ಸಿಎಂ ಸಿದ್ದರಾಮಯ್ಯ ಕುಳಿತುಕೊಳ್ಳಲು ಕುರ್ಚಿಗಾಗಿ ಟವೆಲ್ ಹಾಕಿದ ಆಯೋಜಕ

ಬಸ್ ನಲ್ಲಿ ಕುಳಿತುಕೊಳ್ಳಲು ಸೀಟಿಗಾಗಿ ಕರ್ಚೀಫ್, ಟವೆಲ್ ಹಾಕುವುದು ಜನಸಾಮಾನ್ಯರ ಪಾಡು, ಆದರೆ ಇಲ್ಲಿ ಸಿಎಂ ಸಿದ್ದರಾಮಯ್ಯ ಕುಳಿತುಕೊಳ್ಳಲು ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಮೈಸೂರು:  ಬಸ್ ನಲ್ಲಿ ಕುಳಿತುಕೊಳ್ಳಲು ಸೀಟಿಗಾಗಿ ಕರ್ಚೀಫ್, ಟವೆಲ್ ಹಾಕುವುದು ಜನಸಾಮಾನ್ಯರ ಪಾಡು, ಆದರೆ ಇಲ್ಲಿ ಸಿಎಂ ಸಿದ್ದರಾಮಯ್ಯ ಕುಳಿತುಕೊಳ್ಳಲು ಆಯೋಜಕರು ಕುರ್ಚಿಗೆ ಬಿಳಿ ಟವೆಲ್ ಹಾಕಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಮೈಸೂರಿನಲ್ಲಿ ನಿನ್ನೆ ನಡೆದ ಸಮಾರಂಭವೊಂದಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಸಿಎಂ ದೇವಾಸ್ಥಾನಕ್ಕೆ ತೆರಳಿದ್ದರು. ವಾಪಸ್ ಬರುವ ವೇಳೆಗೆ ಸಿಎಂ ಕುಳಿತಿದ್ದ ಕುರ್ಚಿಯ ಮೇಲೆ ಬಿಳಿ ಟವೆಲ್ ಹಾಕಲಾಗಿತ್ತು.

ಬೇರೆ ಯಾವ ಅತಿಥಿಗಳು ಸಿಎಂ ಕುರ್ಚಿಯಲ್ಲಿ ಕೂತುಕೊಳ್ಳಬಾರದು ಎಂಬ ಉದ್ದೇಶದಿಂದ ಆಯೋಜಕರು ಸಿದ್ದರಾಮಯ್ಯ ಕುಳಿತಿದ್ದ ಚೇರ್ ಮೇಲೆ ಟವೆಲ್ ಹಾಕಿದ್ದರು. ಅವರು ಬಂದನ ನಂತರ ಟವೆಲ್ ತೆಗೆದು ಅದೇ ಕುರ್ಚಿಯಲ್ಲಿ ಕೂರಿಸಿ, ಅಕ್ಕ ಪಕ್ಕದ ಚೇರ್ ಗಳಲ್ಲಿ ಹಲವು ಸಚಿವರು ಮತ್ತು ಅತಿಥಿಗಳು ಕೂತುಕೊಂಡರು.

ಸಿಎಂ ಗದ್ದುಗೆಯಿಂದ ಸಿದ್ದು ಕೆಳಗಿಳಿಯುತ್ತಾರೆ. ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದುಪ ಕಾಕತಾಳೀಯ ಎನಿಸಿದೆ. ಇದು ಸಿಎಂ ಕುರ್ಚಿ ಆಕಾಂಕ್ಷಿಗಳಿಗೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂಬುದನ್ನು ಮಾರ್ಮಿಕವಾಗಿ ತೋರಿಸಿದೆ ಎಂಬುದು ಮಾಧ್ಯಮಗಳ ಅಭಿಪ್ರಾಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com