ಬೆಂಗಳೂರು: ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳಿಗೆ ದೇವೇಗೌಡ ಏನೆಂದು ತೋರಿಸ್ತೀನಿ. ಎರಡೂ ಪಕ್ಷಕ್ಕೆ ನನ್ನ ಯೋಗ್ಯತೆ ಹಾಗೂ ಸಾಮರ್ಥ್ಯ ಏನು ಎಂದು ತೋರಿಸುವ ಶಕ್ತಿ ನನ್ನಲ್ಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸವಾಲು ಹಾಕಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮಗಳಿಗೆ ಅಪಾರ ಜನ ಸೇರುತ್ತಾರೆ. ಆದರೆ ಅವುಗಳು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಕೆಲವು ಜಿಲ್ಲೆ, ತಾಲೂಕುಗಳಲ್ಲಿ ಜೆಡಿಎಸ್ ಘಟಕಗಳು ನಿಷ್ಕ್ರಿಯವಾಗಿದೆ. ಪಕ್ಷ ಉಳಿಸಲಿಕ್ಕಾಗಿ ನಿಷ್ಕ್ರಿಯ ಘಟಕಗಳನ್ನು ಮಾರ್ಪಾಡು ಮಾಡುತ್ತೇನೆ ಎಂದರು.
ಚುನಾವಣೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಈ ತಿಂಗಳೊಳಗೆ ಜಿ.ಪಂ, ತಾ.ಪಂ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ದೇವೇಗೌಡರು ಹೇಳಿದರು.
ಇನ್ನು ಇದಕ್ಕೂ ಮೊದಲು ಜೆಡಿಎಸ್ ನ ಮಾಗಡಿ ಶಾಸಕ ತಮಗೆ ಮೊದಲ ಸಾಲಿನಲ್ಲಿ ಸೀಟು ಸಿಗಲಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದರು. ಬಾಲಕೃಷ್ಣರನ್ನು ಸಮಾಧಾನ ಪಡಿಸಲು ಜೆಡಿಎಸ್ ನ ಹಿರಿಯ ಮುಖಂಡರು ಯತ್ನಿಸಿದರೂ, ಅವರು ಸಭೆಯಿಂದ ಹೊರ ನಡೆದ ಘಟನೆ ಕೂಡ ನಡೆಯಿತು.
Advertisement