ಮಂಡ್ಯ: ಯಾಕೋ, ಏನೋ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಟೈಮ್ ಸರಿಯಿಲ್ಲ ಅಂತಾ ಅನ್ಸುತ್ತೆ. ಬಾಯಿ ಬಿಟ್ಟರೇ ಬಣ್ಣಗೇಡು ಅನ್ನೋ ಮಾತಿನಂತೆ, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ರಮ್ಯ ಸುದ್ದಿಯಾಗುತ್ತಿದ್ದಾರೆ.
ಪಾಕಿಸ್ತಾನ ನರಕವಲ್ಲ, ಮಂಗಳೂರು ನರಕ ಎಂದು ಹೇಳಿಕೆ ನೀಡಿ ತೀವ್ರ ಟೀಕೆಗೆ ಒಳಗಾಗಿದ್ದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರ್ ಎಸ್ ಎಸ್ ಪಾತ್ರ ಏನೂ ಇಲ್ಲ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಗರಿಗೆದರಿದ್ದಾರೆ.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್ಎಸ್ ಯುಐ) 'ವಿದ್ಯಾರ್ಥಿಗಳ ನಡೆ ದೇಶದ ಬೆಳವಣಿಗೆ ಕಡೆ' ಘೋಷಣೆಯಡಿ ನಡೆಸಿದ ಜಾಥಾದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ದೇಶಕ್ಕೆ ಸ್ವಾತಂತ್ರ್ಯ ಬರಲು ಕಾಂಗ್ರೆಸ್ ಪಕ್ಷ ಕಾರಣ. ಬಿಜೆಪಿ, ಆರ್ ಎಸ್ ಎಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ ಎಂದು ಆರೋಪಿಸಿದರು.
Advertisement