NEET ಹೆಸರಲ್ಲಿ ವಂಚನೆ: Telegram ಮೂಲಕ ನಕಲಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದನೆ; ನಾಲ್ವರ ಬಂಧನ!

ಬಿಹಾರದ ಮುಜಫರ್‌ಪುರದ ಪೊಲೀಸರು ನಕಲಿ ನೀಟ್ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಗ್ಯಾಂಗ್‌ನ ಇನ್ನೂ ನಾಲ್ವರು ಸದಸ್ಯರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐದು ಆರೋಪಿಗಳನ್ನು ಬಂಧಿಸಲಾಗಿದೆ.
Representation purpose only
ಸಂಗ್ರಹ ಚಿತ್ರ
Updated on

ಬಿಹಾರದ ಮುಜಫರ್‌ಪುರದ ಪೊಲೀಸರು ನಕಲಿ ನೀಟ್ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಗ್ಯಾಂಗ್‌ನ ಇನ್ನೂ ನಾಲ್ವರು ಸದಸ್ಯರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐದು ಆರೋಪಿಗಳನ್ನು ಬಂಧಿಸಲಾಗಿದೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯ ಸೂಚನೆಯ ಮೇರೆಗೆ ರಚಿಸಲಾದ ತಂಡವು ತಾಂತ್ರಿಕ ಮತ್ತು ಮಾನವ ಗುಪ್ತಚರವನ್ನು ಆಧರಿಸಿ ಈ ಕಾರ್ಯಾಚರಣೆಯನ್ನು ನಡೆಸಿದೆ. ಟೆಲಿಗ್ರಾಮ್ ಮೂಲಕ ಆರೋಪಿಗಳು ವಂಚಿಸಿದ್ದು ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಆ ಖಾತೆಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ಅವರು, ಮೇ 2ರಂದು ಸಿಕಂದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲು ಘಾಟ್ ವಾರ್ಡ್ ಸಂಖ್ಯೆ 17ರಲ್ಲಿರುವ ಚಾಕೊಲೇಟ್ ಫ್ಯಾಕ್ಟರಿ ಬಳಿಯ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಲಾಯಿತು. ಅಲ್ಲಿಂದ, ನಕಲಿ ನೀಟ್ ಪ್ರಶ್ನೆ ಪತ್ರಿಕೆಯನ್ನು ರಚಿಸಿ ಟೆಲಿಗ್ರಾಮ್ ಮೂಲಕ ಜನರನ್ನು ವಂಚಿಸಿದ್ದ ಜಾಜುವಾರ್ ನಿವಾಸಿ ಮನೀಶ್ ಝಾ ಅವರನ್ನು ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಒಂದು ಲ್ಯಾಪ್‌ಟಾಪ್‌ನೊಂದಿಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಸಿಕಂದರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Representation purpose only
NEET, CBSE ಅಕ್ರಮಕ್ಕೆ ಆಕ್ರೋಶ: ಜೂನ್ 13ರ ಒಳಗೆ ಪ್ರಧಾನ್ ಕೆಳಗಿಳಿಯದಿದ್ದರೆ ಪ್ರತೀ ರಾಜ್ಯದಲ್ಲೂ ಪ್ರತಿಭಟನೆ- Cockroach Janta Party ಎಚ್ಚರಿಕೆ

ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಎಸ್‌ಎಸ್‌ಪಿ ಮುಜಫರ್ಪುರ ನಿರ್ದೇಶನ ಮತ್ತು ಎಸ್‌ಪಿ ಸಿಟಿಯ ಮೇಲ್ವಿಚಾರಣೆಯಲ್ಲಿ ನಗರ-01 ರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಯಿತು. ತಂಡದಲ್ಲಿ ಜಿಲ್ಲಾ ಗುಪ್ತಚರ ಘಟಕದ ಉಸ್ತುವಾರಿ ತಂಡ ಮತ್ತು ಸಿಕಂದರ್ಪುರದ ಸ್ಟೇಷನ್ ಹೌಸ್ ಅಧಿಕಾರಿ ಕೂಡ ಇದ್ದರು. ರಚಿಸಲಾದ ತಂಡವು ನಿರಂತರವಾಗಿ ಮಾನವ ಮತ್ತು ತಾಂತ್ರಿಕ ಗುಪ್ತಚರವನ್ನು ಸಂಗ್ರಹಿಸುತ್ತಿತ್ತು.

ಶನಿವಾರ ಬಂದ ಗುಪ್ತಚರ ಮಾಹಿತಿಯ ನಂತರ, ತಂಡವು ತಕ್ಷಣ ಕ್ರಮ ಕೈಗೊಂಡಿದ್ದು ನಾಲ್ವರನ್ನು ಬಂಧಿಸಿದೆ. ಆರೋಪಿಗಳನ್ನು ಹರ್ಷ್, ಅಮನ್ ಕುಮಾರ್, ಕನ್ಹಯ್ಯಾ ಕುಮಾರ್ ಅಲಿಯಾಸ್ ಮಾನವ್, ಹರ್ಷ್ ಕನೋಡಿಯಾ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳು ವಿಚಾರಣೆ ತಾವು ಟೆಲಿಗ್ರಾಮ್ ಮೂಲಕ ನಕಲಿ ಪ್ರಶ್ನೆಪತ್ರಿಕೆಗಳನ್ನು ನೀಡಿ ವಂಚಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಹಣವನ್ನು ಪಡೆದು ಅದನ್ನು ಮನೀಶ್ ಝಾಗೆ ವರ್ಗಾಯಿಸಿದ್ದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com