ನಾನು ಪಕ್ಷ ತೊರೆದಿದ್ದೇನೆ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಸಮರ್ಥ, ಅತೀ ಭ್ರಷ್ಟ; ನವಜೋತ್ ಕೌರ್ ಸಿಧು ವಾಗ್ದಾಳಿ

ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗಿನ ಒಪ್ಪಂದದ ಮೂಲಕ ವಾರಿಂಗ್ ಪಕ್ಷವನ್ನು ಸಣ್ಣ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕಿ ಆರೋಪಿಸಿದ್ದಾರೆ.
ನವಜೋತ್ ಕೌರ್ ಸಿಧು
ನವಜೋತ್ ಕೌರ್ ಸಿಧು
Updated on

ಚಂಡೀಗಡ: ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಪಕ್ಷ ತೊರೆದಿದ್ದಾಗಿ ಹೇಳಿದ್ದು, ಪಕ್ಷದ ಪಂಜಾಬ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಇದುವರೆಗಿನ ಅತ್ಯಂತ ಅಸಮರ್ಥ, ಭ್ರಷ್ಟ ಅಧ್ಯಕ್ಷ ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕುರ್ಚಿಗೆ 500 ಕೋಟಿ ರೂ ಎಂಬ ಹೇಳಿಕೆಯೊಂದಿಗೆ ರಾಜಕೀಯ ವಿವಾದಕ್ಕೆ ಕಾರಣವಾದ ನಂತರ, ಕಳೆದ ತಿಂಗಳು ಕೌರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು.

ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗಿನ ಒಪ್ಪಂದದ ಮೂಲಕ ವಾರಿಂಗ್ ಪಕ್ಷವನ್ನು ಸಣ್ಣ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕಿ ಆರೋಪಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್, ಇದುವರೆಗಿನ ಅತ್ಯಂತ ಅಸಮರ್ಥ, ಭ್ರಷ್ಟ ಅಧ್ಯಕ್ಷ. ಕಾಂಗ್ರೆಸ್ ನಾಶಮಾಡಲು ಸಿಎಂ ಜೊತೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನೀವು ಜೈಲಿನಿಂದ ನಿಮ್ಮನ್ನು ರಕ್ಷಿಸಿಕೊಂಡಿದ್ದೀರಿ. ಎಎಪಿ ಜೊತೆಗಿನ ಒಪ್ಪಂದದೊಂದಿಗೆ ನೀವು ಸಣ್ಣ ಲಾಭಕ್ಕಾಗಿ ಪಕ್ಷವನ್ನು ಮಾರಿದ್ದೀರಿ ಎಂದು ವಾಗ್ಧಾಳಿ ನಡೆಸಿದ್ದಾರೆ.

ನವಜೋತ್ ಕೌರ್ ಸಿಧು
ಸಿಎಂ ಹುದ್ದೆಗೆ 500 ಕೋಟಿ ರೂ ಹೇಳಿಕೆ: ಕಾಂಗ್ರೆಸ್‌ನಿಂದ ನವಜೋತ್ ಕೌರ್ ಸಿಧು ಅಮಾನತು!

ನೀವು ನನಗಾಗಿ ಅಮಾನತು ಪತ್ರವನ್ನು ಸಿದ್ಧಪಡಿಸಿದ್ದೀರಿ. ಆದರೆ (ಶಿರೋಮಣಿ ಅಕಾಲಿ ದಳ ನಾಯಕ ಬಿಕ್ರಮ್ ಸಿಂಗ್) ಮಜಿಥಿಯಾ ಜೊತೆ ಕೆಲಸ ಮಾಡುವಲ್ಲಿ ನಿರತರಾಗಿದ್ದ ಸುಮಾರು 12 ಹಿರಿಯ ಕಾಂಗ್ರೆಸ್ ನಾಯಕರ ಬಗ್ಗೆ ಏನು ಹೇಳಬೇಕು, ಅವರು ನವಜೋತ್ ಸಿಂಗ್ ಅವರನ್ನು ಸೋಲಿಸಿದ್ದಕ್ಕಾಗಿ ನೀವು ಅವರೆಲ್ಲರಿಗೂ ದೊಡ್ಡ ಹುದ್ದೆಗಳನ್ನು ನೀಡಿದ್ದೀರಿ ಎಂದು ಕೌರ್ X ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ನಿಮ್ಮನ್ನು ನಾಶಮಾಡಲು ನನ್ನಲ್ಲಿ ಸಾಕಷ್ಟು ಪುರಾವೆಗಳಿವೆ. ಆದರೆ ನನಗೆ ಆಸಕ್ತಿ ಇಲ್ಲ. ಏಕೆಂದರೆ ನಾನು ಕಾಂಗ್ರೆಸ್ ತೊರೆದಿದ್ದೇನೆ, ಅಲ್ಲಿ ಯಾವುದೇ ಭರವಸೆಯ ನಾಯಕನ ಮಾತು ಕೇಳಿಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com