ಮದ್ಯಪಾನ ಮಾಡಿ ವಿಧಾನಸಭೆಗೆ ಬಂದ್ರಾ ಪಂಜಾಬ್ ಸಿಎಂ ಭಗವಂತ್ ಮಾನ್? ಡೋಪ್ ಪರೀಕ್ಷೆಗೆ ವಿಪಕ್ಷಗಳ ಒತ್ತಾಯ; Video

ಅಕಾಲಿ ದಳವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಮುಖ್ಯಮಂತ್ರಿ ಮಾನ್ ಅವರ ವೀಡಿಯೊವನ್ನು ಬಿಡುಗಡೆ ಮಾಡಿದೆ.
Bhagwant Mann
ಭಗವಂತ್ ಮಾನ್
Updated on

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕುಡಿದು ವಿಧಾನಸಭೆಗೆ ಪ್ರವೇಶಿಸಿದ್ದಾರೆ ಎಂದು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಆರೋಪಿಸಿದೆ. ಅಕಾಲಿ ದಳವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಮುಖ್ಯಮಂತ್ರಿ ಮಾನ್ ಅವರ ವೀಡಿಯೊವನ್ನು ಬಿಡುಗಡೆ ಮಾಡಿದ್ದು ಈ ಕೃತ್ಯವು ನಾಚಿಕೆಗೇಡಿನ ಸಂಗತಿ ಎಂದು ಕರೆದಿದೆ. ಏತನ್ಮಧ್ಯೆ, ಬಿಜೆಪಿ ಕೂಡ ಮುಖ್ಯಮಂತ್ರಿಯನ್ನು ಟೀಕಿಸಿದ್ದು ಇದು ಸಂವಿಧಾನ ಮತ್ತು ವಿಧಾನಸಭೆಯ ಘನತೆಗೆ ಮಾಡಿದ ಅವಮಾನ ಎಂದು ಕರೆದಿದೆ. ವಿಪಕ್ಷಗಳ ಆರೋಪವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ತಿರಸ್ಕರಿಸಿದರು.

'ಕಾರ್ಮಿಕ ದಿನಾಚರಣೆಯಂದು' ಭಗವಂತ್ ಮಾನ್ ಅವರು ಇಂದು ಕುಡಿದು ವಿಧಾನಸಭೆಯ ಪವಿತ್ರ ಕೊಠಡಿಯನ್ನು ಪ್ರವೇಶಿಸಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ನೀವೇ ನೋಡಬಹುದು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಮಂತ್ರಿಯ ನಡವಳಿಕೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಈ ದಿನ ಅವರು ಕುಡಿದು ಬರಬಾರದಿತ್ತು ಎಂದು ಹೇಳುತ್ತದೆ.

Bhagwant Mann
ಒಂಟಿಯಾಗಿದ್ದ ಬುರ್ಕಾ ಮಹಿಳೆ ಎದೆ ಮುಟ್ಟಿ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿ: ಕಾಲಿಗೆ ಗುಂಡಿಕ್ಕಿ ಬಂಧಿಸಿದ UP ಪೊಲೀಸರು; Video

ಶಿರೋಮಣಿ ಅಕಾಲಿ ದಳವು ಇಂದು ಇಡೀ ಪಂಜಾಬ್‌ನ ಸಮ್ಮುಖದಲ್ಲಿ ಮುಖ್ಯಮಂತ್ರಿಯನ್ನು ಡೋಪ್ ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತದೆ. ಇದರಿಂದ ಪಂಜಾಬಿಗಳು ಸತ್ಯವನ್ನು ತಿಳಿದುಕೊಳ್ಳಬಹುದು ಎಂದು ಅಕಾಲಿ ದಳ ತನ್ನ ಪೋಸ್ಟ್‌ನಲ್ಲಿ ಬರೆದಿದೆ. ಅಕಾಲಿ ದಳದ ಹೊರತಾಗಿ, ಕಾಂಗ್ರೆಸ್-ಬಿಜೆಪಿ ಕೂಡ ಮುಖ್ಯಮಂತ್ರಿ ಭಗವಂತ್ ಮಾನ್ ಮದ್ಯ ಸೇವಿಸಿ ವಿಧಾನಸಭೆಗೆ ಬಂದು ಸದನದಿಂದ ಹೊರನಡೆದಿದ್ದಾರೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com