ಗುಜರಾತ್‌ನಲ್ಲಿ ಘೋರ ದುರಂತ: ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಸಾವು, ಒಬ್ಬನ ಸ್ಥಿತಿ ಗಂಭೀರ!

ಟ್ಯಾಂಕ್ ಸ್ವಚ್ಛಗೊಳಿಸಲು ನಾಲ್ವರು ಕಾರ್ಮಿಕರನ್ನು ಒಬ್ಬರ ನಂತರ ಒಬ್ಬರನ್ನು ಆಳವಾದ ರಾಸಾಯನಿಕ ಸಂಗ್ರಹ ಟ್ಯಾಂಕ್‌ಗೆ ಇಳಿಸಲಾಗಿದೆ.
File photo
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ಗುಜರಾತ್‌ನ ಸೂರತ್ ನಗರದ ಡೈಯಿಂಗ್ ಮಿಲ್‌ನಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ರಾಸಾಯನಿಕ ಟ್ಯಾಂಕ್‌ಗೆ ಇಳಿದ ಬಿಹಾರ ಮೂಲದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಪಾಂಡೇಸಾರ ಜಿಐಡಿಸಿಯ ನ್ಯೂ ಪ್ಯಾರಾಸ್ ಡೈಯಿಂಗ್ ಮಿಲ್‌ನಲ್ಲಿ ಗುರುವಾರ ತಡರಾತ್ರಿ ಜವಳಿ ಸಂಸ್ಕರಣಾ ಘಟಕದಲ್ಲಿ ನಿಯಮಿತ ಟ್ಯಾಂಕ್-ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಆರಂಭಿಕ ವರದಿಗಳ ಪ್ರಕಾರ, ಟ್ಯಾಂಕ್ ಸ್ವಚ್ಛಗೊಳಿಸಲು ನಾಲ್ವರು ಕಾರ್ಮಿಕರನ್ನು ಒಬ್ಬರ ನಂತರ ಒಬ್ಬರನ್ನು ಆಳವಾದ ರಾಸಾಯನಿಕ ಸಂಗ್ರಹ ಟ್ಯಾಂಕ್‌ಗೆ ಇಳಿಸಲಾಗಿದೆ. ಆದರೆ ಟ್ಯಾಂಕ್‌ನಲ್ಲಿ ಆಮ್ಲಜನಕದ ಕೊರತೆಯಿಂದ ಮತ್ತು ವಿಷಕಾರಿ ರಾಸಾಯನಿಕ ಹೊಗೆಯಿಂದ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

File photo
ಗುಜರಾತ್: ಆಳವಾದ ಕಂದಕಕ್ಕೆ ಉರುಳಿದ ಬಸ್; 5 ಮಂದಿ ಯಾತ್ರಿಕರು ಸಾವು, 35 ಮಂದಿಗೆ ಗಾಯ

ಟ್ಯಾಂಕ್ ಒಳಗೆ ಆಮ್ಲಜನಕದ ಕೊರತೆಯಿಂದಾಗಿ ಕಾರ್ಮಿಕರು ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಬ್ಬರ ನಂತರ ಒಬ್ಬರು, ಕಾರ್ಮಿಕರು ಟ್ಯಾಂಕ್ ಒಳಗೆ ಪ್ರಜ್ಞಾಹೀನರಾಗಿ ಕುಸಿದುಬಿದ್ದರು. ವಿಷಕಾರಿ ಟ್ಯಾಂಕ್ ಒಳಗೆ ಕಾರ್ಮಿಕರು ಕುಸಿದು ಬೀಳುತ್ತಿರುವುದನ್ನು ನೋಡಿದ ಇತರ ನೌಕರರು ಭಯಭೀತರಾದರು.

ನಾಲ್ವರು ಕಾರ್ಮಿಕರನ್ನು ಅಂತಿಮವಾಗಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ವೈದ್ಯರು ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಆದರೆ ಒಬ್ಬ ಕಾರ್ಮಿಕ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.

ಮೃತರು ಬಿಹಾರದ ರೋಹ್ತಾಸ್ ಜಿಲ್ಲೆಯ ವಲಸೆ ಕಾರ್ಮಿಕರಾಗಿದ್ದು, ಜೀವನೋಪಾಯಕ್ಕಾಗಿ ಗುಜರಾತ್‌ಗೆ ಆಗಮಿಸಿದ್ದರು. ಮೃತರನ್ನು ಅಂಕಿತ್ ಕುಮಾರ್(19), ಸೋನು ಕುಮಾರ್ ಪಾಸ್ವಾನ್ ಮತ್ತು ಸಂದೀಪ್ ಕುಮಾರ್ ಪಾಸ್ವಾನ್(22) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಕಾರ್ಮಿಕ ಅಮರೇಂದ್ರ ಕುಮಾರ್ (23) ಪ್ರಸ್ತುತ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com