ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಮೇಲೆ ನೋಟಿನ ಮಳೆ ಸುರಿಸಿದ ಅಭಿಮಾನಿಗಳು, Video!

ಗುಜರಾತ್‌ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ.
ಗಾಯಕನ ಮೇಲೆ ನೋಟಿನ ಮಳೆ
ಗಾಯಕನ ಮೇಲೆ ನೋಟಿನ ಮಳೆ
Updated on

ಗುಜರಾತ್‌ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಕವಿರಾಜ್ ಜಿಗ್ನೇಶ್ ಅವರ ಸಾಂಪ್ರದಾಯಿಕ ದೀರೋ ಪ್ರದರ್ಶನದ ಸಮಯದಲ್ಲಿ, ಭಕ್ತರು ವೇದಿಕೆಗೆ ನುಗ್ಗಿದ ನಾಟಕೀಯ ದೃಶ್ಯಗಳು ಕಂಡುಬಂದಿತು. ಗಾಯಕನ ಮೇಲೆ ಕರೆನ್ಸಿ ನೋಟುಗಳನ್ನು ಎಸೆಯಲಾಯಿತು. ಅದು ಎಷ್ಟು ಎಂದರೇ ಗಾಯಕನಿಗೆ ಹಾಡಲು ಸಾಧ್ಯವಾಗದಷ್ಟು ನೋಟುಗಳಿಂದ ಮುಚ್ಚಲಾಯಿತು.

ಗಾಯಕನ ಮೇಲೆ ನೋಟಿನ ಮಳೆ
ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ಜೀವನ್ಮರಣ ಹೋರಾಟ: 9 ಗಂಟೆಗಳ ನಂತರ ಸುರಕ್ಷಿತವಾಗಿ ರಕ್ಷಿಸಿದ NDRF

ಖರ್ಚುಗಳ ನಂತರ ಉಳಿದ ಹಣವನ್ನು ಅಹಿರ್ ಚಾರಿಟೇಬಲ್ ಟ್ರಸ್ಟ್‌ಗೆ ದೇಣಿಗೆ ನೀಡುವುದಾಗಿ ಸಂಘಟಕರು ಘೋಷಿಸಿದ್ದಾರೆ. ಇದನ್ನು ಅಹಮದಾಬಾದ್‌ನಲ್ಲಿ ಗುಜರಾತ್ ಬಾಲಕಿಯರ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ನಿರ್ಮಿಸಲು ಬಳಸಲಾಗುತ್ತದೆ.

ಕವಿರಾಜ್ ಜಿಗ್ನೇಶ್ ಅವರ 'ದಯಾರೋ' ಹಾಡಿಗೆ ಹಣದ ಸುರಿಮಳೆಯೇ ಹರಿದು ಬಂದಿತು. 'ದಯಾರೋ' ಎಂದರೇನು? ಇದು ಕಥೆಗಳು, ಹಾಸ್ಯಗಳು ಮತ್ತು ಸ್ತೋತ್ರಗಳನ್ನು ಒಳಗೊಂಡಿರುವ ಗುಜರಾತಿ ಜಾನಪದ ಗೀತೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com