ಬಂಡಾಯ ಸಂಸದರು 'ದೇಶದ್ರೋಹಿಗಳು'; ಅವರಿಗೆ ಮತ್ತೆ 10 ಕೋಟಿ ರೂ. ನೀಡಿ ರಾಜಸ್ಥಾನಕ್ಕೆ ಶಿಫ್ಟ್ ಮಾಡಲಾಗಿದೆ!

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್, ಭಿನ್ನಮತೀಯ ಸೇನಾ(ಯುಬಿಟಿ) ಸಂಸದರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
Shiv Sena (UBT) leader Sanjay Raut
ಸಂಜಯ್ ರಾವತ್
Updated on

ನವದೆಹಲಿ: ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣ ಸೇರಲು ಮುಂದಾಗಿರುವ ತಮ್ಮ ಪಕ್ಷದ ಬಂಡಾಯ ಸಂಸದರನ್ನು ದೇಶದ್ರೋಹಿಗಳು ಎಂದು ಟೀಕಿಸಿದ ಶಿವಸೇನಾ(ಯುಬಿಟಿ) ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರು, ಆ ಸಂಸದರಿಗೆ ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ನೀಡಿ ರಾಜಸ್ಥಾನದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್, ಭಿನ್ನಮತೀಯ ಸೇನಾ(ಯುಬಿಟಿ) ಸಂಸದರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ತಮ್ಮ ಸಂಸದರಿಗೆ ಮತ್ತು ಅವರ ಆಸ್ತಿಗಳಿಗೆ ನೀಡಿರುವ ಮುಚ್ಚಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಬಂಡಾಯ ಸಂಸದರ ವಿರುದ್ಧ ಪಕ್ಷವು ‘ಆಪರೇಷನ್ ತುಡ್ವಾ’ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದರು.

Shiv Sena (UBT) leader Sanjay Raut
ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ: ಪಕ್ಷದ ಸಂಸದೀಯ ಸಭೆಗೆ 6 ಸಂಸದರು ಗೈರು; ಶಿಂಧೆ ಬಣ ಸೇರುವ ಸಾಧ್ಯತೆ

"ಬಂಡಾಯ ಶಿವಸೇನೆ(ಯುಬಿಟಿ) ಸಂಸದರಿಗೆ ತಲಾ 10 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿಂದೆ ಅವರಿಗೆ ತಲಾ 15 ಕೋಟಿ ರೂ. ನೀಡಲಾಗಿತ್ತು. ಅವರು ದೆಹಲಿಯಿಂದ ರಾಜಸ್ಥಾನದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ," ಎಂದು ರಾವತ್ ಹೇಳಿದರು.

ನಮ್ಮ ಸಂಸದರಿಗೆ ಪಕ್ಷ ಬದಲಾಯಿಸಲು ತಲಾ 50 ಕೋಟಿ ರೂಪಾಯಿ ನೀಡಲಾಗುತ್ತಿದೆ ಎಂದು ರಾವತ್ ಈ ಹಿಂದೆ ಆರೋಪಿಸಿದ್ದರು.

ಸೇನಾ (ಯುಬಿಟಿ) ಕಾರ್ಯಕರ್ತರು ತಮ್ಮ ಗೆಲುವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸಿದ್ದಾರೆ ಎಂದು ಒತ್ತಿ ಹೇಳಿದ ರಾವತ್, ಬಂಡಾಯ ಸಂಸದರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com