ಕನ್ನಡದ ರಾಧಾ ರಮಣ ಧಾರಾವಾಹಿ ನಟಿ ಶ್ವೇತಾ ಆರ್ ಪ್ರಸಾದ್ ಅವರು ನಿಮಗೆ ಪ್ರಧಾನಿ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಅದು ನಿಮ್ಮ ವೈಯಕ್ತಿಕ. ಅದನ್ನು ಬಿಟ್ಟು ಲಸಿಕೆ ಹಾಕಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ ಎಂದು ಹೇಳಿದ್ದಾರೆ.
ನಿಮಗೆ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಲಸಿಕೆ ಹಾಕಿಸಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ: ನಟಿ ಶ್ವೇತಾ
ಕನ್ನಡದ ರಾಧಾ ರಮಣ ಧಾರಾವಾಹಿ ನಟಿ ಶ್ವೇತಾ ಆರ್ ಪ್ರಸಾದ್ ಅವರು ನಿಮಗೆ ಪ್ರಧಾನಿ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಅದು ನಿಮ್ಮ ವೈಯಕ್ತಿಕ. ಅದನ್ನು ಬಿಟ್ಟು ಲಸಿಕೆ ಹಾಕಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ ಎಂದು ಹೇಳಿದ್ದಾರೆ.
ಬೆಳಗ್ಗೆ ನನಗೊಂದು ಫೋನ್ ಬಂದಿತ್ತು. ಹಳ್ಳಿಯಿಂದ ಯಾರೋ ಒಬ್ಬರು ಫೋನ್ ಮಾಡಿ ಮಾತನಾಡುತ್ತಿದ್ದರು. ಆ ಹಳ್ಳಿಯಲ್ಲಿ ಕೊರೋನಾದಿಂದಾಗಿ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಲಸಿಕೆ ಹಾಕಿಕೊಳ್ಳದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ.
ಇದಕ್ಕೆ ಕಾರಣ ಹಳ್ಳಿಗರೆಲ್ಲಾ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಇದ್ದಾರಂತೆ, ಇನ್ನು ಕೋವಿಡ್ ಗೆ ಲಸಿಕೆ ಕೊಡುತ್ತಿರುವುದು ಮೋದಿ ಸರ್ಕಾರ ಕೊಡುತ್ತಿರುವುದು ಹೀಗಾಗಿ ಯಾರೂ ಲಸಿಕೆ ಹಾಕಿಸಿಕೊಂಡಿಲ್ಲವಂತೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದು ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅಥವಾ ಬಿಜೆಪಿಯನ್ನು ದ್ವೇಷಿಸುವುದು ನಿಮ್ಮ ವೈಯಕ್ತಿಕ ವಿಚಾರ. ನೀವು ಯಾರನ್ನ ಬೇಕಾದರೂ ದ್ವೇಷಿಸಿ ಆದರೆ ದಯವಿಟ್ಟು ಮೂರ್ಖತನ ಬಿಟ್ಟು ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.