ವಿಧಾನಪರಿಷತ್ ಚುನಾವಣೆ ಟಿಕೆಟ್ ಗೆ ನಾನೂ ಆಕಾಂಕ್ಷಿ: ರಮ್ಯಾ

ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ನಟಿ ರಮ್ಯ ಹೇಳಿದ್ದಾರೆ.
ರಮ್ಯಾ
ರಮ್ಯಾ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ನಟಿ ರಮ್ಯಾ ಹೇಳಿದ್ದಾರೆ. ಕಾಂಗ್ರೆಸ್ ನ ನಾಯಕರು ಚರ್ಚೆ ನಡೆಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು ಪರಿಷತ್ ಚುನಾವಣೆಗೆ ಸ್ಪರ್ಧಿಸಲು  ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ರಮ್ಯ ತಿಳಿಸಿದ್ದಾರೆ. 
ಎಲ್ ಇ ಡಿ ಬಲ್ಬ್ ಪ್ರಚಾರಕ್ಕಾಗಿ ರಾಯಭಾರಿಗಳ ನೇಮಕ ಮಾಡುವ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯ,  ಕರ್ನಾಟಕ ಇಂಧನ ಇಲಾಖೆಗೆ ಎಲ್‌ಇಡಿ ಬಲ್ಬ್ ಪ್ರಚಾರ ರಾಯಭಾರಿಯಾಗಿ  ಆಯ್ಕೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಸಾರ್ವಜನಿಕರು ವಿದ್ಯುತ್ ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.
ವಿದ್ಯುತ್ ಇಲಾಖೆ ಎಲ್‌ಇಡಿ ಬಲ್ಬ್‌ಗಳ ಪ್ರಚಾರ ಕಾರ್ಯಕ್ಕೆ ರಾಯಭಾರಿಯಾಗಿ ನನ್ನನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ಅಪ್ರಸ್ತುತ  ಹಿಂದೆ ಗುಜರಾತ್ ಸರ್ಕಾರದ ಪ್ರವಾಸೋಧ್ಯಮಕ್ಕೆ ಅಮಿತಾ ಬಚ್ಚನ್ ರಾಯಭಾರಿಯಾಗಿದ್ದರು. ಸ್ವಚ್ಛ ಗಂಗಾ ಯೋಜನೆಗೆ ಹೇಮಾಮಾಲಿನಿ ರಾಯಭಾರಿಯಾಗಿದ್ದಾರೆ. ಕರ್ನಾಟಕದಲ್ಲಿ ನಮ್ಮದೇ ಸರ್ಕಾರವಿದ್ದು, ನನ್ನನ್ನು ರಾಯಭಾರಿ ಮಾಡಿರುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com