ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಮಾತನಾಡಿ, ನಂಬಿಕೆ ಕುರಿತ ವ್ಯಾಖ್ಯಾನ ಸಂಕೀರ್ಣವಾದದ್ದು, ನಂಬಿಕೆಯೆಂಬುದು ಸಮಯದೊಂದಿದೆ ಬದಲಾಗುತ್ತದೆ. ಹೀಗಾಗಿ ವಿಧೇಯಕ ಕುರಿತು ತಜ್ಞರು ಹಾಗೂ ಸಂಬಂಧ ಪಟ್ಟಂತಹ ವಿಶ್ಲೇಷಕರೊಂದಿಗೆ ಚರ್ಚೆ ನಡೆಸುವ ಅಗತ್ಯವಿತ್ತು. ಆದರೆ, ಚರ್ಚೆ ನಡೆಸುವುದಕ್ಕೂ ಮುನ್ನವೇ ವಿಧೇಯಕ ಅನುಮೋದನೆ ಪಡೆದುಕೊಂಡಿತು. ಆದರೆ, ವಿಧೇಯಕದ ವಿರುದ್ಧ ನಾನಿಲ್ಲ ಎಂದು ಹೇಳಿದ್ದಾರೆ.