TVK ವಿಜಯ್ ಗೆ ಮತ್ತೊಂದು ಹಿನ್ನಡೆ: ರಾತ್ರೋರಾತ್ರಿ ದಳಪತಿಗೆ ನೀಡಿದ್ದ ಭದ್ರತೆ ವಾಪಸ್!

ವಿಜಯ್ ಅವರಿಗೆ 4 ಬೆಂಗಾವಲು ಭದ್ರತಾ ವಾಹನಗಳನ್ನ ಒಳಗೊಂಡ ಪೊಲೀಸ್ ರಕ್ಷಣೆಯನ್ನು ಒದಗಿಸಲಾಯಿತು. 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಿದ್ದರು.
Thalapathy Vijay
ದಳಪತಿ ವಿಜಯ್
Updated on

ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ, ಟಿವಿಕೆ ನಾಯಕ ವಿಜಯ್ ಅವರಿಗೆ ನೀಡಿದ್ದ ಭದ್ರತೆಯನ್ನು ರಾತ್ರೋ ರಾತ್ರಿ ವಾಪಸ್ ಪಡೆಯಲಾಗಿದೆ.

ವಿಜಯ್ ಅವರಿಗೆ 4 ಬೆಂಗಾವಲು ಭದ್ರತಾ ವಾಹನಗಳನ್ನ ಒಳಗೊಂಡ ಪೊಲೀಸ್ ರಕ್ಷಣೆಯನ್ನು ಒದಗಿಸಲಾಯಿತು. 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಿದ್ದರು.

ವಿಜಯ್ ಸರ್ಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ರು. ಆದ್ರೆ, ಬಹುಮತದ ಕೊರತೆಯಿಂದಾಗಿ ರಾಜ್ಯಪಾಲರು ಅವರನ್ನ ಸರ್ಕಾರ ರಚಿಸಲು ಆಹ್ವಾನಿಸಲಿಲ್ಲ ಎನ್ನಲಾಗ್ತಿದೆ. ಈ ಪರಿಸ್ಥಿತಿಯಲ್ಲಿ, ಕಳೆದ ಎರಡು ದಿನಗಳಿಂದ ವಿಜಯ್‌ ಗೆ ಒದಗಿಸಲಾಗುತ್ತಿದ್ದ ಬೆಂಗಾವಲು ಭದ್ರತೆಯನ್ನು ಪೊಲೀಸರು ಹಿಂಪಡೆದಿದ್ದಾರೆ.

ವಿಜಯ್ ಅವರ ಮನೆಗೆ 4 ಭದ್ರತಾ ವಾಹನಗಳಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ಎಲ್ಲವನ್ನೂ ಹಿಂಪಡೆಯಲಾಗಿದೆ.

Thalapathy Vijay
ಯಾವುದೇ ಸಂದರ್ಭದಲ್ಲೂ TVKಗೆ ಬೆಂಬಲ ಇಲ್ಲ- AIADMK; ನಿರೀಕ್ಷೆಯಲ್ಲಿದ್ದ ವಿಜಯ್ ಗೆ ಶಾಕ್!

ತಮಿಳುನಾಡು ವೆಟ್ರಿ ಕಲ್ಕಾ ನಾಯಕ ವಿಜಯ್ ಅವರ ನೀಲಂಕರೈನಲ್ಲಿರುವ ಮನೆಗೆ ಒದಗಿಸಲಾದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ.

ಇದರೊಂದಿಗೆ, ಹಾಲಿ ಮುಖ್ಯಮಂತ್ರಿಗೆ ನೀಡಲಾದ ಭದ್ರತೆಯನ್ನು ಹಿಂಪಡೆಯಲಾಗಿದೆ. ಬೆಂಗಾವಲು ಹಿಂಪಡೆದ ನಂತರ ವಿಜಯ್ ಅವರೇ ಸ್ವಯಂಪ್ರೇರಣೆಯಿಂದ ಬೆಂಗಾವಲು ವಾಹನಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com