ಉತ್ತರಪ್ರದೇಶದಲ್ಲಿ 115 ವರ್ಷದ ಹಳೆಯ ಮಸೀದಿ ಧ್ವಂಸ: ವಕ್ಫ್ ಕಾಯ್ದೆ ದುರ್ಬಳಕೆ; PM ಮೋದಿ-ಯೋಗಿ ವಿರುದ್ಧ ಓವೈಸಿ ವಾಗ್ದಾಳಿ

ಉತ್ತರಪ್ರದೇಶದ ಸಹರಾನ್‌ಪುರದ ಕಲೆಕ್ಟರೇಟ್ ಸಂಕೀರ್ಣದಲ್ಲಿರುವ ಮಸೀದಿಯನ್ನು ಶನಿವಾರ ಬೆಳಿಗ್ಗೆ ಬುಲ್ಡೋಜರ್ ಬಳಸಿ ಕೆಡವಲಾಯಿತು. ಧ್ವಂಸ ಪ್ರಕರಣದ ಬೆನ್ನಲ್ಲೇ ರಾಜಕೀಯ ವಾಗ್ವಾದ ಶುರುವಾಗಿದೆ.
Yogi, Modi, Asaduddin Owaisi
ಯೋಗಿ ಆದಿತ್ಯನಾಥ್, ನರೇಂದ್ರ ಮೋದಿ, ಅಸಾದುದ್ದೀನ್ ಓವೈಸಿ
Updated on

ಉತ್ತರಪ್ರದೇಶದ ಸಹರಾನ್‌ಪುರದ ಕಲೆಕ್ಟರೇಟ್ ಸಂಕೀರ್ಣದಲ್ಲಿರುವ ಮಸೀದಿಯನ್ನು ಶನಿವಾರ ಬೆಳಿಗ್ಗೆ ಬುಲ್ಡೋಜರ್ ಬಳಸಿ ಕೆಡವಲಾಯಿತು. ಧ್ವಂಸ ಪ್ರಕರಣದ ಬೆನ್ನಲ್ಲೇ ರಾಜಕೀಯ ವಾಗ್ವಾದ ಶುರುವಾಗಿದೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನಂತರ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಪ್ರಶ್ನೆಗಳನ್ನು ಎತ್ತಿದ್ದು ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಮಸೀದಿಗಳನ್ನು ಕೆಡವುತ್ತಿದ್ದಾರೆ ಎಂದು ಓವೈಸಿ ಆರೋಪಿಸಿದ್ದಾರೆ.

ಬಿಜೆಪಿ ಮಸೀದಿಗಳನ್ನು ಕೆಡವುತ್ತಿದೆ. ದರ್ಗಾಗಳು ಮತ್ತು ಸ್ಮಶಾನಗಳನ್ನು ನಾಶಪಡಿಸುತ್ತಿದ್ದು ಇದು ಚುನಾವಣೆಗಳನ್ನು ಗೆಲ್ಲಲು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂದು ಓವೈಸಿ ಹೇಳಿದ್ದಾರೆ. ಭಾರತೀಯ ಸಂವಿಧಾನದಲ್ಲಿ ನೀಡಲಾದ ಭರವಸೆಗಳನ್ನು ಬಿಜೆಪಿಗರು ಗೌರವಿಸುವುದಿಲ್ಲ ಎಂದು ಅವರು ಹೇಳಿದರು. ಮಸೀದಿ ಮೊದಲೇ ಅಸ್ತಿತ್ವದಲ್ಲಿದ್ದಾಗ, ಸಹರಾನ್‌ಪುರದಲ್ಲಿ ಕಲೆಕ್ಟರ್ ಕಚೇರಿ ನಂತರ ಬಂದಿತು ಎಂದು ಓವೈಸಿ ಹೇಳಿದರು.

ವಕ್ಫ್ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದಾಗಲೇ ನಾನು ನೋಡಿ, ಮುಂದೆ ಬಿಜೆಪಿ ಮಸೀದಿಗಳನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಹೇಳಿದ್ದು ಅದು ನಡೆಯುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥರು ಹೇಳಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್, ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಮಸೀದಿಗಳನ್ನು ದ್ವೇಷಿಸುತ್ತಾರೆ. ಅದಕ್ಕಾಗಿಯೇ ಇಂದು ಕಾನೂನನ್ನು ಮೀರಿ ಮತ್ತು ಸಂವಿಧಾನವನ್ನು ಉಲ್ಲಂಘಿಸಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

Yogi, Modi, Asaduddin Owaisi
'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಹರಾನ್‌ಪುರ ಮಸೀದಿಯ ಮೇಲಿನ ಬುಲ್ಡೋಜರ್ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಸಹಾರನ್‌ಪುರ ಕಲೆಕ್ಟರೇಟ್‌ನಲ್ಲಿರುವ ಮಸೀದಿಯನ್ನು ಇಂದು ಬೆಳಿಗ್ಗೆ 5 ಗಂಟೆಗೆ ಕೆಡವಲಾಯಿತು. ಮುಸ್ಲಿಮರಿಗೆ ಇನ್ನು ಮುಂದೆ ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಇಲ್ಲವೇ? ನಮ್ಮ ಪೂಜಾ ಸ್ಥಳಗಳನ್ನು ದುರ್ಬಲ ಮತ್ತು ಕಲ್ಪಿತ ನೆಪಗಳ ಅಡಿಯಲ್ಲಿ ಪದೇ ಪದೇ ಏಕೆ ಕೆಡವಲಾಗುತ್ತಿದೆ? ಮಸೀದಿ ಸಮಿತಿಯು 1911ರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಕಲೆಕ್ಟರೇಟ್ ಮೊದಲು ಮಸೀದಿ ಅಸ್ತಿತ್ವದಲ್ಲಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸಿತು. ಒಂದು ಶತಮಾನಕ್ಕೂ ಹೆಚ್ಚು ಕಾಲ ಅಲ್ಲಿ ನಿರಂತರವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇದರರ್ಥ ಇದು ಇಂದು ನಿರ್ಮಿಸಲಾದ ಕಟ್ಟಡವಲ್ಲ, ಆದರೆ ದೀರ್ಘಕಾಲದವರೆಗೆ ಪೂಜಾ ಸ್ಥಳವಾಗಿ ಬಳಸಲಾಗುತ್ತಿದೆ. ಇದು ವಕ್ಫ್ ಬೈ ಯೂಸರ್‌ನ ಆಧಾರವಾಗಿದೆ, ಇದನ್ನು ಕಾನೂನಿನಿಂದಲೂ ಗುರುತಿಸಲಾಗಿದೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಸಹಾರನ್‌ಪುರದ ಕಲೆಕ್ಟರೇಟ್ ಸಂಕೀರ್ಣದಲ್ಲಿರುವ ಮಸೀದಿಯನ್ನು ಆಡಳಿತವು ಬುಲ್ಡೋಜರ್‌ನಿಂದ ಕೆಡವಿದೆ. ಶನಿವಾರ ಬೆಳಿಗ್ಗೆ ಆಡಳಿತವು ಅಕ್ರಮ ಮಸೀದಿಯನ್ನು ಕೆಡವಲು ಪ್ರಾರಂಭಿಸಿತು. SDM, ನಗರ ಮ್ಯಾಜಿಸ್ಟ್ರೇಟ್ ಮತ್ತು ಇತರ ಆಡಳಿತ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಏತನ್ಮಧ್ಯೆ, BSP ಮುಖ್ಯಸ್ಥೆ ಮಾಯಾವತಿ ಧ್ವಂಸದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಮಸೀದಿಗಳನ್ನು ಅಕ್ರಮವೆಂದು ಘೋಷಿಸಿ ಕೆಡವಲು ಸರ್ಕಾರ ಆತುರಪಡುತ್ತಿರುವುದು ಸರಿಯಲ್ಲ ಎಂದು ಮಾಯಾವತಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com