CJP ಪ್ರತಿಭಟನೆ ಹೈಜಾಕ್ ಮಾಡಲು ಪ್ರಯತ್ನ: ಕಾಂಗ್ರೆಸ್ ಮತ್ತು AAP ನಡುವಿನ ಕಾಳಗ ಬಹಿರಂಗ!

ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ (CJP) ಪ್ರತಿಭಟನಾ ವೇದಿಕೆಯಲ್ಲಿ ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಕ್ಷ (AAP) ನಡುವಿನ ವ್ಯತ್ಯಾಸಗಳು ಮುನ್ನೆಲೆಗೆ ಬಂದಿವೆ. ಎರಡೂ ಪಕ್ಷಗಳು ಯುವಜನ ನೇತೃತ್ವದ ಆಂದೋಲನದ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿವೆ.
Rahul Gandhi, Arvind Kejriwal
ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನಾ ವೇದಿಕೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ನಡುವಿನ ವ್ಯತ್ಯಾಸಗಳು ಮುನ್ನೆಲೆಗೆ ಬಂದಿವೆ. ಎರಡೂ ಪಕ್ಷಗಳು ಯುವಜನ ನೇತೃತ್ವದ ಆಂದೋಲನದ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿವೆ. ಎಎಪಿ ನಾಯಕ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಉಂಟಾಯಿತು. ಕ್ಯಾಮೆರಾಗಳಿಂದ ದೂರದಲ್ಲಿ ನಡೆದ ಈ ಘರ್ಷಣೆ ಇತ್ತೀಚಿನ ವರ್ಷಗಳಲ್ಲಿ ಯುವಜನರ ನೇತೃತ್ವದ ಅತಿದೊಡ್ಡ ಜನಾದೇಶಗಳಲ್ಲಿ ಒಂದಾಗಿ ಬೆಳೆದಿರುವ ಪ್ರತಿಭಟನೆಯ ಮೇಲಿನ ರಾಜಕೀಯ ಸ್ಪರ್ಧೆಯನ್ನು ಎತ್ತಿ ತೋರಿಸಿತು.

2025ರ ಜೂನ್ ನಲ್ಲಿ INDI ಕೂಟದಿಂದ ಎಎಪಿ ಹೊರಬಂದಿತ್ತು. ಇನ್ನು ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದ್ದಂತೆ ಎಎಪಿ ಪ್ರಬಲ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಪ್ರತಿಭಟನೆಗೆ ಕಾಂಗ್ರೆಸ್‌ನ ಬೆಂಬಲವು ತುಂಬಾ ತಡವಾಗಿ ಬಂದಿತು. ಹೆಚ್ಚು ಮುಖ್ಯವಾಗಿ ಪಕ್ಷವು ಚಳುವಳಿಯನ್ನು ದುರ್ಬಲಗೊಳಿಸಿದೆ ಎಂದು ಎಎಪಿ ನಂಬಿದೆ. ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ವ್ಯವಸ್ಥೆಯ ಮೂಲಕ ಆರಂಭದಿಂದಲೂ ಪ್ರತಿಭಟನೆ ಹಾನಿ ಮಾಡಲು ಪ್ರಯತ್ನಿಸಿತು. ಆ ನಿರೂಪಣೆ ಕೆಲಸ ಮಾಡದಿದ್ದಾಗ, ಹೆಚ್ಚು ಜನರು ಸೇರದಿದ್ದರೇ ಆಂದೋಲನ ವಿಫಲವಾಗತ್ತದೆ ಎಂದು ಹೇಳಲು ಪ್ರಾರಂಭಿಸಿದರು. ಆಂದೋಲನ ಹೆಚ್ಚು ಪ್ರಚಲಿತ ಪಡೆದ ನಂತರ, ಕಾಂಗ್ರೆಸ್ ಅದನ್ನು ಹೈಜಾಕ್ ಪ್ರಯತ್ನಿಸಿದೆ ಎಂದು ಎಎಪಿ ನಾಯಕರೊಬ್ಬರು ತಿಳಿಸಿದರು.

Rahul Gandhi, Arvind Kejriwal
ಮೋದಿ ಮನೆ ಬಳಿ ರಾಹುಲ್​ ಗಾಂಧಿ ಪ್ರತಿಭಟನೆ ಪ್ರಶ್ನಿಸಿದ ವಾಂಗ್‌ಚುಕ್ ಪತ್ನಿ; ಅದರಲ್ಲಿ ಪ್ರಾಮಾಣಿಕತೆ ಇರಲಿಲ್ಲ ಎಂದು ಕಿಡಿ!

ಸಾಮಾಜಿಕ ಮಾಧ್ಯಮದಲ್ಲಿನ ಕಾಂಗ್ರೆಸ್ ಬೆಂಬಲಿಗರು ಆರಂಭದಲ್ಲಿ ಅಭಿಯಾನವನ್ನು "ಭ್ರಷ್ಟಾಚಾರ ವಿರೋಧಿ ಭಾರತ (ಐಎಸಿ) 2.0" ಎಂದು ಚಿತ್ರಿಸಲು ಪ್ರಯತ್ನಿಸಿದರು. ಇದು ಎಎಪಿ ಹೊರಹೊಮ್ಮಿದ ಭ್ರಷ್ಟಾಚಾರ ವಿರೋಧಿ ಚಳವಳಿಯ ಉಲ್ಲೇಖವಾಗಿದೆ. ಯುಪಿಎ ಸರ್ಕಾರದ ಸೋಲಿಗೆ ಕಾರಣವಾದ ಚಳವಳಿಯು ಕಾಂಗ್ರೆಸ್ ಮತ್ತು ಎಎಪಿ ನಡುವಿನ ಅಪನಂಬಿಕೆಯ ಕೇಂದ್ರಬಿಂದುವಾಗಿದೆ. ಭ್ರಷ್ಟಾಚಾರ ವಿರೋಧಿ ಅಭಿಯಾನವು ಆರ್‌ಎಸ್‌ಎಸ್-ಬಿಜೆಪಿಯಿಂದ ರಹಸ್ಯ ಬೆಂಬಲವನ್ನು ಹೊಂದಿದೆ ಎಂದು ಕಾಂಗ್ರೆಸ್ ಬಹಳ ಹಿಂದಿನಿಂದಲೂ ಹೇಳಿಕೊಂಡು ಬಂದಿತ್ತು.

2013ರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದ ಅರವಿಂದ್ ಕೇಜ್ರಿವಾಲ್ ಎಎಪಿಯನ್ನು ಸ್ಥಾಪಿಸಿದ ನಂತರ, 2022 ರಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿ, ಅದೇ ವರ್ಷ ಗುಜರಾತ್‌ನಲ್ಲಿ ಮಹತ್ವದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿ, ಐದು ವಿಧಾನಸಭಾ ಸ್ಥಾನಗಳನ್ನು ಗೆದ್ದು ಸುಮಾರು ಶೇಕಡಾ 13ರಷ್ಟು ಮತಗಳನ್ನು ಗಳಿಸಿದ ನಂತರ ಎರಡು ಪಕ್ಷಗಳ ನಡುವೆ ಅಪನಂಬಿಕೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

INDI ಮಿತ್ರಪಕ್ಷಗಳು ಆರಂಭದಲ್ಲಿ ತಮ್ಮ ಎರಡನೇ ಹಂತದ ನಾಯಕರನ್ನು ಕಳುಹಿಸುವಂತೆ ಕಾಂಗ್ರೆಸ್ ಒತ್ತಾಯಿಸಿತು. ನಂತರ ಚಳುವಳಿ ತಾನಾಗಿಯೇ ವೇಗ ಪಡೆದ ನಂತರ, ಅವರು ಅದನ್ನು ಹೈಜಾಕ್ ಮಾಡಲು ಪ್ರಯತ್ನಿಸಿದರು. ಇದು ಎಎಪಿ ಯೋಜನೆ ಎಂದು ಅವರು ನಿಜವಾಗಿಯೂ ನಂಬಿದ್ದರೆ, ನಂತರ ಅವರು ಏಕೆ ಅದರಲ್ಲಿ ಧುಮುಕಿದರು? ನಿನ್ನೆ ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್‌ಗೆ ಸಲಹೆ ನೀಡುವ ಯೋಗೇಂದ್ರ ಯಾದವ್ ಅವರೊಂದಿಗೆ ನಾನು ಮಾತಿನ ಚಕಮಕಿ ನಡೆಸಿದೆ ಎಂದು ಎಎಪಿಯ ಸೌರಭ್ ಭಾರದ್ವಾಜ್ ತಿಳಿಸಿದರು.

Rahul Gandhi, Arvind Kejriwal
'ಧರ್ಮೇಂದ್ರ ಪ್ರಧಾನ್ ರನ್ನು ವಜಾ ಮಾಡಿ; ಇಲ್ಲದಿದ್ದರೆ ನಿಮ್ಮ ರಾಜೀನಾಮೆಯನ್ನೂ ಕೇಳುತ್ತೇವೆ': ಪ್ರಧಾನಿ ಮೋದಿಗೆ CJP ಮುಖ್ಯಸ್ಥ Abhijeet Dipke ಒತ್ತಾಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com