ಪುದುಚೆರಿಯಲ್ಲಿ NDA ಗೆಲುವು: ಕರ್ನಾಟಕ ಬಿಜೆಪಿ ನಾಯಕರ ನಿರ್ಣಾಯಕ ಪಾತ್ರ

ಪಕ್ಷವು ಈ ಬಾರಿ ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಹಿಂದಿನ ಚುನಾವಣೆಯಲ್ಲಿ ಪಡೆದ ಆರು ಸ್ಥಾನಗಳಿಂದ ಕಡಿಮೆಯಾಗಿದೆ.
Poll officials during the counting of votes for the Assembly elections at a counting centre in Puducherry on Monday
ಪುದುಚೆರಿ ಎಣಿಕೆ ಕೇಂದ್ರದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ವೇಳೆ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ದೃಶ್ಯ.
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಸುಮಾರು 6 ಗಂಟೆ ಪ್ರಯಾಣದ ದೂರದಲ್ಲಿರುವ ಪುದುಚೆರಿಯಲ್ಲಿ ಬಿಜೆಪಿ ನಾಯಕರ ರಾಜ್ಯಾಂತರ ರಾಜಕೀಯ ಚಟುವಟಿಕೆಗಳು ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗಿವೆ.

ಭಾರತಿನಗರದ ಮಾಜಿ ಶಾಸಕ ಹಾಗೂ ಬಿಜೆಪಿ ಪುದುಚೆರಿ ರಾಜ್ಯ ಪ್ರಭಾರಿ ನಿರ್ಮಲ್ ಕುಮಾರ್ ಸುರಾಣ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿಗೆ ನೀಡಿದ ಮಾಹಿತಿಯ ಪ್ರಕಾರ, 30 ಸದಸ್ಯರ ಪುದುಚೆರಿ ವಿಧಾನಸಭೆಯಲ್ಲಿ ಪಕ್ಷದ ಸಾಧನೆ ಪರಿಶೀಲಿಸಲು ದಿನಪೂರ್ತಿ ಸಭೆ ನಡೆಸಲಾಗಿದೆ.

ಪಕ್ಷವು ಈ ಬಾರಿ ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಹಿಂದಿನ ಚುನಾವಣೆಯಲ್ಲಿ ಪಡೆದ ಆರು ಸ್ಥಾನಗಳಿಂದ ಕಡಿಮೆಯಾಗಿದೆ. ಆದರೆ ಮೈತ್ರಿ ಪಕ್ಷಗಳು ಹೆಚ್ಚುವರಿ ಸ್ಥಾನಗಳನ್ನು ಗೆದ್ದಿರುವುದರಿಂದ, ಎನ್ ಡಿಎ 18 ಸ್ಥಾನಗಳೊಂದಿಗೆ ಬಲಿಷ್ಠ ಸ್ಥಾನದಲ್ಲಿದೆ. ಡಿಎಂಕೆ-ಕಾಂಗ್ರೆಸ್ ಮೈತ್ರಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ.

Poll officials during the counting of votes for the Assembly elections at a counting centre in Puducherry on Monday
ಅಸ್ಸಾಂ, ಕೇರಳದಲ್ಲಿ ಬಿಜೆಪಿ, ಎಲ್‌ಡಿಎಫ್ ಹ್ಯಾಟ್ರಿಕ್ ಗೆಲುವಿನ ಗುರಿ; ಪುದುಚೆರಿ ಮೇಲೆ NDA ಕಣ್ಣು; ಮತದಾರರ ಒಲವೇನು?

ಸಭೆಯಲ್ಲಿ ಎ. ನಮಸ್ಸಿವಾಯಂ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಎಐಎನ್‌ಆರ್‌ಸಿ ನಾಯಕ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಆಯ್ಕೆಗಳನ್ನು ಪರಿಗಣಿಸುತ್ತಿದೆ. 30 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ ಇರುವುದರಿಂದ, ಮುಂದಿನ ಕೆಲವು ದಿನಗಳು ವಿವಿಧ ಪಕ್ಷಗಳು ತಮ್ಮ ನಿಲುವುಗಳನ್ನು ಅಂತಿಮಗೊಳಿಸುವಲ್ಲಿ ಮಹತ್ವದ್ದಾಗಿವೆ.

ಸುರಾಣ ಸೇರಿದಂತೆ ಕರ್ನಾಟಕ ಮೂಲದ ನಾಯಕರ ಭಾಗವಹಿಸುವಿಕೆ, ಸಂಘಟನೆ ಬಲಪಡಿಸಲು ಅನುಭವಿಗಳನ್ನೊಳಗೊಂಡ ಪಕ್ಷದ ತಂತ್ರವನ್ನು ತೋರಿಸುತ್ತದೆ. ಹಿಂದಿನ ಚುನಾವಣೆಯಲ್ಲಿ ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ ತಮಿಳುನಾಡು ಪ್ರಭಾರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬೆಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಬಿಜೆಪಿ ದಕ್ಷಿಣ ಭಾರತ ಸಂಯೋಜಕ ಪ್ರಕಾಶ್ ಮಂಡೋತ್, ಕರ್ನಾಟಕ ತಂಡವು ಮೂರು ಸ್ಥಳಗಳಲ್ಲಿ ವ್ಯಾಪಿಸಿರುವ ಪುದುಚೆರಿ ಘಟಕದೊಂದಿಗೆ ಸಮನ್ವಯ ಸಾಧಿಸಲು ಹಾಗೂ ಕೇಂದ್ರ ಸಚಿವರು, ವಿಐಪಿಗಳು, ಪ್ರಮುಖ ಪ್ರಚಾರಕರು ಮತ್ತು ನಾಯಕರ ಭೇಟಿ ವ್ಯವಸ್ಥೆ ಮಾಡಲು ವ್ಯಾಪಕವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com