ಹೊಸಕೋಟೆ ಮೂಲದ ದಂಪತಿ ನಗರದ ವೈಟ್ ಫೀಲ್ಡ್ ನಲ್ಲಿ ನೆಲೆಸಿದ್ದು, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಮಗುವಿಗೆ ಶಕ್ತಿಹೀನತೆಗೆ ಸಂಬಂಧಪಟ್ಟಂತಹ ತೀವ್ರತರ ಕಾಯಿಲೆ ಇದ್ದು, ಯಾರಿಂದರೂ ನೆರವಿನ ಭರವಸೆ ಸಿಗದಿದ್ದಾಗ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಕೈಗೊಂಡಿದ್ದವೆವು. ಆದರೆ, ಕೊನೆಗೆ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿ ಮಗುವಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದರು. ಈ ಘಟನೆಯನ್ನು ದಂಪತಿ ವೇದಿಕೆಯಲ್ಲಿ ವಿವರಿಸಿದರು. ದಂಪತಿಯ ಸಮಸ್ಯೆಯನ್ನು ಕೇಳುತ್ತಿದ್ದ ಕುಮಾರಸ್ವಾಮಿಯವರು ಭಾವೋದ್ವೇಗಕ್ಕೊಳಕ್ಕಾಗಿ ಕಣ್ಣೀರಿಟ್ಟು ಪಕ್ಕದಲ್ಲಿಯೇ ಇದ್ದ ಮಗುವನ್ನು ಸಂತೈಸಿದರು.