TVK ಎದುರು ಹೀನಾಯ ಸೋಲು; ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ: ಮತ್ತೆ ಗೆಲ್ಲುತ್ತೇವೆ, 1996ರ ಇತಿಹಾಸ ಮರುಕಳಿಸಲಿದೆ- DMK

ತಮ್ಮ ಪಕ್ಷ (ಶೇ 24.19) ಮತ್ತು 'ವಿಜೇತ ಪಕ್ಷ' (ಶೇ 34.92) ನಡುವಿನ ಮತ ಹಂಚಿಕೆಯಲ್ಲಿನ ವ್ಯತ್ಯಾಸವು 'ತುಂಬಾ ಹೆಚ್ಚೇನಿಲ್ಲ'. ಮುಂದಿನ ದಿನಗಳಲ್ಲಿ ಪಕ್ಷವು ಮತ್ತೆ ಪುಟಿದೆದ್ದು ವಿಜಯಶಾಲಿಯಾಗಿ ಹೊರಹೊಮ್ಮಲಿದೆ.
MK Stalin
ಎಂಕೆ ಸ್ಟಾಲಿನ್
Updated on

ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿನ ಆಘಾತಕಾರಿ ಸೋಲನ್ನು ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಅಸಾಮಾನ್ಯವೇನಲ್ಲ ಎಂದು ತಳ್ಳಿಹಾಕಿದ ಡಿಎಂಕೆ, ತನ್ನ ಸುದೀರ್ಘ ಇತಿಹಾಸದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದೆ ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಇನ್ನೂ ಉತ್ಸಾಹಭರಿತರಾಗಿದ್ದಾರೆ ಮತ್ತು ಜನರ ಕಲ್ಯಾಣಕ್ಕಾಗಿ ಉತ್ತಮ ಕೆಲಸವನ್ನು ಮುಂದುವರಿಸಲು ಬದ್ಧರಾಗಿದ್ದಾರೆ ಎಂದು ಬುಧವಾರ ಪ್ರತಿಪಾದಿಸಿದೆ.

ಡಿಎಂಕೆಯ ಗತಕಾಲದ ಇತಿಹಾಸವನ್ನು ಗುರುತಿಸುತ್ತಾ, ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ, 1991ರ ವಿಧಾನಸಭಾ ಚುನಾವಣೆಯಲ್ಲಿ, ರಾಜ್ಯದ 234 ಕ್ಷೇತ್ರಗಳ ಪೈಕಿ ಕ್ರಮವಾಗಿ ಹಾರ್ಬರ್ ಮತ್ತು ಎಗ್ಮೋರ್ ಕ್ಷೇತ್ರಗಳಿಂದ ಪಕ್ಷದ ದಿವಂಗತ ಪಿತಾಮಹ ಎಂ. ಕರುಣಾನಿಧಿ ಮತ್ತು ಪರಿತಿ ಇಲಂವಝುತಿ ಮಾತ್ರ ಗೆದ್ದಿದ್ದರು ಎಂದು ಹೇಳಿದರು.

'ಹಾಗಾದರೆ, 1991 ಅನ್ನು ಯಾರು ಮರೆಯಲು ಸಾಧ್ಯ? ಆ ವರ್ಷ ನಾವು ಸೋತಿದ್ದೆವು. ಆದರೆ, ನಾವು ಮತ್ತೆ ಪುಟಿದೆದ್ದು 1996 ರಲ್ಲಿ ಸರ್ಕಾರ ರಚಿಸಿದೆವು. 7 ದಶಕಗಳಿಗೂ ಹೆಚ್ಚಿನ ನಮ್ಮ ಸುದೀರ್ಘ ಇತಿಹಾಸದಲ್ಲಿ ನಾವು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ ಮತ್ತು ಪಕ್ಷದ ಕಾರ್ಯಕರ್ತರು ಅಧಿಕಾರದಿಂದ ಹೊರಗುಳಿದಿದ್ದರೂ, ಸಹ ದೃಢನಿಶ್ಚಯವನ್ನು ತೋರಿಸುತ್ತಾರೆ ಮತ್ತು ಉತ್ತಮ ಕೆಲಸವನ್ನು ಮುಂದುವರಿಸುತ್ತಾರೆ' ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ತಮ್ಮ ಪಕ್ಷ (ಶೇ 24.19) ಮತ್ತು 'ವಿಜೇತ ಪಕ್ಷ' (ಶೇ 34.92) ನಡುವಿನ ಮತ ಹಂಚಿಕೆಯಲ್ಲಿನ ವ್ಯತ್ಯಾಸವು 'ತುಂಬಾ ಹೆಚ್ಚೇನಿಲ್ಲ'. ಮುಂದಿನ ದಿನಗಳಲ್ಲಿ ಪಕ್ಷವು ಮತ್ತೆ ಪುಟಿದೆದ್ದು ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎಂದು ಭಾರತಿ ವಿಶ್ವಾಸ ವ್ಯಕ್ತಪಡಿಸಿದರು.

'ಜನರಿಗೆ ಧನ್ಯವಾದ ಅರ್ಪಿಸುತ್ತಾ, ಸೋಲು ಗೆಲುವುಗಳಿಗಿಂತ ಸಿದ್ಧಾಂತ ಮುಖ್ಯ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಪ್ರತಿಪಾದಿಸಿದ್ದಾರೆ' ಎಂದು ತಿಳಿಸಿದರು.

MK Stalin
TVK ಬೆಂಬಲ ವಿಷಯವಾಗಿ ಮೈತ್ರಿಯಲ್ಲಿ ಬಿರುಕು: DMK ಬೆನ್ನಿಗೆ ಕಾಂಗ್ರೆಸ್ ಚೂರಿ? AIADMKಯಲ್ಲೂ ಭುಗಿಲೆದ್ದ ಅಸಮಾಧಾನ!

ಮೇ 4 ರಂದು, ಡಿಎಂಕೆ ಮುಖ್ಯಸ್ಥರು ತಮ್ಮ ಸಾರ್ವಜನಿಕ ಜೀವನದಲ್ಲಿ ಹಲವಾರು ಗೆಲುವು ಮತ್ತು ಸೋಲುಗಳನ್ನು ಕಂಡಿದ್ದೇನೆ. ಆದ್ದರಿಂದ, ಕೇವಲ ಚುನಾವಣಾ ಗೆಲುವು ಮತ್ತು ಸೋಲುಗಳಲ್ಲ, ಗುರಿ ಮತ್ತು ಸಿದ್ಧಾಂತವೇ ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದರು..

ಆಡಳಿತ ಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಡಿಎಂಕೆ ಇನ್ನು ಮುಂದೆ ಪ್ರಮುಖ ವಿರೋಧ ಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಾನು ಎಲ್ಲ ವರ್ಗದ ಜನರಿಗೆ ಸತ್ಯವಂತನಾಗಿದ್ದೆ; ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ವರ್ತಿಸಿದೆ, ನನ್ನ ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡಿದೆ. ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ, ಆಡಳಿತ ಪಕ್ಷವಾಗಿ ಡಿಎಂಕೆ ಉತ್ತಮವಾಗಿ ಕೆಲಸ ಮಾಡಿದೆ, ಇಂದಿನಿಂದ ಉತ್ತಮ ವಿರೋಧ ಪಕ್ಷವಾಗಿರುತ್ತದೆ. ಡಿಎಂಕೆಯ ರಾಜಕೀಯ ಪ್ರಯಾಣ ಯಾವುದೇ ಅಡ್ಡಿಯಿಲ್ಲದೆ ಮುಂದುವರಿಯುತ್ತದೆ ಎಂದು ಸ್ಟಾಲಿನ್ ಹೇಳಿದರು.

ಮೇ 4 ರಂದು ಮತ ಎಣಿಕೆ ನಡೆದಾಗ, ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ತಮಿಳುನಾಡಿನ ಚುನಾವಣಾ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿ, ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಹಾಲಿ ಡಿಎಂಕೆ ಮತ್ತು ಅದರ ಅಧ್ಯಕ್ಷ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಕೊಳತ್ತೂರು ಕ್ಷೇತ್ರದಲ್ಲಿ ಆಘಾತಕಾರಿ ಸೋಲು ನೀಡಿತು. ಎಐಎಡಿಎಂಕೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com