ಸಿನಿಮಾ ದೃಶ್ಯವಲ್ಲ, ನೈಜ ಘಟನೆ: ಪಿಸ್ತೂಲ್ ಗೆ ಮದ್ದುಗುಂಡು ತುಂಬಿ ಎದೆಗೆ ಶೂಟ್ ಮಾಡಿಕೊಂಡು ಯುವಕ ಸಾವು, ವಿಡಿಯೊ ಸೆರೆಹಿಡಿದ ಸೋದರ ಸಂಬಂಧಿ!

ವೈದ್ಯಕೀಯ ಕಾನೂನು ಪ್ರಕರಣದ ಮಾಹಿತಿ ವಸಂಧರ ಎಂಕ್ಲೇವ್‌ನ ಧರ್ಮಶೀಲ ಆಸ್ಪತ್ರೆಯಿಂದ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕ್ಯಾಮೆರಾದಲ್ಲಿ ಸೆರೆಗೊಂಡಿದ್ದು, ಚಿತ್ರೀಕರಣ ಮಾಡುತ್ತಿದ್ದ ಮೃತನ ಸಂಬಂಧಿಯಾದ ಹಿಮಾಂಶುಗೆ ಪವನ್‌ನ ಉದ್ದೇಶಗಳ ಬಗ್ಗೆ ಅರಿವು ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ಕ್ಯಾಮೆರಾದಲ್ಲಿ ಸೆರೆಗೊಂಡಿದ್ದು, ಚಿತ್ರೀಕರಣ ಮಾಡುತ್ತಿದ್ದ ಮೃತನ ಸಂಬಂಧಿಯಾದ ಹಿಮಾಂಶುಗೆ ಪವನ್‌ನ ಉದ್ದೇಶಗಳ ಬಗ್ಗೆ ಅರಿವು ಇರಲಿಲ್ಲ ಎಂದು ತಿಳಿದುಬಂದಿದೆ.
Updated on

ನವದೆಹಲಿ: ಪೂರ್ವ ದೆಹಲಿಯ ದಲ್ಲುಪುರದಲ್ಲಿ 28 ವರ್ಷದ ಯುವಕ ಪಿಸ್ತೂಲ್‌ಗೆ ಗುಂಡು ತುಂಬಿ ಎದೆಗೆ ಗುಂಡು ಹಾರಿಸುತ್ತಿರುವುದನ್ನು ಅವರ ಹತ್ತಿರದ ಸಂಬಂಧಿ ತಮ್ಮನೇ ವಿಡಿಯೊ ಮಾಡಿದ ಪ್ರಕರಣ ನಡೆದಿದೆ.

ವೈದ್ಯಕೀಯ ಕಾನೂನು ಪ್ರಕರಣದ ಮಾಹಿತಿ ವಸಂಧರ ಎಂಕ್ಲೇವ್‌ನ ಧರ್ಮಶೀಲ ಆಸ್ಪತ್ರೆಯಿಂದ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ತೆರಳಿದ ಪೊಲೀಸರಿಗೆ, ದಲ್ಲುಪುರ ಗ್ರಾಮದ ನಿವಾಸಿ ಪವನ್ ಕುಮಾರ್ ಎಡ ಎದೆಭಾಗದಲ್ಲಿ ಗುಂಡೇಟಿನ ತೀವ್ರ ಗಾಯದಿಂದ ದಾಖಲಾಗಿದ್ದು ಗೊತ್ತಾಗಿದ್ದು, ಚಿಕಿತ್ಸೆ ವೇಳೆ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದರು ಎಂದು ಪೊಲೀಸರು ಹೇಳಿದರು.

ಈ ಘಟನೆ ಕ್ಯಾಮೆರಾದಲ್ಲಿ ಸೆರೆಗೊಂಡಿದ್ದು, ಚಿತ್ರೀಕರಣ ಮಾಡುತ್ತಿದ್ದ ಮೃತನ ಸಂಬಂಧಿಯಾದ ಹಿಮಾಂಶುಗೆ ಪವನ್‌ನ ಉದ್ದೇಶಗಳ ಬಗ್ಗೆ ಅರಿವು ಇರಲಿಲ್ಲ ಎಂದು ತಿಳಿದುಬಂದಿದೆ.
ಬೆಂಗಳೂರು: 3 ದಿನದ ಹಿಂದೆ ಮಾಡಿದ್ದ ಸಾಂಬಾರ್ ಬಿಸಿ ಮಾಡಿ ಬಡಿಸಿದ್ದಕ್ಕೆ ಜಗಳ; ಕೀಟನಾಶಕ ಸೇವಿಸಿ ಪತ್ನಿ ಆತ್ಮಹತ್ಯೆ!

ಪೊಲೀಸರ ಪ್ರಕಾರ, ಈ ಘಟನೆ ಕ್ಯಾಮೆರಾದಲ್ಲಿ ಸೆರೆಗೊಂಡಿದ್ದು, ಚಿತ್ರೀಕರಣ ಮಾಡುತ್ತಿದ್ದ ಮೃತನ ಸೋದರ ಸಂಬಂಧಿ ಹಿಮಾಂಶುಗೆ ಪವನ್‌ನ ಉದ್ದೇಶಗಳ ಬಗ್ಗೆ ಅರಿವು ಇರಲಿಲ್ಲ ಎಂಬುದು ಕಂಡುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಪವನ್ ಲೈಸೆನ್ಸ್ ಹೊಂದಿದ ಪಿಸ್ತೂಲ್‌ಗೆ ಮದ್ದುಗುಂಡು ಹಾಕುತ್ತಿರುವುದು ಕಾಣುತ್ತದೆ. ಈ ವೇಳೆ ಹಿಮಾಂಶು ಅವನಿಗೆ ಶಸ್ತ್ರವನ್ನು ಹೇಗೆ ಬಳಸಬೇಕು ಎಂದು ಸಲಹೆ ನೀಡುತ್ತಾ, ಗುಂಡು ಹಾರಿಸಬೇಡ ಎಂದು ಎಚ್ಚರಿಸುತ್ತಿರುವುದು ಕೇಳಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಪವನ್ ಪಿಸ್ತೂಲ್ ನ್ನು ತನ್ನ ಎಡ ಎದೆಭಾಗಕ್ಕೆ ಇಟ್ಟು, ಕ್ಯಾಮೆರಾ ಕಡೆ ಸ್ವಲ್ಪ ನೋಡಿದ ಬಳಿಕ ಟ್ರಿಗರ್ ಒತ್ತುತ್ತಾನೆ. ಇದರಿಂದ ನೆಲಕ್ಕೆ ಕುಸಿಯುತ್ತಾನೆ, ಹಿಮಾಂಶು ಬೆಚ್ಚಿಬಿದ್ದಂತೆ ಪ್ರತಿಕ್ರಿಯಿಸುತ್ತಾನೆ.

ಪ್ರಾಥಮಿಕ ತನಿಖೆಯಲ್ಲಿ ಪಿಸ್ತೂಲ್ ಹಿಮಾಂಶುವಿನದ್ದಾಗಿತ್ತು ಎಂದು ತಿಳಿದುಬಂದಿದೆ. ವಿಡಿಯೋ ಚಿತ್ರೀಕರಿಸಲು ಬಳಸಿದ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದು, ಸ್ಥಳದಿಂದ ಸಂಬಂಧಿತ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲಾಲ್ ಬಹಾದೂರ್ ಶಾಸ್ತ್ರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಹತ್ಯೆಗೆ ಸಮಾನವಾಗದ ಅಪರಾಧಿ ಹತ್ಯೆ) ಹಾಗೂ ಶಸ್ತ್ರ ಕಾಯ್ದೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com