

ತಿರುವನಂತಪುರಂ: ಕಾಂಗ್ರೆಸ್ ನಾಯಕ ಶಶಿ ತರೂರ್ ಶುಕ್ರವಾರ ಸಂಜೆ ಹೋಟೆಲ್ ವೊಂದರಲ್ಲಿ ಲಿಫ್ಟ್ ನಲ್ಲಿ ಸಿಲುಕಿಕೊಂಡು ಕೆಲ ಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಅವರನ್ನು ರಕ್ಷಿಸಿದ್ದಾರೆ.
ಶುಕ್ರವಾರ ಸಂಜೆ 7-30ರ ಸುಮಾರಿನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಶಶಿ ತರೂರ್ ಲಿಫ್ಟ್ ನಲ್ಲಿ ಸಿಲುಕಿದ್ದಾರೆ. ಕೂಡಲೇ ಅಲ್ಲಿದ್ದವರು ಕಬ್ಬಿಣ್ಣದ ರಾಡು ಮತ್ತಿತರ ಸಲಕರಣೆಗಳಿಂದ ಲಿಫ್ಟ್ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಏನೂ ಪ್ರಯೋಜವಾಗಿಲ್ಲ.
ಬಳಿಕ ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಅಲ್ಲಿಗೆ ತೆರಳಿ ಅವರನ್ನು ರಕ್ಷಿಸಲಾಯಿತು ಎಂದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
hydraulic spreader ಬಳಸಿ ಲಿಫ್ಟ್ ಬಾಗಿಲು ಹೊಡೆದ ಬಳಿಕ ಶಶಿ ತರೂರ್ ಅವರನ್ನು ರಕ್ಷಿಸಲಾಯಿತು. ಬಳಿಕ ಶಶಿ ತರೂರ್ ಲಿಫ್ಟ್ ನಿಂದ ಶಶಿ ತರೂರ್ ಹೊರಗೆ ಬಂದಿದ್ದಾರೆ.