'ನನ್ನ ಹೇಳಿಕೆಯನ್ನು ಹಿಂಪಡೆಯುವಂತೆ ಕೇಳಿರುವ ಬಸವರಾಜ ಹೊರಟ್ಟಿ ಅವರು ಜಾಗತಿಕ ಲಿಂಗಾಯತ ಮಹಾಸಭೆಗೆ ರಾಜೀನಾಮೆ ಕೊಟ್ಟರೆ ಅವರಿಗೆ ನಷ್ಟವಾಗುತ್ತೆ ಹೊರತು ಸಂಸ್ಥೆಗೆ ನಷ್ಟವಿಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂವರೊಳಗೆ ಯಾರು ಹಿತವರು ನಿನಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿಸಿದೆ. ಜೆಡಿಎಸ್ ನಲ್ಲಿ ಕುಟುಂಬದ ವ್ಯವಸ್ಥೆ ಇದೆ, ಸೈದ್ಧಾಂತಿಕ ನಿಲುವಿಲ್ಲ. ಬಿ.ಜೆ.ಪಿ ಗೆ ಸೈದ್ದಾಂತಿಕ ಹಿನ್ನೆಲೆ ಇರುವುದಾದರೂ ಹಿಂದೂ ವಾದದ ಮೇಲೆ ನಿಂತಿದೆ. ಕಾಂಗೆಸ್ ಗೆ ಗಾಂಧಿ, ನೆಹರೂ ರೂಪಿಸಿದ ಸಿದ್ದಾಂತವಿದೆ. ಈ ಹಿನ್ನೆಲೆಯಲ್ಲಿ ಸರ್ವಧರ್ಮ ಸಮಾನತೆಗೆ ಅವಕಾಶ ಕಲ್ಪಿಸುವ ಕಾಂಗ್ರೆಸ್ಗೆ ಬೆಂಬಲಿಸುತ್ತೇನೆ ಮತ್ತು ಜನ ಬೆಂಬಲಿಸುವಂತೆ ಹೇಳಿಕೆ ನೀಡುತ್ತೇನೆ ಎಂದು ಮಾತೆ ಮಹಾದೇವಿ ಹೇಳಿದರು.