ಇದೇ ವೇಳೆ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಕುರಿತು ಹೊಗಳಿಕೆಯ ಮಾತನಾಡಿದ ಜಮೀರ್ ಅವರು, ಪ್ರಜ್ವಲ್ ಅವರಲ್ಲಿ ಉತ್ತಮ ನಾಯಕತ್ವ ಗುಣಗಳಿದ್ದು, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ತಾತಾ ಮಾಜಿ ಪ್ರಧಾನಿ, ಚಿಕ್ಕಪ್ಪ ಮಾಜಿ ಸಿಎಂ ಆಗಿದ್ದರೂ ಪ್ರಜ್ವಲ್ ರೇವಣ್ಣ ಅಂಹಕಾರ ತೋರಿಸಿರಲಿಲ್ಲ. ರಾಜಕೀಯವಾಗಿ ಅವರು ಉತ್ತಮ ನಾಯಕನಾಗಿ ಬೆಳೆಯುತ್ತಾರೆ ಎಂದು ಜಮೀರ್ ಹೇಳಿದರು.