ನಾಗರಿಕ ಸಂಸ್ಥೆಗಳ ಸಮನ್ವಯತೆಗೆ ಪ್ರಾಧಿಕಾರ ರಚನೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ

ಉತ್ತಮ ಸಮನ್ವಯತೆ ಮತ್ತು ಬೆಂಗಳೂರಿಗೆ ಸಂಬಂಧಪಟ್ಟ ಅಭಿವೃದ್ಧಿಪರ ಕೆಲಸಗಳನ್ನು ಜಾರಿಗೆ ...
ಬೆಂಗಳೂರಿನ ರಸ್ತೆ ಕಾಮಗಾರಿಯ ಭರವಸೆ ನೀಡಿರುವ ಕಾಂಗ್ರೆಸ್
ಬೆಂಗಳೂರಿನ ರಸ್ತೆ ಕಾಮಗಾರಿಯ ಭರವಸೆ ನೀಡಿರುವ ಕಾಂಗ್ರೆಸ್
Updated on

ಬೆಂಗಳೂರು: ಉತ್ತಮ ಸಮನ್ವಯತೆ ಮತ್ತು ಬೆಂಗಳೂರಿಗೆ ಸಂಬಂಧಪಟ್ಟ ಅಭಿವೃದ್ಧಿಪರ ಕೆಲಸಗಳನ್ನು ಜಾರಿಗೆ ತರಲು ಒಂದೇ ಸೂರಿನಡಿ ಹಲವು ನಾಗರಿಕ ಸಂಸ್ಥೆಗಳನ್ನು ತರಲು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾರ್ವಜನಿಕ ತನಿಖಾ ಪ್ರಾಧಿಕಾರವನ್ನು ತರಲು ಭರವಸೆ ನೀಡಿದ್ದು ಅದು ಈ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ.

ಈ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸಣ್ಣ ನಿಗಮಗಳಾಗಿ ವಿಂಗಡಿಸುವುದರಲ್ಲಿ ಆಸಕ್ತಿ ಹೊಂದಿದ್ದು ಅವುಗಳನ್ನು ಇತರ ನಾಗರಿಕ ಸಂಸ್ಥೆಗಳ ಜೊತೆ ಬೃಹತ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ತರಲು ಒಲವು ತೋರಿರುವುದು ಕಂಡುಬರುತ್ತದೆ.

ಬೆಂಗಳೂರಿನಲ್ಲಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಬಿಡಬ್ಲ್ಯುಎಸ್ಎಸ್ ಬಿ ಮತ್ತು ಇತರ ಕೆಲವು ನಾಗರಿಕ ಸಂಸ್ಥೆಗಳಿವೆ. ಈ ಎಲ್ಲಾ ಸಂಸ್ಥೆಗಳು ಬೆಂಗಳೂರು ನಗರಕ್ಕೆ ಕೆಲಸ ಮಾಡುವುದಿದ್ದರೂ ಈ ಸಂಸ್ಥೆಗಳ ಮಧ್ಯೆ ಸಮನ್ವಯದ ಕೊರತೆಯಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅದು ಬೆಸ್ಕಾಂ ಮತ್ತು ಬಿಡಬ್ಲ್ಯುಎಸ್ಎಸ್ ಬಿಯಿಂದ ರಸ್ತೆ ಅಗೆಯುವ ಕೆಲಸ ಮಾಡುವುದಿರಲಿ, ಪಾದಚಾರಿ ಮಾರ್ಗವನ್ನು ಅತಿಕ್ರಮಿಸುವುದಾಗಲಿ ಅಥವಾ ಗಿಡ, ಮರಗಳನ್ನು ಕಡಿಯುವುದಾಗಲಿ ಬಿಬಿಎಂಪಿಗೆ ತಿಳಿಸದೆ ಮಾಡುತ್ತವೆ. ಈ ಸಂಸ್ಥೆಗಳಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಿದ್ದರೂ ಕೂಡ ಅಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com