5 ಟಿಎಂಸಿ ಹೊರತುಪಡಿಸಿ, ಉಳಿದ ನೀರು ತಮಿಳುನಾಡಿಗೆ- ಸಿಎಂ ಡಿ.ಕೆ ಶಿವಕುಮಾರ್

ಕುಡಿಯುವ ನೀರಿನ ಅಗತ್ಯಕ್ಕಾಗಿ 5 ಟಿಎಂಸಿ ನೀರನ್ನು ಬಳಸುವುದನ್ನು ಹೊರತುಪಡಿಸಿ, ಉದ್ದೇಶಿತ ಮೇಕೆದಾಟು ಅಣೆಕಟ್ಟಿನಲ್ಲಿ ಸಂಗ್ರಹವಾಗುವ ಉಳಿದ ನೀರು ತಮಿಳುನಾಡಿಗೆ ಸೇರಲಿದೆ ಎಂದು ಅವರು ತಿಳಿಸಿದರು.
CM DK Shivakumar talk with cm Vijay
ತಮಿಳುನಾಡು ಸಿಎಂ ವಿಜಯ್ ಜೊತೆಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್
Updated on

ಮಹಾಬಲಿಪುರ: ಉದ್ದೇಶಿತ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಷಯದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಭರವಸೆ ನೀಡಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ತಿಳಿಸಿದರು.

ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ನೀರು ಹಂಚಿಕೆ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪ್ರತ್ಯೇಕ ಸಭೆ ನಡೆಸುವ ಪರವಾಗಿರುವುದಾಗಿ ಹೇಳಿದರು.

ಕುಡಿಯುವ ನೀರಿನ ಅಗತ್ಯಕ್ಕಾಗಿ 5 ಟಿಎಂಸಿ ನೀರನ್ನು ಬಳಸುವುದನ್ನು ಹೊರತುಪಡಿಸಿ, ಉದ್ದೇಶಿತ ಮೇಕೆದಾಟು ಅಣೆಕಟ್ಟಿನಲ್ಲಿ ಸಂಗ್ರಹವಾಗುವ ಉಳಿದ ನೀರು ತಮಿಳುನಾಡಿಗೆ ಸೇರಲಿದೆ ಎಂದು ಅವರು ತಿಳಿಸಿದರು. ಈ ಅಣೆಕಟ್ಟನ್ನು ನಿರ್ಮಿಸುತ್ತಿರುವುದು ನಿಮಗಾಗಿ, ನಮಗಾಗಿ ಅಲ್ಲ ಎಂದು ಅವರು ತಮಿಳುನಾಡು ಮತ್ತು ಪುದುಚೇರಿಯನ್ನು ಉದ್ದೇಶಿಸಿ ಹೇಳಿದರು.

ಮೇಕೆದಾಟು ಅಣೆಕಟ್ಟಿನಲ್ಲಿರುವ ನೀರಿನಲ್ಲಿ ಕುಡಿಯುವ ನೀರಿಗಾಗಿ ಮೀಸಲಿಡುವ ಐದು ಟಿಎಂಸಿ ಹೊರತುಪಡಿಸಿ, ಉಳಿದ ಸಂಪೂರ್ಣ ನೀರನ್ನು ತಮಿಳುನಾಡಿಗೇ ಬಿಟ್ಟುಕೊಡಲಾಗುವುದು ಎಂದು ಗೃಹ ಸಚಿವರ ಸಮ್ಮುಖದಲ್ಲಿ ತಮಿಳುನಾಡು ರಾಜ್ಯಕ್ಕೆ ನಾನು ಭರವಸೆ ನೀಡಿದ್ದೇನೆ. ಆದ್ದರಿಂದ ತಮಿಳುನಾಡು ಮತ್ತು ಪುದುಚೇರಿ ನಿಶ್ಚಿಂತೆಯಿಂದಿರಬಹುದು; ಈ ಅಣೆಕಟ್ಟು ನಮಗಾಗಿ ಅಲ್ಲ, ನಿಮಗಾಗಿ ಮಾತ್ರ ನಿರ್ಮಾಣವಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದಕ್ಕೂ ಮುನ್ನ, ದಕ್ಷಿಣ ವಲಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಮೇಕೆದಾಟು ಯೋಜನೆಯ ವಿಷಯವನ್ನು ಪ್ರಸ್ತಾಪಿಸಿ, ಇದು ಕರ್ನಾಟಕಕ್ಕೆ ಮಾತ್ರವಲ್ಲದೆ ತಮಿಳುನಾಡಿಗೂ ಕೂಡ ಒಂದು ಪ್ರಮುಖ ಯೋಜನೆಯಾಗಿದೆ ಎಂದು ಹೇಳಿದರು.

"ಸಭೆಗೆ ತೆರಳುವಾಗ, ಹಿರಿಯ ನಾಯಕ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದು ನನಗೆ ಹೇಳಿದರು. ಮೇಕೆದಾಟು ಯೋಜನೆಯ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ನೆರವಾಗುತ್ತದೆ. ನಿಮಗೆ ಸಹಾಯ ಮಾಡಲು ನಮಗೆ ಸಹಕರಿಸಿ ಎಂದು ಅವರು ಹೇಳಿದರು.

"ನೀರು ಹಂಚಿಕೆ"ಯಿಂದ "ನೀರು ಸಹಕಾರ"ದತ್ತ ಬದಲಾಗಲು ಕರೆ: ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್‌ನಂತಹ ನದಿಗಳು ದಕ್ಷಿಣ ಭಾರತದ ಜೀವನಾಡಿಗಳಾಗಿವೆ ಎಂದು ಹೇಳಿದ ಶಿವಕುಮಾರ್, "ನೀರು ಹಂಚಿಕೆ"ಯಿಂದ "ನೀರು ಸಹಕಾರ"ದತ್ತ ಬದಲಾಗುವಂತೆ ಕರೆ ನೀಡಿದರು. ನಮ್ಮ ನದಿಗಳಿಗೆ ರಾಜಕೀಯ ಗಡಿಗಳ ಅರಿವಿಲ್ಲ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ನೀರು ಹಂಚಿಕೆಯಿಂದ ನೀರು ಸಹಕಾರದತ್ತ ಸಾಗುವ ಸಮಯ ಬಂದಿದೆ. ಅಂತಹ ಸಹಕಾರ ಹೇಗಿರುತ್ತದೆ ಎಂಬುದನ್ನು ಕರ್ನಾಟಕ ತೋರಿಸಿಕೊಟ್ಟಿದೆ," ಎಂದು ಅವರು ನುಡಿದರು.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಜೂನ್ 25 ರಂದು ನಡೆದ ಸಭೆಯನ್ನು ಉಲ್ಲೇಖಿಸಿದ ಅವರು, ಅಂತಾರಾಜ್ಯ ಜಲ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು ಎಂಬುದನ್ನು ಈ ಮೂರೂ ರಾಜ್ಯಗಳು ಸಾಬೀತುಪಡಿಸಿವೆ ಎಂದು ಹೇಳಿದರು.

ಮೂರು ತತ್ವಗಳ ಆಧಾರದ ಮೇಲೆ ನಮ್ಮ ನಿಲುವು: ಈ ಮೂರೂ ರಾಜ್ಯಗಳು ತಮ್ಮ ನಡುವಿನ ಜಲ ಹಂಚಿಕೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಕುರಿತು ಚರ್ಚಿಸಿದವು ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಸಹಭಾಗಿತ್ವದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದವು. ನದಿ ಪಾತ್ರದ ಪ್ರತಿಯೊಂದು ರಾಜ್ಯಕ್ಕೂ ನ್ಯಾಯಯುತವಾದ ಅಗತ್ಯಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಸಮಾನತೆ, ಪಾರದರ್ಶಕತೆ ಮತ್ತು ಸಹಕಾರ ಎಂಬ ಮೂರು ತತ್ವಗಳ ಮೇಲೆ ನಮ್ಮ ನಿಲುವು ಆಧಾರಿತವಾಗಿದೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಯು ಕರ್ನಾಟಕವು ಪ್ರಸ್ತಾಪಿಸಿರುವ ಒಂದು ಬಹುಪಯೋಗಿ ಯೋಜನೆಯಾಗಿದ್ದು, ಇದು ರಾಮನಗರ ಜಿಲ್ಲೆಯ ಕನಕಪುರದ ಬಳಿ ಸಮತೋಲನ ಜಲಾಶಯವನ್ನು (balancing reservoir) ನಿರ್ಮಿಸುವುದನ್ನು ಒಳಗೊಂಡಿದೆ. ಈ ಯೋಜನೆ ಸಾಕಾರಗೊಂಡರೆ ತಮ್ಮ ರಾಜ್ಯಕ್ಕೆ ತೊಂದರೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾ ತಮಿಳುನಾಡು ಇದನ್ನು ವಿರೋಧಿಸುತ್ತಾ ಬಂದಿದೆ.

ಕರ್ನಾಟಕದ ಅಧಿಕಾರಿಗಳ ಪ್ರಕಾರ, ಈ ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರನ್ನು (4.75 ಟಿಎಂಸಿ ಅಡಿ) ಒದಗಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಇದು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನೂ ಹೊಂದಿದ್ದು, ಇದರ ಅಂದಾಜು ವೆಚ್ಚ 9,000 ಕೋಟಿ ರೂಪಾಯಿಗಳಷ್ಟಿದೆ (2019ರ ದರದಂತೆ) ಎಂದು ತಿಳಿಸಿದರು.

CM DK Shivakumar talk with cm Vijay
ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನ ನೀಡಿ; ನಮ್ಮ ಧ್ವನಿಗೂ ಪ್ರಾತಿನಿಧ್ಯ ನೀಡಿ: ಕೇಂದ್ರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ! Video

ಜೂನ್‌ನಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ನಡೆದ ಸಭೆಯನ್ನು ಅಂತಾರಾಜ್ಯ ಜಲ ಸಂಬಂಧಗಳಲ್ಲಿನ ಐತಿಹಾಸಿಕ ಮೈಲಿಗಲ್ಲು" ಎಂದು ಬಣ್ಣಿಸಿದ ಶಿವಕುಮಾರ್, ಅಂತಾರಾಜ್ಯ ಜಲ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು ಎಂಬುದನ್ನು ಈ ಮೂರೂ ರಾಜ್ಯಗಳು ತೋರಿಸಿಕೊಟ್ಟಿವೆ ಎಂದು ಹೇಳಿದರು.

ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಮತ್ತು ರೇವಂತ್ ರೆಡ್ಡಿ ನನ್ನೊಂದಿಗೆ ಒಂದೇ ವೇದಿಕೆಯಲ್ಲಿ ಕುಳಿತಿದ್ದರು ಮತ್ತು ನಾವು ಪ್ರತಿಸ್ಪರ್ಧಿಗಳಾಗಿ ಅಲ್ಲ, ಬದಲಾಗಿ ಪಾಲುದಾರರಾಗಿ ಮಾತನಾಡಿದೆವು. ಇದೇ ಕರ್ನಾಟಕದ ಧೋರಣೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com