ಈ ಬಗ್ಗೆ ಮಾತನಾಡಿರುವ ಹ್ಯಾರಿಸ್, ಶಾಂತಿ ನಗರ ಮಿನಿ ಭಾರತವಿದ್ದಂತೆ. ಇಲ್ಲಿ ನಾನು ಸಾಕಷ್ಚು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಪ್ರಮುಖವಾಗಿ ನಗರದ ವಾಣಿಜ್ಯ ಕೇಂದ್ರವಾಗಿ ಶಾಂತಿನಗರವನ್ನು ರೂಪಿಸಿದ್ದೇನೆ. ಕಳೆದ ಐದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಹತ್ತಾರು ಕೋಟಿ ಅನುದಾನ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಇನ್ನೂ ಸಾಕಷ್ಟು ಕಾರ್ಯಕ್ರಮಗಳು ಚಾಲನೆಯಾಗಬೇಕಿದೆ. ಪ್ರಮುಖವಾಗಿ ನಾನು ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಕಷ್ಟಕಾಲದಲ್ಲಿ ಹಲವರು ನನ್ನ ಜೊತೆಯಲ್ಲಿದ್ದರು ಎಂದು ಹ್ಯಾರಿಸ್ ಹೇಳಿದರು.