'AI ಉದ್ಯೋಗಗಳನ್ನು ಕೊಲ್ಲುವುದಿಲ್ಲ, ವೃತ್ತಿಗಳನ್ನು ಮಾತ್ರ ಬದಲಿಸುತ್ತದೆ': ರುಚಿರ್ ಶರ್ಮ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ನೀಡಿದ ವಿಸ್ತೃತ ಸಂದರ್ಶನದಲ್ಲಿ ಅವರು, ಜಗತ್ತು ಕೃತಕ ಬುದ್ಧಿಮತ್ತೆ (AI)ಯ ಪರಿವರ್ತನಾ ಸಾಮರ್ಥ್ಯವನ್ನು ಅತಿಯಾಗಿ ಅಂದಾಜಿಸುವ ಅಪಾಯದಲ್ಲಿದೆ ಎಂದು ಹೇಳಿದರು.
Ruchir Sharma
ರುಚಿರ್ ಶರ್ಮ
Updated on

ನವದೆಹಲಿ: ಜಾಗತಿಕ ‘ಚೀನಾ+1’ (China+1) ಪೂರೈಕೆ ಸರಪಳಿ (Supply Chain) ಬದಲಾವಣೆಯಿಂದ ಭಾರತವು ಇನ್ನೂ ಗಮನಾರ್ಹ ಲಾಭ ಪಡೆಯಲು ವಿಫಲವಾಗಿದೆ ಮತ್ತು ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ವ್ಯವಹಾರ ನಡೆಸುವುದು ಇನ್ನೂ ಕಷ್ಟಕರವಾಗಿದೆ ಎಂದು ರಾಕ್‌ಫೆಲ್ಲರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ರುಚಿರ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ನೀಡಿದ ವಿಸ್ತೃತ ಸಂದರ್ಶನದಲ್ಲಿ ಅವರು, ಜಗತ್ತು ಕೃತಕ ಬುದ್ಧಿಮತ್ತೆ (AI)ಯ ಪರಿವರ್ತನಾ ಸಾಮರ್ಥ್ಯವನ್ನು ಅತಿಯಾಗಿ ಅಂದಾಜಿಸುವ ಅಪಾಯದಲ್ಲಿದೆ ಎಂದು ಹೇಳಿದರು.

Ruchir Sharma
ThinkEdu 2026: ಮೊದಲ ದಿನದ ಸಮಾವೇಶದಲ್ಲಿ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ, ಶಿಕ್ಷಣ, ರಾಜಕೀಯ ಕ್ಷೇತ್ರದ ಗಣ್ಯರ ಸಮಾಗಮ!

ನಾವು ಈಗ ಎಐ ಬಬಲ್ (AI Bubble)ನಲ್ಲಿದ್ದೇವೆ. ಎಐ ಕುರಿತು ಇರುವ ದೊಡ್ಡ ತಪ್ಪು ಕಲ್ಪನೆಗಳಲ್ಲಿ ಒಂದು, ಅದು ಉದ್ಯೋಗಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂಬುದಾಗಿದೆ. ತಂತ್ರಜ್ಞಾನವು ಉದ್ಯೋಗಗಳನ್ನು ಕೊಲ್ಲುವುದಿಲ್ಲ. ಅದು ವೃತ್ತಿಗಳನ್ನು ಬದಲಿಸುತ್ತದೆ ಎಂದು ರುಚಿರ್ ಶರ್ಮ ಹೇಳಿದರು.

ಪ್ರತಿ ತಾಂತ್ರಿಕ ಕ್ರಾಂತಿಯೂ ಕೆಲವು ವೃತ್ತಿಗಳನ್ನು ಅಂತ್ಯಗೊಳಿಸುತ್ತದೆ. ಅದೇ ಸಮಯದಲ್ಲಿ ಸಂಪೂರ್ಣ ಹೊಸ ವೃತ್ತಿಗಳನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ನಾವು ನಾಶವಾಗುತ್ತಿರುವುದರತ್ತ ಹೆಚ್ಚು ಗಮನ ಹರಿಸುತ್ತೇವೆ, ಆದರೆ ಹೊಸದಾಗಿ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನು ಕಡೆಗಣಿಸುತ್ತೇವೆ ಎಂದರು.

Ruchir Sharma
2027ರವರೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬೇಡಿಕೆ ಶೇ. 15ರಷ್ಟು ಬೆಳವಣಿಗೆ

ಇತಿಹಾಸದಲ್ಲಿನ ತಾಂತ್ರಿಕ ಬದಲಾವಣೆಗಳು ಹಾಗೂ ಜೆವಾನ್ಸ್ ಪ್ಯಾರಾಡಾಕ್ಸ್ (Jevons Paradox) ನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. ತಾಂತ್ರಿಕ ಪ್ರಗತಿಯಿಂದ ಕಾರ್ಯಕ್ಷಮತೆ ಹೆಚ್ಚಾದಂತೆ ಒಟ್ಟಾರೆ ಬಳಕೆ ಕಡಿಮೆಯಾಗದೆ ಹೆಚ್ಚಾಗುತ್ತದೆ. ಇದೇ ಕಾರಣದಿಂದ ಎಐ ಈಗಿರುವ ಕೆಲವು ಕೆಲಸಗಳನ್ನು ಸ್ವಯಂಚಾಲಿತಗೊಳಿಸಿದರೂ, ಹೊಸ ರೀತಿಯ ಉದ್ಯೋಗಗಳು ಮತ್ತು ಕೆಲಸದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಜಗತ್ತನ್ನು ‘ಎಐ ಇಲ್ಲದಿದ್ದರೆ ವಿದಾಯ’ (AI or bye-bye) ಎಂಬ ಮನೋಭಾವ ನಿರ್ಧರಿಸುತ್ತದೆ ಎಂದು ನಾನು ನಂಬುವುದಿಲ್ಲ.ಎಐ ತಂತ್ರಜ್ಞಾನದ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅದು ಮಹತ್ತರ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ ಅದನ್ನು ನೋಡುವ ದೃಷ್ಟಿಕೋನ ತುಂಬಾ ಏಕಮುಖವಾಗಿದೆ ಎಂದರು.

ಭಾರತದ ಎಐ ಮಹತ್ವಾಕಾಂಕ್ಷೆಗಳ ಕುರಿತು ಮಾತನಾಡಿದ ಶರ್ಮ, ಫ್ರಾನ್ಸ್‌ನಿಂದ ಜಪಾನ್‌ವರೆಗೆ ವಿವಿಧ ದೇಶಗಳೊಂದಿಗೆ ಸಹಭಾಗಿತ್ವ ಅಗತ್ಯವಾದರೂ, ಅದರಿಂದ ಭಾರತದ ಮೂಲಸೌಕರ್ಯದ ಕೊರತೆಯನ್ನು ತ್ವರಿತವಾಗಿ ನಿವಾರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎಐ ಮೂಲಸೌಕರ್ಯವನ್ನು (ಸೆಮಿಕಂಡಕ್ಟರ್‌ಗಳಿಂದ ಡೇಟಾ ಸೆಂಟರ್‌ಗಳವರೆಗೆ) ನಿರ್ಮಿಸುವ ದೇಶಗಳೇ ಈ ಕ್ಷೇತ್ರದಲ್ಲಿ ವಿಜೇತರಾಗಲಿವೆ ಎಂದು ಹೇಳಿದರು. ಭಾರತದ ಬಲವು "ಹಾರ್ಡ್‌ವೇರ್‌ಗಿಂತ ಸಾಫ್ಟ್‌ವೇರ್‌ನಲ್ಲಿ" ಇದ್ದರೂ, ಎಐ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದೇಶಗಳು ತಮ್ಮ ಜಿಡಿಪಿಯ 3–4 ಶೇಕಡಾವನ್ನು ತಂತ್ರಜ್ಞಾನ ಮತ್ತು ಸಂಶೋಧನೆ-ಅಭಿವೃದ್ಧಿಗೆ (R&D) ಹೂಡಿಕೆ ಮಾಡುತ್ತವೆ. ಆದರೆ ಭಾರತದಲ್ಲಿ ಈ ಪ್ರಮಾಣ ಕೇವಲ ಸುಮಾರು 1 ಶೇಕಡಾ ಮಾತ್ರವಾಗಿದೆ ಎಂದು ಅವರು ತಿಳಿಸಿದರು.

ಉತ್ಪಾದನಾ ಕ್ಷೇತ್ರದ ಬಗ್ಗೆ ಮಾತನಾಡಿದ ಶರ್ಮ, ಜಾಗತಿಕ ಪೂರೈಕೆ ಸರಪಳಿಗಳನ್ನು ಸೆಳೆಯುವಲ್ಲಿ ಭಾರತದ ಸಾಧನೆ ಕುರಿತು ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಚೀನಾ+1 ತಂತ್ರದ ಪ್ರಮುಖ ಲಾಭ ಪಡೆದಿರುವ ದೇಶಗಳು ವಿಯೆಟ್ನಾಂ ಮತ್ತು ದಕ್ಷಿಣ ಕೊರಿಯಾ. ಆದರೆ ಈ ವಿಷಯದಲ್ಲಿ ಭಾರತದಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ ಎಂದರು.

ಭಾರತದ ಅತಿದೊಡ್ಡ ಅಡ್ಡಿಯೇ ದೇಶೀಯ ವ್ಯಾಪಾರ ವಾತಾವರಣ ಎಂದು ಶರ್ಮ ಅಭಿಪ್ರಾಯಪಟ್ಟರು. ಭಾರತದಲ್ಲಿ ವ್ಯವಹಾರ ನಡೆಸುವುದು ತುಂಬಾ ಕಷ್ಟಕರವಾಗಿದೆ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಆಡಳಿತದ ವಿವಿಧ ಹಂತಗಳ ನಡುವಿನ ಸಮನ್ವಯದ ಕೊರತೆಯೇ ಪ್ರಮುಖ ಸವಾಲು ಎಂದು ಅವರು ಉಲ್ಲೇಖಿಸಿದರು.

ಬೇರೆ ಹಣ ಎಲ್ಲಿಗೆ ಹೋಗುತ್ತದೆ? ಮಾರುಕಟ್ಟೆ ಇಷ್ಟು ದೊಡ್ಡದಿರುವುದರಿಂದ ಅದು ಭಾರತಕ್ಕೇ ಬರಬೇಕು’ ಎಂಬ ಒಂದು ಆಂತರಿಕ ಮನೋಭಾವ ಇದೆ. ನನ್ನ ಅನಿಸಿಕೆಯಲ್ಲಿ ಇದೇ ಅತ್ಯಂತ ಪರಿಣಾಮಕಾರಿ ನೀತಿ ರೂಪಿಸುವಿಕೆಗೆ ಅಡ್ಡಿಯಾಗುತ್ತದೆ ಎಂದು ಶರ್ಮ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com